ಹುಬ್ಬಳ್ಳಿ: ಕಿಮ್ಸ್ ವೈದ್ಯ ರಾಮಲಿಂಗಪ್ಪ ಅಂಟರತಾನಿ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ ತೆರೆದಿರುವ ಅಪರಿಚಿತ ವ್ಯಕ್ತಿಗಳು, ಸೊಲಾಪುರದ ಡಾ.ಎಸ್.ಪಿ.ಸರದೇಸಾಯಿ ಎಂಬುವರಿಂದ ₹60 ಸಾವಿರ ಪಡೆದು ವಂಚಿಸಿದ ಬಗ್ಗೆ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಕಲಿ ಖಾತೆಯ ಡಿಪಿಗೆ ರಾಮಲಿಂಗಪ್ಪ ಅವರ ಭಾವಚಿತ್ರ ಹಾಕಿರುವ ಆರೋಪಿಗಳು, ಹಣಕ್ಕೆ ಬೇಡಿಕೆ ಇಟ್ಟು ಪೋಸ್ಟ್ ಮಾಡಿದ್ದಾರೆ. ಇದನ್ನು ನಂಬಿರುವ ಎಸ್.ಪಿ.ಸರದೇಸಾಯಿ ಅವರು ಫೋನ್ಪೇ ಮೂಲಕ ಹಣ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.