ಹುಬ್ಬಳ್ಳಿ : ಕರ್ನಾಟಕದಲ್ಲಿ ಸಾಬರ ಸರ್ಕಾರ ಹೋಗಬೇಕು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಆಗ್ರಹ ಮಾಡಿದರು..ಭಾಷಣ ಮುಗಿಸಿ ಅಮಿತ್ ಶ ತೆರಳಿದ ನಂತರ ಭಾಷಣ ಆರಂಭಿಸಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರು, ಕರ್ನಾಟಕದಲ್ಲಿ ಸಾಬರ ಸರ್ಕಾರವಿದ್ದು, ಈ ಸಾಬರ ಸರ್ಕಾರ ಹೋಗಬೇಕು. ಇವರಿಗೆ ಒಂದೇ ಒಂದು ಉತ್ತರ ಜೆಸಿಬಿ, ಎನ್ಕೌಂಟರ್ ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಬೇಕು ಲೋಕಸಭಾ ಚುನಾವಣೆ ಮುಗಿದ ನಂತರ ಈ ಸರ್ಕಾರ ಇರಲ್ಲ ಸಿಂಯಸಿದ್ದರಾಮಯ್ಯನವರನ್ನು ಕೆಳಗಿಳಿಸಲು ಡಿ.ಕೆ. ಶಿವಕುಮಾರ್ ಆ್ಯಂಡ್ ಕಂಪನಿ ಪ್ರಯತ್ನಿಸುತ್ತಿದೆ
ನೇಹಾ ಮನೆಗೆ ಅಮಿತ್ ಶಾ ಭೇಟಿ.. ಮಗಳ ಹತ್ಯೆ ಪ್ರಕರಣದಲ್ಲಿ ಗೃಹ ಸಚಿವರಿಗೆ ನ್ಯಾಯ ಕೋರಿದ ತಂದೆ.!
ಈ ಸರ್ಕಾರ ಬೀಳುತ್ತೆ, ರಾಜ್ಯದಲ್ಲಿ ಮತ್ತೊಮ್ಮೆ ಚುನಾವಣೆ ಆಗುತ್ತೆ. ನಿಮ್ಮೆಲ್ಲರ ಆಶೀರ್ವಾದ ಇದ್ದರೆ ಬುಲ್ಡೋಜರ್ ಬಾಬಾ ತರದವರು ಸಿಎಮ್ ಆಗುತ್ತಾರೆ. ಈ ಬಾರಿ ಮತ್ತೆ ಉತ್ತರ ಕರ್ನಾಟಕದ ಮುಖ್ಯಮಂತ್ರಿ ಆಗುತ್ತಾರೆ ಯಾರು ಏನೇ ಲಾಗಾ ಹೊಡೆದರೂ ಏನೂ ಆಗಲ್ಲ. ಮುಸ್ಲೀಮರ ಮೀಸಲಾತಿಯನ್ನು ತೆಗೆಯುತ್ತೇವೆ ಅಂತ ಅಮಿತ್ ಶಾ ಹೇಳಿದ್ದಾರೆ ಎಸ್ಸಿ, ಎಸ್ಟಿ, ಲಿಂಗಾಯಿತರಿಗೆ ಮೀಸಲಾತಿ ಹಂಚಿಕೊಡುತ್ತೇವೆ ಅಂತ ಹೇಳಿದ್ದಾರೆ
ಧಾರವಾಡದಲ್ಲಿ ಲಿಂಗಾಯತ, ಲಿಂಗಾಯತ ಅಂತ ಹೇಳುತ್ತಿದ್ದವರು ಈಗ ಮನೆಗೆ ಹೋಗಿದ್ದಾರೆ
ಒಬ್ಬ ನಾಮಪತ್ರ ಹಿಂದೆ ತೆಗೆದುಕೊಂಡಿದ್ದಾನೆ. ಈಗ ಜೋಶಿಯವರನ್ನು ಆಶೀರ್ವಾದ ಮಾಡುತ್ತೇನೆ ಬನ್ನಿ ಅಂತ ಕರೆಯುತ್ತಿದ್ದಾನೆ ಎಂದು ದಿಂಗಾಲೇಶ್ವರ ಸ್ವಾಮೀಜಿ ಹೆಸರು ಪ್ರಸ್ತಾಪಿಸದೆ ವಾಗ್ದಾಳಿ ಮಾಡಿದರು.
ನಮಗೆ ಬೇಕಾಗಿದ್ದು ಹಿಂದೂ ರಾಷ್ಟ್ರ ಸಾಬರನ್ನ ಕಿತ್ತು ಹಾಕಲು ನಮ್ಮ ರಾಷ್ಟ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಆಗಬೇಕು ಕರ್ನಾಟಕದಲ್ಲಿ ಬುಲ್ಡೋಜರ್ ಬಾಬಾ ತರುತ್ತೇವೆ, ಅದಕ್ಕೆ ನಿಮ್ಮ ಆಶೀರ್ವಾದ ಇರಬೇಕು ಎಂದರು
![](https://ainlivenews.com/wp-content/uploads/2024/01/Ad-Banner-copy-scaled.jpg)