ಬಾಗಲಕೋಟೆ:- ಸಹೋದರಿಯ ಅನೈತಿಕ ಸಂಬಂಧದಿಂದ ಊರಲ್ಲಿ ಮರ್ಯಾದೆ ಹಾಳಾಗುತ್ತಿದೆ ಎಂದು ಸಹೋದರ ಸಂತೋಷ್ ಎಂಬಾತ ಸಹೋದರಿಯನ್ನೇ ಕತ್ತು ಹಿಸುಕಿ, ಕಲ್ಲಿನಿಂದ ತಲೆಯನ್ನ ಜಜ್ಜಿ ಕೊಲೆ ಮಾಡಿದ್ದಾನೆ.
ಜಾಮೀನು ತಡೆ ಹಿಡಿದ ಹೈಕೋರ್ಟ್… ಸುಪ್ರೀಂ ಮೊರೆ ಹೋದ ಅರವಿಂದ್ ಕೇಜ್ರಿವಾಲ್!
ತಂದೆ-ತಾಯಿ ಇಲ್ಲದ ಪ್ರೀತಿ ಹಾಗೂ ಸಹೋದರರು, ಬೀಳಗಿ ತಾಲ್ಲೂಕಿನ ಬಾಡಗಂಡಿ ಗ್ರಾಮದ ದೊಡ್ಡಮ್ಮ ರುಕ್ಮವ್ವಳ ಮನೆಯಲ್ಲಿ ಬೆಳೆದಿದ್ದರು.
ಪ್ರೀತಿಗೆ 16 ವರ್ಷವಿದ್ದಾಗಲೇ ಬಾಲ್ಯವಿವಾಹವಾಗಿತ್ತು. ಆಗ ಕೇಸ್ ಕೂಡ ದಾಖಲಾಗಿತ್ತು. ಈ ಹಿನ್ನಲೆ ಗಂಡನ ಮನೆಗೆ ಹೋಗಿರಲಿಲ್ಲ. ಕಳೆದ ಮೂರು ವರ್ಷದಿಂದ ಸಹೋದರರ ಜೊತೆ ವಿಜಯಪುರ ಜಿಲ್ಲೆಯ ಕೊಲ್ಹಾರ ಗ್ರಾಮಕ್ಕೆ ಸ್ಥಳಾಂತರಗೊಂಡಿದ್ದರು.