ಬೆಂಗಳೂರು: ಸುಮಲತಾ ನನ್ನ ವೈರಿ ಅಲ್ಲ ಎಂಬ ಹೆಚ್ಡಿಕೆ ಹೇಳಿಕೆಗೆ ಡಿಸಿಎಂ ಡಿಕೆ ಶಿವಕುಮಾರ್ ಗರಂ ಆಗಿದ್ದಾರೆ. ನಾನೇನು ವೈರಿಯಾ, ವಿಷ ಹಾಕಿದ್ನಾ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಸುಮಲತಾ ಆರೋಪ ವಿಚಾರಕ್ಕೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾನು ಯಾರತ್ರನೂ ಸುಮಲತಾ ಸುದ್ದಿಗೆ ಹೋಗಿಲ್ಲ, ಸುಮಲತಾ ಸುದ್ದಿ ನನಗೆ ಅವಶ್ಯಕತೆ ಇಲ್ಲ ನಾನು ವಿಷ ಹಾಕಿದ್ರು ಅಂತ ಕುಮಾರಸ್ವಾಮಿ ಗೆ ಹೇಳಿದ್ದು ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿ ನೋಡಿಕೊಂಡಂತೆ ಸುಮಲತಾ ಏಕೆ ಮಾತಾಡಬೇಕು ಎಂದು ಹೇಳಿದರು.
Electricity Bill: ವಿದ್ಯುತ್ ಬಳಕೆದಾರರಿಗೆ ಸಿಹಿ ಸುದ್ದಿ: ಪ್ರತಿ ಯೂನಿಟ್ ಮೇಲೆ 1.10 ರೂ. ಇಳಿಕೆ
ಅಂಬರೀಶ್ ಗೆ ಕಾಂಗ್ರೆಸ್ ಪಾರ್ಟಿ ಏನು ಮಾಡಿದೆ ಅಂತ ದೇಶಕ್ಕೆ ಗೊತ್ತಿದೆ, ಅಂಬರೀಶ್ ಕೊನೆ ಉಸಿರು ಏನು ಹೇಳುದ್ರು ಅಂತ ಎಲ್ಲರಿಗೂ ಗೊತ್ತಿದೆ ನಾವ್ಯಾಕೆ ಅವರ ಬಗ್ಗೆ ಮಾತಾಡೋಣ, ಅವರ್ಯಾಕೆ ತಲೆಕೆಡಿಸ್ಕೊತಿದ್ದಾರೊ ಗೊತ್ತಿಲ್ಲ ಅವರ ತಂಟೆಗೆ ಇವತ್ತು ಹೋಗಲ್ಲ, ನಾಳೆಯೂ ಹೋಗಲ್ಲ, ಅದರ ಅವಶ್ಯಕತೆ ನಮಗೆ ಇಲ್ಲ
ಅವರ ಪಾರ್ಟಿ ಸಿದ್ದಾಂತ ಏನು ಬೇಕಾದ್ರು ಮಾಡ್ಕೊಳ್ಳಲ್ಲಿ ಅವರ ಪಾರ್ಟಿ ಸಿದ್ಧಾಂತದಿಂದ ಈಚೆ ಬಂದಾಗ ಮಿಕ್ಕ ವಿಚಾರ ಮಾತಾಡೋಣ ಎಂದು ಹೇಳಿದರು.