ಹುಬ್ಬಳ್ಳಿ : ನಗರದಲ್ಲಿಂದು ಕೆ.ಎಲ್.ಇ ಔಷಧ ವಿಜ್ಞಾನ ಮಹಾವಿಧ್ಯಾಲಯದ ಫಾರ್ಮಕಾಲಜಿ ವಿಭಾಗದ ಸಹಯೋಗದಲ್ಲಿ “ಎನಹ್ಯಾನ್ಸಿಂಗ್ ನೀಯೊಸರ್ಜಿಕಲ್ ಸ್ಟೀಲ್ಸ್: ಲೇವರೆಜೀಂಗ್ ಅನೀಮಲ್ ಮೊಡಲ್ಸ್ ಪಾರ್ ನಿಯೋಡಿಜನೇರೆಟಿವ್ ಡಿಸ್ಆರ್ಡಸ್್ರ” ಎಂಬ ವಿಷಯದ ಮೇಲೆ ಒಂದು ದಿನದ ಕಾರ್ಯಗಾರ ಜರುಗಿತು. ಬಾಗಲಕೋಟೆಯ ಬಿವಿವಿ ಸಂಸ್ಥೆಯ ಹಾನಗಲ್ ಶ್ರೀ ಕುಮಾರೇಶ್ವರ್ ಔಷಧ ವಿಜ್ಞಾನ ಮಹಾವಿದ್ಯಾಲಯದ ಹಿರಿಯ ಪ್ರಾಧ್ಯಾಪಕ ಡಾ.ಮಲ್ಲಪ್ಪ ಶಲವಡಿ ಕಾರ್ಯಗಾರವನ್ನು ಉದ್ಘಾಟಿಸಿ ಔಷಧೀಯ ಕ್ಷೇತ್ರದಲ್ಲಿ ಪ್ರಾಣಿಗಳ ಮೇಲಿನ ವಿವಿಧ ಸಂಶೋಧನೆಗಳಿಗೆ ಬೇಕಾದ ಉಪಕ್ರಮಗಳ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು.
ಕಾರ್ಯಗಾರದ ಅಧ್ಯಕ್ಷತೆಯನ್ನು ವಹಿಸಿದ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಎ.ಎಚ್.ಎಮ್ ವಿಶ್ವನಾಥ ಸ್ವಾಮಿ ಔಷಧಿಯ ಕ್ಷೇತ್ರದಲ್ಲಿ ಪ್ರಾಣಿಗಳ ಬಳಕೆ ಮತ್ತು ಅವುಗಳ ಮೇಲಿನ ಸಂಶೋಧನೆಗಳಲ್ಲಿ ಅನುಸರಿಸಬೇಕಾದ ನೀತಿ, ನಿಯಮಗಳು ಮತ್ತು ತರಬೇತಿಗಳ ಬಗ್ಗೆ ಮಾತನಾಡಿದರು. ಕಾರ್ಯಗಾರದ ಮುಖ್ಯ ಸಂಯೋಜಕರಾದ ಡಾ.ಎನ್.ಎಮ್.ಜೆಡಿ ಫಾರ್ಮಕಾಲಜಿ ವಿಭಾಗದಲ್ಲಿ ಸದ್ಯ ಚಾಲನೆಯಲ್ಲಿರುವ ಸಂಶೋಧನೆಗಳು ಮತ್ತು ಸಹಭಾಗಿತ್ವದ ಬಗ್ಗೆ ವಿವರಿಸಿದರು.
40 ವರ್ಷ ದಾಟಿದ ಪುರುಷರು ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ ಗೊತ್ತಾ..?
ಸಹ ಸಂಯೋಜಕರಾದ ಡಾ.ಎಸ್.ಕೆ.ನಿಂಬಾಳ ಡಾ.ಸಂತೋಷ.ಬಿ.ಪಾಟೀಲ್ ಕಾರ್ಯಗಾರದ ಮೂಲ ವಿಷಯದ ಸಂಕ್ಷಿಪ್ತ ವಿವರಣೆ ನೀಡಿದರು. ಕಾರ್ಯಗಾರದ ಸದಸ್ಯರಾದ ಡಾ.(ಶ್ರೀಮತಿ.)ಲಕ್ಷ್ಮೀ.ವಿ.ಪಟ್ಟಣಶೆಟ್ಟಿ ಮತ್ತು ಶ್ರೀಮತಿ.ನೇಹಾ.ಮಾಳಿ ಕಾರ್ಯಗಾರವನ್ನು ನಿರೂಪಿಸಿದರು. ರಾಜ್ಯದ ವಿವಿಧ ಮಹಾವಿದ್ಯಾಲಯಗಳಿಂದ ಸುಮಾರು 50 ಜನ ಸಂಶೋಧಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು ಮತ್ತು ಮಹಾವಿದ್ಯಾಲಯದ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.