ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷದವರು ಸೋಲಿನ ಭಯದಿಂದ ಬರದ ರಾಜಕೀಯ ಮಾಡುತಿದ್ದಾರೆ ಎಂದು ಕೇಂದ್ರ ಸಚಿವ ಹಾಗೂ ಧಾರವಾಡ ಲೋಕಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಜೋಶಿ ಹೇಳಿದರು. ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು. ರಾಜ್ಯದಲ್ಲಿ ಬರ ತಾಂಡವ ಆಡುತಿದ್ದು ಸರ್ಕಾರ ಸುಳ್ಳು ಹೇಳುವನ್ನ ವ್ಯವಸ್ಥಿತವಾಗಿ ಮಾಡತಾ ಇದೆ.ಈ ಹಿಂದೆ ಕೇಂದ್ರ ಸರ್ಕಾರದ ಯುಪಿಎ ಇದ್ದಾಗ ಎಷ್ಟು ಬಂತು ಈಗ ನಾವು ಎನ್ ಡಿಎ ಇದ್ದಾಗ ಎಷ್ಟು ಬಂತು ಅಂತಾ ಅಂಕಿ ಸಮೇತ ಕೊಟ್ಟಿದ್ದೇವೆ ಎಂದರು.
ಇನ್ನು ಕೇಂದ್ರ ಸರ್ಕಾರ ಎಷ್ಟು ಅನುದಾನ ಕೊಟ್ಟಿದೆ ಅಂತಾ ಬಹಿರಂಗ ಸವಾಲನ್ನು ಮುಖ್ಯಮಂತ್ರಿ ಸಿದ್ದರಾಮಯ್ಯಾ ನವರು ಹಾಕಿದ್ದು ನೋಡದೆ ಆದರೆ ಈ ಹಿಂದೇನೆ ಹಣಕಾಸು ಸಚಿವೆ ನಿರ್ಮಲಾ ಸಿತಾಮಾಮನ್ ಅವರು ಅಂಕಿಸಂಖ್ಯೆ ಸಮೇತ ಕೊಟ್ಟಿದ್ದಾರೆ ಎಂದರು. ಯಾವುದೇ ಅನ್ಯಾಯ ಆಗಿಲ್ಲ.ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಂಸಾರ ಇಲ್ಲ ಇನ್ನೊಬ್ಬರು ಕೊಪ್ಪಕ್ಕಾಳಕ್ಕೆ ಹೊಡಿ ಅಂತಾರೆ. ಆದರೆ ಇದೊಂದು ಸುಸಂಸ್ಕರ ಲಕ್ಷಣ ಅಲ್ಲ.ಆದ್ದರದ ಈಗ ಅದು ಅತೀರೇಕವಾಗಿದೆ. ನಾನು ಕೇಳತಾ ಇದ್ದೇನೆ ತಮ್ಮ ಕೈಯಲ್ಲಿ ಎಷ್ಟು ಶಕ್ತಿ ಇದೆ ಅದನ್ನ ತೋರಿಸಿ ಬಿಡಿ ಎಂದರು