ವಿಜಯಪುರ: ದೂರುದಾರ ಸ್ನೇಹಮಯಿ ಕೃಷ್ಣಗೆ ರಕ್ಷಣೆ ಕೊಡಲು ನಾವು ಬದ್ಧ ಎಂದು ಸಚಿವ ಎಂ.ಬಿ ಪಾಟೀಲ ಹೇಳಿದರು.ಜಿಲ್ಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯರನ್ನು ಅರೆಸ್ಟ್ ಮಾಡಲು ಸ್ನೇಹಮಯಿ ಕೃಷ್ಣ ಆಗ್ರಹಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಬಂಧನ ಯಾಕೆ ಆಗಬೇಕು. ದೂರುದಾರರಿಗೆ ರಕ್ಷಣೆ ಕೊಡಲು ನಮ್ಮಲ್ಲಿ ಇದ್ದಾರೆ. ಆ ರೀತಿ ಸಿದ್ದರಾಮಯ್ಯ ಆಗಲಿ ಅಥವಾ ಬೇರೆಯಾರೇ ಆಗಲಿ ನಮ್ಮಲ್ಲಿ ಮಾಡುವುದಿಲ್ಲ. ನಿರ್ಭೀತಿಯಿಂದ ಅವರು ಇರಬಹುದು ಎಂದು ಪ್ರತಿಕ್ರಿಯಿಸಿದರು.
ಇದೇ ವೇಳೆ ಖರ್ಗೆ ಕುಟುಂಬ ಸಿಎ ಸೈಟ್ ವಾಪಸ್ ನೀಡಿರುವ ವಿಚಾರವಾಗಿ ಮಾತನಾಡಿ, ನಾನು ದೇಶದಲ್ಲಿ ಇರಲಿಲ್ಲ. ಬೆಂಗಳೂರಿಗೆ ಹೋಗಿಲ್ಲ. ಸಿದ್ದಾರ್ಥ ವಿಹಾರ ಟ್ರಸ್ಟ್ನ ಸಿಎ ಸೈಟ್ ವಾಪಸ್ ನೀಡಿದ್ದರ ಬಗ್ಗೆ ನನಗೆ ಗೊತ್ತಿಲ್ಲ, ನಾನು ಅಮೇರಿಕಾದಿಂದ ನೇರವಾಗಿ ವಿಜಯಪುರ ಬಂದಿದ್ದೇನೆ. ನಾನು ಬೆಂಗಳೂರು ಹೋದ ನಂತರ ನೋಡುತ್ತೇನೆ. ಗೊತ್ತಿರದ ವಿಷಯದ ಕುರಿತು ನಾನು ಹೇಗೆ ಮಾತನಾಡಲಿ ಎಂದು ಪ್ರಶ್ನಿಸಿದ್ದಾರೆ.
ಭಾರತೀಯ ಆಹಾರ ನಿಗಮದಲ್ಲಿದೆ ಭರ್ಜರಿ ಉದ್ಯೋಗವಕಾಶ.! ತಿಂಗಳಿಗೆ ₹ 71,000 ಸಂಬಳ – ಇಂದೇ ಅರ್ಜಿ ಸಲ್ಲಿಸಿ
ಗೌರಿ ಲಂಕೇಶ್ ಹತ್ಯೆ ಕೇಸ್ ಆರೋಪಿಗಳಿಗೆ ಸನ್ಮಾನ ಮಾಡಿದ್ದು ಅತ್ಯಂತ ಕೆಟ್ಟ ಕೆಲಸ. ಸನ್ಮಾನ ಮಾಡಿದ್ದಾರೆ ಎಂಬುದನ್ನು ನಾನು ನೋಡಿದ್ದೇನೆ. ಈ ರೀತಿ ಉಮೇಶ ವಂದಾಲ ಆಂಡ್ ಕಂಪನಿ ಎಂಬುವವರು ಮಾಡಿದ್ದಾರೆ. ಯಾರು ಸ್ವಾಗತ ಮಾಡಿ, ಸನ್ಮಾನ ಮಾಡಿದ್ದಾರೆ ಅವರು ಅರಿತುಕೊಳ್ಳಬೇಕು. ಯಾರ ಜೀವವನ್ನು ತಗೆದುಕೊಳ್ಳಲು ಯಾರಿಗೂ ಹಕ್ಕಿಲ್ಲ ಎಂದರು.