ಸಕ್ಕರೆ ನಾಡು ಮಂಡ್ಯದಿಂದ ಮಾಜಿ ಸಿಎಂ ಕುಮಾರಸ್ವಾಮಿ ಲೋಕಸಭಾ ಅಖಾಡಕ್ಕೆ ಇಳಿಯೋದು ಖಚಿತವಾಗುತ್ತಿದ್ದಂತೆ ಕಾಂಗ್ರೆಸ್ ನಾಯಕರು ಮತ್ತಷ್ಟು ಆಕ್ಟೀವ್ ಆಗಿದ್ದಾರೆ. ಚುನಾವಣೆ ಗೆಲ್ಲೋದಕ್ಕೆ ರಣತಂತ್ರ ಎಣೆಯುತ್ತಿದ್ದು, ಭಾವನಾತ್ಮಕವಾಗಿ ಮತದಾರರ ಮನಗೆಲ್ಲೋದಕ್ಕೆ ಮುಂದಾಗಿದ್ದಾರೆ. ಅದರ ಬಾಗವಾಗಿ ಕೈ ಅಭ್ಯರ್ಥಿ ಸ್ಟಾರ್ ಚಂದ್ರು ಮಂಡ್ಯ ನಗರದಲ್ಲಿ ಸ್ವಂತ ಮನೆ ಖರೀದಿಸಿದ್ದಾರೆ. ಆ ಮೂಲಕ ಐದು ವರ್ಷಗಳ ಬಳಿಕ ಮತ್ತೆ ಹೌಸ್ ಪಾಲಿಟಿಕ್ಸ್ ಮುನ್ನೆಲೆಗೆ ಬಂದಿದೆ. ಈ ಕುರಿತ ಒಂದು ರಿಪೋರ್ಟ್ ಇಲ್ಲಿದೆ.
2019ರ ಲೋಕಸಭೆ ಚುನಾವಣೆ ವೇಳೆ ಮಂಡ್ಯದಲ್ಲಿ ಹೌಸ್ ಪಾಲಿಟಿಕ್ಸ್ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಮತದಾರರನ್ನ ಭಾವನಾತ್ಮಕಾಗಿ ಸೆಳೆಯಲು ಮಂಡ್ಯದಲ್ಲಿ ಸ್ವಂತ ಮನೆ ನಿರ್ಮಿಸಿ ನೆಲೆಯೂರುವುದಾಗಿ ನಿಖಿಲ್ ಕುಮಾರಸ್ವಾಮಿ ಹಾಗೂ ಸುಮಲತಾ ಅಂಬರೀಶ್ ಪೈಪೋಟಿಗೆ ಬಿದ್ದು ಹೇಳಿಕೆ ಕೊಟ್ಟಿದ್ರು. ಚುನಾವಣೆಯಲ್ಲಿ ಸೋತ ಬಳಿಕ ನಿಖಿಲ್ ಮನೆ ನಿರ್ಮಿಸುವ ನಿರ್ಧಾರ ಕೈಬಿಟ್ರೆ,
ನಿಮಗೆ ಗೊತ್ತೇ.? ಡಿಪ್ರೆಶನ್ʼನಿಂದ ಹೊರಬರಲು ಜಾಗಿಂಗ್, ಯೋಗ ಮಾಡಿದ್ರೆ ಸಾಕಂತೆ
ಇತ್ತ ಸಂಸದೆ ಸುಮಲತಾ ಅವ್ರು 2021ರಲ್ಲಿ ಮಂಡ್ಯ ತಾಲ್ಲೂಕಿನ ಹನಕೆರೆ ಬಳಿ ಭೂಮಿ ಪೂಜೆಯನ್ನೂ ನೆರವೇರಿಸಿ ಮನೆ ನಿರ್ಮಿಸದೇ ಸೈಲೆಂಟಾಗಿದ್ರು. ಆದ್ರೆ ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿರುವ ಸ್ಟಾರ್ ಚಂದ್ರು ನಾಮಪತ್ರ ಸಲ್ಲಿಕೆಗೂ ಮುನ್ನವೇ ಮನೆ ಖರೀದಿಸುವ ಮೂಲಕ ಎದುರಾಳಿಗಳಿಗೆ ಟಕ್ಕರ್ ಕೊಟ್ಟಿದ್ದಾರೆ. ಕಳೆದ ಎರಡು ತಿಂಗಳಿಂದ ಕಾಲಿಕೆ ಚಕ್ರಕಟ್ಟಿಕೊಂಡಂತೆ ಕ್ಷೇತ್ರಾದ್ಯಂತ ಸಂಚರಿಸುತ್ತಿರುವ ಸ್ಟಾರ್ ಚಂದ್ರು ಚುನಾವಣೆ ಗೆಲ್ಲೋದಕ್ಕೆ ಚಲುವರಾಯಸ್ವಾಮಿ ನೇತೃತ್ವದಲ್ಲಿ ರಣತಂತ್ರ ಎಣೆಯುತ್ತಿದ್ದಾರೆ.
ಆದ್ರೆ ದಳಪತಿಗಳು ಕಾಂಗ್ರೆಸ್ ಸೋಲಿಸೋದಕ್ಕೆ ಪ್ರತಿತಂತ್ರ ಎಣೆಯುತ್ತಿದ್ದು, ಸ್ವತಃ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಈ ಬಾರಿ ಮಂಡ್ಯದಿಂದ ಮೈತ್ರಿ ಅಭ್ಯರ್ಥಿಯಾಗೋದು ಬಹುತೇಕ ಪಕ್ಕಾ ಆಗಿದೆ. ಕುಮಾರಸ್ವಾಮಿ ಚುನಾವಣೆಗೆ ಸ್ಪರ್ಧೆ ಮಾಡ್ತಾರೆ ಅಂತ ಗೊತ್ತಾಗುತ್ತಿದ್ದಂತೆ ಕೈ ಪಡೆ ಮತ್ತಷ್ಟು ಆಕ್ಟೀವ್ ಆಗಿದ್ದು, ಜನರನ್ನ ಭಾವನಾತ್ಮಕವಾಗಿ ಸೆಳೆಯಲು ಮುಂದಾಗಿದ್ದಾರೆ. ಅಲ್ಲದೆ ಮಂಡ್ಯದಲ್ಲೇ ಇದ್ದು ಜನರ ಸೇವೆ ಮಾಡುತ್ತೇನೆಂಬ ಸಂದೇಶ ರವಾನಿಸಲು ಸ್ಟಾರ್ ಚಂದ್ರ ಹೊಸ ಮನೆ ಖರೀದಿಸಿ ಗೃಹ ಪ್ರವೇಶವನ್ನೂ ನೆರವೇರಿಸಿದ್ದಾರೆ.