ಬಾಗಲಕೋಟೆ: ಸತ್ಸಂಗದಲ್ಲಿ ಕಾಲ ಕಳೆದರೆ ಮಾತ್ರ ಮಾನವ ಜನ್ಮ ಸಾರ್ಥಕವಾಗುತ್ತದೆ,ಮಾನವ ಜನ್ಮ ಎಂಬುದು ಬಹಳ ದೊಡ್ಡದು ಆದ್ದರಿಂದ ಪ್ರತಿಯೊಬ್ಬರು ಪುರಾಣ,ಪ್ರವಚನ,ಆಧ್ಯಾತ್ಮದಲ್ಲಿ ತೊಡಗಿಕೊಳ್ಳುವದರಿಂದ ಜನ್ಮ ಸಾರ್ಥಕವಾಗುತ್ತದೆ ಎಂದು ಪ್ರವಚನ ಪಟು ಬಸಯ್ಯ ಸ್ವಾಮಿಗಳು ಹೇಳಿದರು,
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ನಾವಲಗಿ ಗ್ರಾಮದ ಶ್ರೀ ನೀಲಕಂಠೇಶ್ವರ ಮಠದಲ್ಲಿ ಜಗದ್ಗುರು ಶ್ರೀ ಶಂಕರ ಶಿವಾಚಾರ್ಯ ಸ್ವಾಮೀಜಿ ಅವರ ಜೀವನ ಚರಿತ್ರೆಯ ಕುರಿತು ಪ್ರವಚನಕ್ಕೆ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು,
ಶ್ರೀ ಶಂಕರ ಶಿವಾಚಾರ್ಯ ಸ್ವಾಮೀಜಿಯವರ ಪಾದ ಸ್ಪರ್ಶದಿಂದ ನಮ್ಮ ಗ್ರಾಮವು ಪಾವನವಾಗಿದೆ ಅವರು ಮಾಡಿರುವ ಪವಾಡಗಳು ಅನೇಕಗಳಿವೆ ಇಂತಹ ಮಹಾತ್ಮರನ್ನು ಪಡೆದ ನಮ್ಮ ಗ್ರಾಮವು ಧನ್ಯ ಎಂದರು, ಇಂದಿನ ಪೀಳಿಗೆಗೆ ಇಂತಹ ಮಹಾತ್ಮರ ಚರಿತಾಮೃತಗಳನ್ನು ತಿಳಿಸುವುದು ನಮ್ಮೆಲ್ಲರ ಕರ್ತವ್ಯ ಆದ್ದರಿಂದ ಇಂದಿನ ಯುವ ಪೀಳಿಗೆಯು ಧಾರಾವಾಹಿ,ಸಿನಿಮಾ ಹಾಗೂ ಮೊಬೈಲ್ ನಿಂದ ದೂರವಿದ್ದು ಮಹಾತ್ಮರ ಚರಿತಾಮೃತಗಳನ್ನು ತಿಳಿದುಕೊಳ್ಳಬೇಕು ಎಂದು ಬಸಯ್ಯ ಸ್ವಾಮಿಗಳು ಹೇಳಿದರು,
ಇದೇ ಸಂದರ್ಭದಲ್ಲಿ ಹಿರಿಯರಾದ ಶಿವನಪ್ಪ ಹಳ್ಳಿ,ಚಿನ್ನಪ್ಪ ಸಂಗಾನಟ್ಟಿ ಮಹಾಲಿಂಗ ಯಡಪ್ಪನವರ,ರಾಜು ಕಂಪು,ಗ್ರಾಪಂ ಸದಸ್ಯ ದಾನಪ್ಪ ಆಸಂಗಿ, ಮಲ್ಲಪ್ಪ ಗಂಗಾವತಿ,ಆನಂದ ಕಂಪು, ಶ್ರೀಶೈಲ ಹಳ್ಳಿ,ಮಹೇಶ ಚಿಂಚಖಂಡಿ,ಮಹೇಶ ಕಂಪು,ಮಹಾದೇವ ಮುಂಡಗನೂರ,ಮಹಾಂತೇಶ ಮನ್ಮಿ ಪತ್ರಕರ್ತ ಕಾಡೇಶ ಕಂಪು,ಸಿದ್ದು ಸಣಪೇಟೆ,ಮಂಜುನಾಥ ಚಿಂಚಖಂಡಿ,ಸೋಮು ಕತ್ತಿ ಮಹಾಂತೇಶ ಅಮ್ಮಲ್ಲಜೇರಿ ಸೇರಿದಂತೆ ಅನೇಕ ಹಿರಿಯರು ಉಪಸ್ಥಿತರಿದ್ದರು
ಪ್ರಕಾಶ ಕುಂಬಾರ
ಬಾಗಲಕೋಟೆ