ಹುಬ್ಬಳ್ಳಿ: ಇಲ್ಲಿಯ ಸ್ಟೇಶನ್ ರಸ್ತೆ ದಿಗಂಬರ ಜೈನ್ ಬೋರ್ಡಿಂಗ್ ಹಾಗೂ ಬ್ರಾಹ್ಮಿಲಾ ಮಹಿಳಾ ಪರಿಷತ್ ವತಿಯಿಂದ ಜು. ೨೮ ರಂದು ಮಧ್ಯಾಹ್ನ ೧ ಗಂಟೆಗೆ ೧೦೮ ಪುಣ್ಯಸಾಗರ ಮುನಿಮಹಾರಾಜರ ೨೮ ನೇ ವರ್ಷ ಚಾತುರ್ಮಾಸ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಬೋರ್ಡಿಂಗ್ ಅಧ್ಯಕ್ಷ ವಿದ್ಯಾಧರ ಪಾಟೀಲ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಾತುರ್ಮಾಸ್ ದಲ್ಲಿ ಕಳಸ ಸ್ಥಾಪನೆ ವಿಧಿ ವಿಧಾನಗಳಿಂದ ಮಾಡಲಾಗುತ್ತಿದೆ. ಚಾತುರ್ಮಾಸ್ ಸಮಾರಂಭ ೨೮ ನೇ ಬಾರಿ ಮಾಡಲಾಗುತ್ತಿದ್ದು, ೨೮ ಕಳಸ ಸ್ಥಾಪನೆ ಮಾಡಲಿದ್ದಾರೆ ಎಂದರು.
ಇದೊಂದು ವಿಶೇಷ ಸಮಾರಂಭವಾಗಿದೆ. ದಿವ್ಯ ಸಾನಿಧ್ಯ ಹೊಂಬಜಿಯ ಡಾ. ದೇವೇಂದ್ರಕೀರ್ತಿ ಸ್ವಾಮೀಜಿ, ವರೂರಿನ ಧರ್ಮಸೇನ ಭಟ್ಟಾರಕರು,ಸೋಂದಾದ ಭಟ್ಟಾಕಲಂಕ ಭಟ್ಟಾರಕ, ಎನ್.ಆರ್. ಪುರದ ಲಕ್ಷ್ಮೀಸೇನ ಭಟ್ಟಾರಕ, ಕೊಲ್ಲಾಪುರದ ಲಕ್ಷ್ಮೀಸೇನಾ ಭಟ್ಟಾರಕ ವಹಿಸಲಿದ್ದಾರೆ ಎಂದು ಹೇಳಿದರು.
ಚಾತುರ್ಮಾಸದ ನಾಲ್ಕು ತಿಂಗಳ ಪ್ರವಚ, ಧರ್ಮ ಪ್ರಚಾರ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮ ಗಳು ನಡೆಯಲಿವೆ. ಬೇರೆ ಬೇರೆ ಶ್ರಾವಕರ ಜೊತೆ ಧರ್ಮದ ಕುರಿತು ಚರ್ಚೆ ಮಾಡುತ್ತಾರೆ. ಜು. ೨೮ ರಂದು ಮಧ್ಯಾಹ್ನ ೧ ಗಂಟೆಗೆ ಸಾರ್ವಜಿಕರಿಗೆ ಪ್ರವಚ ನಡೆಯಲಿದೆ. ರಾಜ್ಯ ಹಾಗೂ ವಿವಿಧ ರಾಜ್ಯಗಳಿಂದ ಸುಮಾರು ೩ ಸಾವಿರ ಜೈನ ಧರ್ಮದ ಹಾಗೂ ವಿವಿಧ ಧರ್ಮದವರು ಸಹ ಭಾಗಹಿಸಲಿದ್ದಾರೆ ಎಂದು ತಿಳಿಸಿದರು.
ಬೋರ್ಡಿಂಗ್ ಉಪಾಧ್ಯಕ್ಷ ಆರ್.ಟಿ. ತಬಕನವರ, ಪ್ರಶಾಂತ ಶೆಟ್ಟಿ, ದೇವೇಂದ್ರ ಕಾಗೇನವರ, ಇದ್ದರು.