ಹುಬ್ಬಳ್ಳಿ: ” ನನ್ನನ್ನು ಚುನಾವಣೆಯಿಂದ ಹಿಂದೆ ಸರಿಸೋ ವ್ಯಕ್ತಿ ಭೂಮಿ ಮೇಲೆ ಹುಟ್ಟಿಲ್ಲ. ಹಿಂದೆ ಸರಿಸೋ ಉಹಾಪೋಹ ಎಲ್ಲ ಸುಳ್ಳು ಎಲ್ಲ ಪಕ್ಷಗಳೂ ನಮಗೆ ಸಮಾನ ” ಎಂದು ಶಿರಹಟ್ಟಿಮಠದ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು. ಹುಬ್ಬಳ್ಳಿ ನಗರದ ನೆಹರೂ ಮೈದಾನದಲ್ಲಿ ಮಾತನಾಡಿದ ಅವರು, ” ಯಾವುದೇ ಪಕ್ಷಗಳ ವಿಚಾರ ಮಾಧ್ಯಮಗಳ ಮೂಲಕ ತಿಳಿದಿದೆ. ಯಾವುದೇ ಪಕ್ಷಗಳ ಸೇರ್ಪಡೆ ತೀರ್ಮಾನ ನಾನು ಸ್ವತಂತ್ರವಾಗಿ ಹೇಳಲ್ಲ.
ಅಕಸ್ಮಾತ್ ಅಂತಹ ತೀರ್ಮಾನ ಬಂದ್ರೆ ನಾನು ಮತ್ತೆ ಚರ್ಚೆ ಮಾಡ್ತೀನಿ. ನನ್ನನ್ನು ಬಹುಸಂಖ್ಯಾತರು ಸಂಪರ್ಕ ಮಾಡಿದ್ದಾರೆ. ಎಲ್ಲ ವಿಚಾರಗಳು ತಲೇಲಿ ಇವೆ. ನಾನು ಸಾರ್ವಜನಿಕರ ಮುಂದಿಟ್ಟು ನಿರ್ಧಾರ ತಗೆದುಕೊಳ್ಳುತ್ತೇನೆ ” ಎಂದರು. ಜನ ಬಯಸಿರುವುದರಿಂದ ರಾಜಕೀಯಕ್ಕೆ ಬಂದಿದ್ದೇನೆ. ನಾನು ಪಕ್ಷೇತರ ಅಂತಾ ಘೋಷಣೆ ಮಾಡಿದ್ದೇನೆ. ಯಡಿಯೂರಪ್ಪನವರು ನನಗೆ ಭೇಟಿಯಾಗಿಲ್ಲ. ಏಪ್ರಿಲ್ 18 ರಂದು ನಾಮ ಪತ್ರ ಸಲ್ಲಿಸುವ ತೀರ್ಮಾನ ಮಾಡಿದ್ದೇನೆ ಎಂದು ಹೇಳಿದರು. ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವುದಾಗಿ ಘೋಷಣೆಯ ಬಳಿಕ,
ಪತ್ನಿ ತನ್ನ ಮಾಜಿ ಪತಿಗೆ ಪ್ರತಿ ತಿಂಗಳು 10 ಸಾವಿರ ರೂ. ಜೀವನಾಂಶ ನೀಡಬೇಕು: ಹೈಕೋರ್ಟ್ ಆದೇಶ
ಮೊದಲ ಬಾರಿಗೆ ಹುಬ್ಬಳ್ಳಿಗೆ ಆಗಮಿಸಿದ ಶಿರಹಟ್ಟಿಯ ಶ್ರೀ ಫಕೀರ ದಿಂಗಾಲೇಶ್ವರ ಶ್ರೀಗಳಿಗೆ ಭಕ್ತರು ಅದ್ದೂರಿಯಾಗಿ ಸ್ವಾಗತ ಮಾಡಿಕೊಂಡರು. ನಗರದ ನೆಹರು ಮೈದಾನದಿಂದ ತೆರೆದ ವಾಹನದ ಮೂಲಕ ಮೂರು ಸಾವಿರ ಮಠದವರೆಗೂ ಮೆರವಣಿಗೆ ನಡೆಸಿ ಸ್ವಾಗತ ಕೋರಿದರು. ಸ್ವಾಗತ ಮೆರವಣಿಗೆಯಲ್ಲಿ ಚಾಂಜ್ ಹಾಗೂ ಡೋಳ ಕುಣಿತ ಜೋರಾಗಿದ್ದು, ಹಲವು ಭಕ್ತರು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರ ವಿರುದ್ದ ಧಿಕ್ಕಾರ ಘೋಷಣೆ ಕೂಗಿದರು.