ಬೆಂಗಳೂರು: ಚಿಕ್ಕಪೆದ್ದಣ್ಣ ಟಿಕೆಟ್ ಬೇಡ ಎಂದಿದ್ದಕ್ಕೆ ನನಗೆ ಸಿಕ್ಕಿದ್ದಲ್ಲ ಪಕ್ಷವೇ ಗುರುತಿಸಿ ಅವಕಾಶ ಕೊಟ್ಟಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಗೌತಮ್ ಹೇಳಿದ್ದಾರೆ.
Lok Sabha Election 2024: ಕರ್ನಾಟಕದಲ್ಲಿ ಚುನಾವಣೆ ನಡೆಯುವ ದಿನ ಸಾರ್ವತ್ರಿಕ ರಜೆ ಘೋಷಣೆ!
ಕೋಲಾರ ಕೆಪಿಎಸ್ಸಿ ಕಚೇರಿಯಲ್ಲಿ ಮಾತನಾಡಿದ ಅವರು,ಕೋಲಾರ ಕ್ಷೇತ್ರಕ್ಕೆ ಚಿಕ್ಕಪೆದ್ದಣ್ಣ ಟಿಕೆಟ್ ಬೇಡ ಎಂದಿದ್ದಕ್ಕೆ ನಮಗೆ ಸಿಕ್ಕಿದ್ದಲ್ಲ.ಪಕ್ಷವೇ ಗುರುತಿಸಿ ಅವಕಾಶ ನೀಡಿದೆ.ಕ್ಷೇತ್ರ ಕೂಡ ಹೊಸದಲ್ಲ ಯುವ ಕಾಂಗ್ರೆಸ್ಅ ಧ್ಯಕ್ಷರಾಗಿದ್ದಾಗಿನಿಂದಲೂ ಕ್ಷೇತ್ರದಲ್ಲಿ ಸಂಘಟನೆಯಲ್ಲಿ ತೊಡಗಿದ್ದೇನೆ. ಈಗ ಪಕ್ಷದ ಅಭ್ಯರ್ಥಿ ಯಾಗಿದ್ದೇನೆ.ಎಲ್ಲರನ್ನು ಒಟ್ಟಾಗಿ ಕರೆದೊಯ್ಯುತ್ತೇನೆ. ಎಲ್ಲರ ಜತೆ ಮಾತುಕತೆ ನಡೆಸಿ ಬಗೆಹರಿಸಿಕೊಳ್ತೇನೆ. ಹಿರಿಯರು,ಕಿರಿಯರು,ಎಲ್ಲರ ಜತೆ ಚೆರ್ಚೆ ನಡೆಸುತ್ತೇನೆ ಎಂದರು.
ನಾನು ಪಕ್ಷದ ಅಭ್ಯರ್ಥಿ ಯಾವುದೋ ಬಣದ ಅಭ್ಯರ್ಥಿ ಅಲ್ಲ. ನನಗೆ ಮುನಿಯಪ್ಪ ಬಣ,ರಮೇಶ್ ಕುಮಾರ್ ಬಣ,ಡಿ.ಕೆ.ಶಿವಕುಮಾರ್, ಸಿಎಂ ಸಿದ್ದರಾಮಯ್ಯ ಎಲ್ಲರದ್ದೂ ಬೆಂಬಲ ವಿಶ್ವಾಸದಿಂದ ಕೆಲಸ ಮಾಡುತ್ತೇನೆ.
ಕೋಲಾರ ಕ್ಷೇತ್ರ್ ಬಗ್ಗೆ ಹಲವು ಕನಸುಗಳಿವೆ ಅದನ್ನೆಲ್ಲಾ ಸಾಧ್ಯವಷ್ಟು ಪೂರೈಸುವ ಕೆಲಸ ಮಾಡ್ತೇನೆ ಎಂದ ತಿಳಿಸಿದ್ದರು.