ಕಲಬುರಗಿ: ಸಿಎಂ ಸಿದ್ದರಾಮಯ್ಯ ರಾಜ್ಯವನ್ನು ಸಾಲದ ಸುಳಿಗೆ ಸಿಲುಕಿಸುತ್ತಿದ್ದಾರೆ. ಇವರ ಸರ್ಕಾರ ಅಧಿಕಾರಿಗಳಿಗೆ ಸ್ಯಾಲರಿ ಕೊಡೊಕೆ ಆಗ್ತಿಲ್ಲ ಬರೀ ಸಾಲ ಸಾಲ ಹೀಗೆ ಸಾಲ ಮಾಡಿ ತುಪ್ಪ ತಿಂದ್ರೆ ಸಾಲ ತೀರಿಸೋದು ಹೇಗೆ ಅಂತ ಬಿಜೆಪಿ ವಕ್ತಾರ ಪಿ.ರಾಜೀವ್ ಹೇಳಿದ್ದಾರೆ. ಕಲಬುರಗಿಯಲ್ಲಿಂದು ಮಾತನಾಡಿದ ರಾಜೀವ್,
ಗ್ಯಾರಂಟಿ ಯೋಜನೆಗಳಿಗೆ ಫುಲ್ ಫೀಲ್ ಮಾಡೊಕೆ ಇವರಿಂದ ಸಾಧ್ಯವಾಗುತ್ತಿಲ್ಲ ಅಂದ್ರು. ನೋಡ್ತಿರಿ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಸಿಟ್ ಬಿಜೆಪಿ ಪಾಲಾಗೊದು ಪಕ್ಕಾ ಕಾಂಗ್ರೆಸ್ ನವರ ಆಟ ಮುಂದೆ ನಡೆಯೊದಿಲ್ಲ ಅಂತ ಕಾಂಗ್ರೆಸ್ ನಾಯಕರಿಗೆ ಗುದ್ದು ಕೊಟ್ರು..