ಮಂಗಳೂರು:– ನನ್ನ ಜೀವನದಲ್ಲಿ ಮೋದಿಯಂತಹ ಸುಳ್ಳು ಪ್ರಧಾನಿ ನೋಡಿಲ್ಲ ಎಂದು CM ಸಿದ್ದರಾಮಯ್ಯ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಮೋದಿ ಕೊಟ್ಟ ಮಾತಿನಂತೆ ಎಂದೂ ನಡೆಯಲಿಲ್ಲ. ನನ್ನ ರಾಜಕೀಯ ಜೀವನದಲ್ಲಿ ಮೋದಿಯಂತಹ ಸುಳ್ಳು ಹೇಳುವ ಪ್ರಧಾನಿಯನ್ನು ನಾನು ನೋಡಿಲ್ಲ. ಮೋದಿ ನಮ್ಮ ಗ್ಯಾರಂಟಿ ಪದವನ್ನು ಕದ್ದು ಬಿಟ್ಟಿದ್ದಾರೆ. ಈಗ ಮೋದಿ ಗ್ಯಾರಂಟಿ ಮೋದಿ ಗ್ಯಾರಂಟಿ ಎಂದು ಹೇಳುತ್ತಿದ್ದಾರೆ ಎಂದರು.
ಮಂಗಳೂರು ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಮೊದಲೇ ಪ್ಲ್ಯಾನ್ ಮಾಡಿ ಪ್ಲೆಕಾರ್ಡ್ಗಳನ್ನು ಹಿಡಿದು ಸಿದ್ಧವಾಗಿದ್ದರು. ಬಜೆಟ್ನ್ನು ಧಿಕ್ಕರಿಸಿ ಹೋಗಲು ನಿರ್ಧರಿಸಿದ್ದರು. ಯಾಕೆಂದರೆ ಅವರಿಗೆ ಸತ್ಯ ಹೇಳಿದರೆ ಮೈ ಎಲ್ಲಾ ಉರಿಯುತ್ತದೆ ಎಂದಿದ್ದಾರೆ.
ಲೋಕಸಭಾ ಚುನಾವಣೆಗಿಂತ ಮುಂಚಿತವಾಗಿ ಇದು ಮೊದಲ ಸಭೆಯಾಗಿದ್ದು, ಮಂಗಳೂರಿನಿಂದಲೇ ಆರಂಭ ಮಾಡಬೇಕು ಎಂದು ಡಿ.ಕೆ ಶಿವಕುಮಾರ್ ಹೇಳಿದ್ದರು. ಈ ಬಾರಿ ಮಂಗಳೂರು ಹಾಗೂ ಉಡುಪಿ ಲೋಕಸಭಾ ಸ್ಥಾನ ಗೆಲ್ಲಲೇ ಬೇಕು. ಮಂಗಳೂರಿನ ಜನರಿಗೆ ದೇಶದ ರಾಜ್ಯದ ರಾಜಕಾರಣ ಅರ್ಥ ಮಾಡಿಕೊಳ್ಳುವ ಶಕ್ತಿ ಇದೆ. ಕೈ ಮುಗಿದು ಕೇಳುತ್ತೇವೆ ಬಿಜೆಪಿಯನ್ನು ನಂಬಬೇಡಿ. ಬಿಜೆಪಿ ಅಧಿಕಾರಕ್ಕೆ ಬಂದರೆ ನುಡಿದಂತೆ ನಡೆಯಲ್ಲ. ಮೋದಿ ಹೇಳಿದ ಯಾವುದಾದರೂ ಭರವಸೆ ಈಡೇರಿಸಿದ್ದಾರಾ? ಧರ್ಮ ಧರ್ಮಗಳ ನಡುವೆ ಬೆಂಕಿ ಹಚ್ಚಿ ಧಾರ್ಮಿಕ ವಿಚಾರ ಜನರ ಮುಂದೆ ಇಡುತ್ತಾರೆ. ಅಚ್ಚೇ ದಿನ ಬಂತಾ ಎಂದು ಪ್ರಶ್ನಿಸಿದ್ದಾರೆ.