ರಾಮನಗರ: ಚನ್ನಪಟ್ಟಣದ ಮಹಾಜನರ ಋಣ ತೀರಿಸಲು ಬಂದಿದ್ದೇನೆ. ರಾಮನ ತಂದೆ ದಶರಥ. ಆತನ ಬಂಟ ಆಂಜನೇಯ. ಎಲ್ಲೇ ಹೋದರೂ ಆಂಜನೇಯ ಸಮಾಜ ಸೇವೆಯ ಪ್ರತೀಕ. ಆ ದೃಷ್ಟಿಯಿಂದ ಕೆಂಗಲ್ ಸ್ವಾಮಿಯ ನಿಧಿಯಿಂದ ನನ್ನ ರಾಜಕೀಯದ ಹೊಸ ಅಧ್ಯಾಯ ಶುರು ಮಾಡಲು ಬಂದಿದ್ದೇನೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.
ಕೆಂಗಲ್ ಅಂದರೆ ಕೆಂಪಗಲ್ಲು. ಇಲ್ಲಿನ ದೇವಾಲಯಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಚನ್ನಪಟ್ಟಣದ ಭಾಗವಾಗಿ ನಾನು ರಾಜಕಾರಣ ಆರಂಭಿಸಿದಾಗ ಒಂದು ಹೋಬಳಿ ಸೇರಿ ನಾಲ್ಕು ಸಲ ನನ್ನನ್ನು ಸತತವಾಗಿ ಬೆಳೆಸಿದರು. ಕ್ಷೇತ್ರ ಮರು ವಿಂಗಡಾಣೆ ಆದಾಗಾ ಕ್ಷೇತ್ರ ಬಿಟ್ಟು ಹೋಗುವಾಗ ನೋವಾಗಿತ್ತು.
Black Pepper Tea: ಕಾಳು ಮೆಣಸಿನ ಚಹಾ ಕುಡಿದಿದ್ದೀರಾ..? ಇದರ ಸೇವನೆಯಿಂದ ಸಿಗಲಿದೆ ಹಲವು ಪ್ರಯೊಜನಗಳು
ನನ್ನನ್ನು ಚನ್ನಪಟ್ಟಣದ ಜನತೆ ಪ್ರೀತಿಯಿಂದ ಕಾಣುತ್ತಾರೆ. ಎಲ್ಲಾ ಜಾತಿ ಮತ್ತು ಧರ್ಮದ ಜನರು ಇರುವ ಪ್ರಜ್ಙಾವಂತರು ಇರುವ ಕ್ಷೇತ್ರ ಇದು. ಕಳೆದ ಸಲ ನಮ್ಮ ಅಭ್ಯರ್ಥಿ ಗೆ ಕೇವಲ 16 ಸಾವಿರ ಮತ ಬಂತು. ನನಗೆ ನೊವಾಯಿತು. ಆದರೂ ಜಿಲ್ಲೆಯಲ್ಲಿ ಮೂರು ಸ್ಥಾನ ಕೊಟ್ಟು ಡಿಸಿಎಂ ಮಾಡಿದ್ದೀರಿ. ಈಗ ನಿಮ್ಮ ಮನೆ ಮಗನಾಗಿ ಋಣ ತೀರಿಸಲು ಬಂದಿರುವೆ’ ಎಂದು ಭಾವನಾತ್ಮಕ ಮಾತುಗಳನ್ನಾಡಿದ್ದಾರೆ.