ಗದಗ:- ನಾನು ಯಾವ ಪಕ್ಷದವನೂ ಅಲ್ಲ ಎಂದು ಗದಗನಲ್ಲಿ ಬಹುಭಾಷಾ ಚಿತ್ರ ನಟ ಪ್ರಕಾಶ ರೈ ಹೇಳಿಕೆ ನೀಡಿದ್ದಾರೆ.
ಸರಣಿ ಅಪಘಾತ: ದ್ವಿಚಕ್ರ ವಾಹನ ಸವಾರರಿಗೆ ಗಾಯ.. ಕಿಲೋಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್..!
ಈ ಸಂಬಂಧ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ನಾನ್ಯಾಕೆ ಓಡಾಡ್ತಿದ್ದೇನೆ. ನಾನು ಯಾವ ಪಕ್ಷದವನೂ ಅಲ್ಲ. ನಾನು ಏಳು ಭಾಷೆ ಮಾತಾಡ್ತಾರೆ ನಾಲ್ಕೈದು ಇಂಡಸ್ಟ್ರೀ ಒಳಗೆ ಕಲಾವಿದನಾಗಿ ಬೆಳೆದಿದ್ರೆ ಅದಕ್ಲೆ ಕಾರಣ ಪ್ರತಿಭೆ ಅಲ್ಲ. ಒಂದಿಷ್ಟು ಅದೃಷ್ಠ, ಬಹಳ ಜನರ ಒಡನಾಟ. ಅದೆಲ್ಲಾ ಮೀರಿ ಎಲ್ಲಾ ಜಾತಿಯ ಎಲ್ಲಾ ಭಾಷೆಯ ಜನರು ನನಗೆ ಕೊಟ್ಟಿರುವ ಪ್ರೀತಿ ನಂಬಿಕೆ. ಒಬ್ಬ ಕಲಾವಿದ ಅನ್ನೋನು ಒಂದು ಸಮಾಜದಲ್ಲಿ . ತನ್ನನ್ನು ಪ್ರೀತಿಸಿದ ಬೆಳೆಸಿದ ಸಮಾಜದಲ್ಲಿ ಆತಂಕ, ಸಮಸ್ಯೆ ಇದ್ದಾಗ. ಆ ಜನರ ಧ್ವನಿಯಾಗಿ ನಿಂತುಕೊಳ್ಳುವ ಜವಾಬ್ದಾರಿ ಅಂತಾ ನಾನು ಹೇಳ್ತೇನೆ. ನಾನು ಋಣ ತೀರಿಸಬೇಕು. ನಾನೇನು ದೊಡ್ಡ ದೊಡ್ಡ ಕೆಲಸ ಮಾಡಿಲ್ಲ,ಮಾಡಬೇಕಾದ ಕೆಲಸ ಮಾಡ್ತಿದ್ದೇನೆ ಎಂದರು.
ಇನ್ನೂ ಈ ಸಲದ ಚುನಾವಣೆ ಮುಖ್ಯವಾದ ಚುನಾವಣೆ ದೇಶದ ಚುನಾವಣೆ. ಯಾವ ಪಕ್ಷದಲ್ಲಿ ನಿಂತು ಮಾತಾಡ್ತೇನೆ ಅನ್ನೋದು ಮುಖ್ಯ ಅಲ್ಲ. ರಾಜಕೀಯ ಪ್ರಜ್ಞೆಯನ್ನ ಒಬ್ಬ ಪ್ರಜೆ ಯೋಚಿಸಬೇಕು. ನನ್ನ ಮತ್ತು ಜನರ ನಡುವಿನ ಪ್ರೀತಿಯ ಸಂಬಂಧ. ಅವರು ಕೊಟ್ಟಿರುವ ಈ ಬದುಕನ್ನ ಕೆಲವು ತಿಂಗಳ ಕಾಲ ಅವರ ಜೊತೆ ಚರ್ಚೆ ಮಾಡ್ತಾ ಹೋಗಬೇಕು ಅಂತಾ ಹೇಳಿದ್ದಾರೆ.