ಕೊಪ್ಪಳ :– ಶ್ರೀರಾಮನ ಮಂದಿರ ಸೇರಿದಂತೆ ನಾಡಿನ ಎಲ್ಲ ದೇವಸ್ಥಾನಗಳಲ್ಲಿ ಪೂಜಾ ಕೈಂಕರ್ಯಗಳು ಆರಂಭವಾಗಿವೆ.
ಅದರಂತೆ ಕೊಪ್ಪಳ ನಗರದ ಭಾಗ್ಯನಗರದಲ್ಲಿರುವ ಶ್ರೀರಾಮ ಮಂದಿರದಲ್ಲಿ ಹಿಂದೂ-ಮುಸ್ಲಿಂ ಮುಖಂಡರು ಒಟ್ಟಾಗಿ ಶ್ರೀರಾಮನಿಗೆ ಪೂಜೆ ಮಾಡಿದರು.
ಅಲ್ಲದೇ ಮುಸ್ಲಿಂ ಮುಖಂಡರು ದೇವಸ್ಥಾನಗಳಿಗೆ ಬರುವ ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆ ಮಾಡಿದ್ದಾರೆ.