ಗದಗ: ಸಾಮಾಜಿಕ ಕಾರ್ಯಕರ್ತ ದೇವು ಹಡಪದ ಅವರ 44ನೇ ಜನ್ಮದಿನ ನಿಮಿತ್ಯ ಅವರ ಅಭಿಮಾನಿಗಳು ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಗದಗ ನಗರದಲ್ಲಿರೋ ಬಸವೇಶ್ವರ ರಕ್ತ ಕೇಂದ್ರದ ಸಹಕಾರದಲ್ಲಿ ಜುಲೈ 1 ರಂದು ಬೆಳಗ್ಗೆ 10:30ಕ್ಕೆ ಮುಂಡರಗಿಯ ಕೆಇಬಿ ಬಳಿಯ ಶಿವು ಲಕ್ಕಿ ಮೆನ್ಸ್ ಪಾರ್ಲರ್ ಹತ್ತಿರ ಬೃಹತ್ ರಕ್ತದಾನ ಶಿಬಿರ ಪತ್ರಿಕಾ ದಿನಾಚರಣೆ, ವೈದ್ಯರ ದಿನಾಚರಣೆ, ಪರಿಸರ ದಿನಾಚರಣೆ ಆಯೋಜಿಸಲಾಗಿದೆ ಎಂದು ಜಾನಪದ ಕಲಾವಿದರಾದ ಶಿವು ವಾಲಿಕಾರ್, ಈರಣ್ಣ ಹಡಪದ ತಿಳಿಸಿದರು.
ವಾಲ್ಮೀಕಿ ನಿಗಮದ ಅಕ್ರಮ ಹಿಂದೆ ಸರ್ಕಾರದ ಕೈವಾಡ ಇದೆ – ಕಾರಜೋಳ!
ಜ.ಡಾ.ಅನ್ನದಾನೀಶ್ವರ ಸ್ವಾಮಿಗಳು, ನಿಜಗುಣಪ್ರಭು ತೋಂಟದಾರ್ಯ ಸ್ವಾಮಿಜಿಗಳು, ವೀರೇಶ್ವರ ಪುಣ್ಯಾಶ್ರಮದ ಪೂಜ್ಯ ಶ್ರೀ ಕಲ್ಲಯ್ಯಜ್ಜನವರು, ಅನ್ನದಾನಿ ಭಾರತಿ ಅಪ್ಪಣ್ಣ ಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಶಾಸಕ ಡಾ.ಚಂದ್ರು ಲಮಾಣಿ ಉದ್ಘಾಟಿಸುವರು. ಭರತ ಕುಮಾರ್ ಬಸವರಾಜ್ ಬೊಮ್ಮಾಯಿ ಉಪಸ್ಥಿತಿಯಲ್ಲಿ ಕಾರ್ಯಕ್ರಮವನ್ನು ಪುರಸಭೆ ಸದಸ್ಯ ಲಿಂಗರಾಜಗೌಡ ಉದ್ಘಾಟಿಸುವರು. ಪುಟ್ಟರಾಜ ಸೇವಾ ಸಮಿತಿ ಅಧ್ಯಕ್ಷ ನಾಗರಾಜ್ ಮುಖ್ಯ ಅಧ್ಯಕ್ಷತೆ ವಹಿಸುವರು. ಈರಣ್ಣ ಹಡಪದ ಸಸಿ ವಿತ್ತರಿಸುವರು. ಪಾರ್ವತಮ್ಮ ಹಡಪದ, ಸುರೇಶ ಹಡಪದ, ಶಿವಾನಂದ ನೇತೃತ್ವ ವಹಿಸುವರು. ಸುದ್ದಿಗೋಷ್ಠಿಯಲ್ಲಿ ದೇವು ಹಡಪದ, ನಾಗರಾಜ ಮುಖ್ಯೆ, ಮೌನೇಶ್ ಬಡಿಗೇರ್, ಈರಣ್ಣ ಹಡಪದ, ಶರಣಪ್ಪ, ರಾಮಣ್ಣ ತಿಪ್ಪಣ್ಣವರ್, ಪ್ರಮೋದ್ ನಾಡಗೌಡರು ಉಪಸ್ಥಿತರಿದ್ದರು.
![](https://ainlivenews.com/wp-content/uploads/2024/01/Ad-Banner-copy-scaled.jpg)