ಕೋಲಾರ:- ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಶ್ರೀ ರಾಮಲಲ್ಲಾ ಪ್ರಾಣ ಪ್ರತಿಷ್ಟಾಪನೆಗೆ ಕ್ಷಣಗಣನೆ ಆರಂಭವಾಗಿದ್ದು ಚಿನ್ನದ ನಾಡಿನಾದ್ಯಂತ ಕೇಸರಿ ಮಯವಾಗಿದೆ.
ಶ್ರೀ ರಾಮಲಲ್ಲಾ ಪ್ರತಿಷ್ಟಾಪನೆ ಪ್ರಯುಕ್ತ ಸಮಾಜ ಸೇವಕರು ಹಾಗೂ ಜೆಡಿಎಸ್ ಮುಖಂಡರಾದ ಸಿಎಂಆರ್ ಶ್ರೀನಾಥ್ ಅವ್ರು ಕೋಲಾರದ ಸಿಎಂಆರ್ ಟಮೊಟೊ ಮಂಡಿಯಲ್ಲಿ ಶ್ರೀರಾಮನ ಕಟೌಟಗೆ ಪುಷ್ಪ ನಮನವನ್ನು ಸಲ್ಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ್ರು.
ಮರ್ಯಾದೆ ಪುರುಷ ಆದರ್ಶ ಪುರುಷ ಈಡೀ ವಿಶ್ವದ ಎಲ್ಲಾ ಹಿಂದೂಗಳ ಆರಾಧ್ಯ ದೈವ ಶ್ರೀರಾಮನ ಪ್ರಾಣ ಪ್ರತಿಷ್ಟಾಪನೆಯನ್ನು ಅಯೋಧ್ಯೆಯಲ್ಲಿ ಪ್ರತಿಷ್ಟಾಲನೆಯನ್ನು ಮಾಡಲಾಗುತ್ತಿದೆ. ದೇಶ ರಾಜ್ಯ ಪ್ರತಿ ಗ್ರಾಮಗಳಲ್ಲಿಯು ಸಹ ಶ್ರೀರಾಮನಿಗೆ ಹಬ್ಬದ ರೀತಿಯಲ್ಲಿ ವಿಶೇಷ ಪೂಜೆಯನ್ನು ಮಾಡಲಾಗುತ್ತಿದೆ. ಎಲ್ಲಾ ಹಿಂದುಗಳು ಹೆಮ್ಮೆ ಪಡುವ ಸಂಗತಿಯಾಗಿದೆ ಈಡೀ ವಿಶ್ವದಲ್ಲಿ ಎಲ್ಲರು ತಮ್ಮ ತಮ್ಮ ಮನೆಗಳಲ್ಲಿ ಶ್ರೀರಾಮನ ಪೂಜೆಯನ್ನು ನಡೆಸುತ್ತಿದ್ದಾರೆ ಹಿಂದೂ ರಾಷ್ಟ್ರ ರಾಮರಾಜ್ಯವಾಗ ಬೇಕು ಶ್ರೀರಾಮ ಆಳ್ವಿಕೆ ಮಾಡಿದಂತ ನಾಡು ಎಂದು ತಿಳಿಸಿದ್ರು.
ಜೆಡಿಎಸ್ ಮುಖಂಡ ಸುಧಾಕರ್ ಮಾತನಾಡಿ 500 ವರ್ಷಗಳ ಇತಿಹಾಸವನ್ನು ಮುರಿದು ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಪ್ರಧಾನ ಮಂತ್ರಗಳು ನರೇಂದ್ರ ಮೋದಿಯವರು ಶ್ರೀ ರಾಮಲಲ್ಲಾ ಪ್ರಾಣ ಪ್ರತಿಷ್ಟಾಪನೆಯನ್ನು ಮಾಡುತ್ತಿದ್ದಾರೆ ಇದು ಭಾರತೀಯರ ಕನಸಾಗತ್ತು. ಅಯೋಧ್ಯೆಯಲ್ಲಿ ಶ್ರೀರಾಮಲಲ್ಲಾ ಪ್ರಾಣ ಪ್ರತಿಷ್ಟಾಪನೆ ಮಾಡಲಾಗುತ್ತಿದೆ ಶ್ರೀರಾಮನವಮಿ ಹಬ್ಬದ ರೀತಿಯಲ್ಲಿ ದೇಶದ ಎಲ್ಲಾ ನಡೆ ಶ್ರೀರಾಮನಿಗೆ ವಿಶೇಷ ಪೂಜೆಯನ್ನು ನಡೆಸುತ್ತಿದ್ದಾರೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಭಕ್ತಾಧಿಗಳಿಗೆ ಅನ್ನ ಸಂತರ್ಪಣೆ ಪಾನಕ ಮಜ್ಜಿಗೆ ಕೋಸಂಬರಿಯನ್ನು ವಿತರಿಸಲಾಯಿತು.