ಧಾರವಾಡ:- ಲವ್ ಜಿಹಾದ್ ತಡೆಗೆ ಶ್ರೀರಾಮಸೇನೆ ಆರಂಭಿಸಿದ ಸಹಾಯವಾಣಿಗೆ ನೂರಾರು ಕರೆಗಳು ಬಂದಿದೆ. ಎರಡನೇ ವಾರಕ್ಕೆ 600ಕ್ಕೂ ಹೆಚ್ಚು ಫೋನ್ ಕರೆಗಳು ಬಂದಿದೆ.
ಪಪ್ಪಾಯಿ ದೇಹಕ್ಕೆ ಎಷ್ಟು ಒಳ್ಳೆಯದೋ ಅಷ್ಟೇ ಹಾನಿ ಕೂಡ… ಯಾರೆಲ್ಲಾ ತಿನ್ನಬಾರದು ಗೊತ್ತಾ!?
ಸಂಕಷ್ಟದಲ್ಲಿರುವ ಹಿಂದು ಹೆಣ್ಣುಮಕ್ಕಳು ನಮ್ಮನ್ನು ಸಂಪರ್ಕಿಸಿದರೆ ಅಗತ್ಯ ಸಹಾಯ ಮಾಡುತ್ತೇವೆ, ರಕ್ಷಣೆಗೆ ನಿಲ್ಲುತ್ತೇವೆ ಅಂತಾನೂ ಶ್ರೀರಾಮಸೇನೆ ಹೇಳಿತ್ತು. ಹೀಗಾಗಿ ಸಹಾಯವಾಣಿ ಆರಂಭವಾಗುತ್ತಿದ್ದಂತೆಯೇ ಎರಡನೇ ವಾರದಲ್ಲಿ ಹಿಂದೂ ಹೆಣ್ಣುಮಕ್ಕಳಿಂದ 600ಕ್ಕೂ ಹೆಚ್ಚು ಫೋನ್ ಕರೆಗಳು ಬಂದಿವೆಯಂತೆ. ‘ಯಾವಾಗ ಸಹಾಯವಾಣಿ ಆರಂಭವಾಯಿತೋ ಆಗ ಅನೇಕ ಹೆಣ್ಣುಮಕ್ಕಳಿಗೆ ತಮ್ಮ ದುಃಖ, ನೋವು ಕೇಳೋರು ಒಬ್ಬರು ಇದಾರಲ್ಲ ಎನ್ನುವ ಭಾವನೆ ಬಂದಿದೆಯಂತೆ.
ಹೀಗಾಗಿ ಈ 600 ಫೋನ್ ಕರೆಗಳನ್ನು ಪರಿಶೀಲಿಸಿ ನೋಡಲಾಗಿ ಅದರಲ್ಲಿ 100ಕ್ಕೂ ಮಹಿಳೆಯರು ಈಗಾಗಲೇ ಲವ್ ಜಿಹಾದ್ ಸಂಕಷ್ಟಕ್ಕೆ ಸಿಲುಕಿದವರಾಗಿದ್ದಾರಂತೆ. ಅದರಲ್ಲಿ ಬಹುತೇಕರದ್ದು ವಿಚಿತ್ರ ಹಾಗೂ ಯಾರ ಮುಂದೆಯೂ ಹೇಳಿಕೊಳ್ಳಲಾಗದ ಘಟನೆಗಳಿವೆಯಂತೆ. ಈ ಮಹಿಳೆಯರಿಗೆ ಎಲ್ಲ ನೆರವು ನೀಡುವುದಕ್ಕಾಗಿಯೇ ಶ್ರೀರಾಮ ಸೇನೆ ವಿಶೇಷ ತಂಡ ಈಗ ಸಜ್ಜಾಗುತ್ತಿದೆ. ಕಾನೂನಾತ್ಮಕ ತೊಡಕುಗಳಿದ್ದಲ್ಲಿ ಅವುಗಳನ್ನು ಕಾನೂನಾತ್ಮಕವಾಗಿಯೇ ಬಗೆ ಹರಿಸಲು ನಿರ್ಧರಿಸಿದ್ದಾರಂತೆ. ಈಗಾಗಲೇ 15 ಪ್ರಕರಣಗಳನ್ನು ತಮ್ಮ ಮಟ್ಟದಲ್ಲಿಯೇ ಇತ್ಯರ್ಥ ಸಹ ಮಾಡಿದ್ದಾರೆ.
ಇದೇ ಜೂನ್ 12ರಂದು ಧಾರವಾಡದಲ್ಲಿ ತ್ರಿಶೂಲ್ ದೀಕ್ಷಾ ಅಭಿಯಾನ ನಡೆಯಲಿದ್ದು, ಅಭಿಯಾನದ ಬಳಿಕ ಈ ಸಹಾಯವಾಣಿಗೆ ಬಂದ ಕರೆಗಳ ಇತ್ಯರ್ಥ ಕಾರ್ಯದಲ್ಲಿ ಶ್ರೀರಾಮ ಸೇನೆ ತೊಡಗಲಿದೆ. ಒಟ್ಟಾರೆಯಾಗಿ ಇಷ್ಟು ದಿನ ಲವ್ ಜಿಹಾದ್ ವಿರುದ್ಧ ಜಾಗೃತಿ ಮೂಡಿಸುತ್ತ ಬಂದಿದ್ದ ಶ್ರೀರಾಮ ಸೇನೆ ಈಗ ನೇರವಾಗಿಯೇ ಸಹಾಯವಾಣಿ ಮೂಲಕ ಲವ್ ಜಿಹಾದ್ ವಿರುದ್ಧ ಸಮರಕ್ಕೆ ನಿಂತಿದೆ.
![](https://ainlivenews.com/wp-content/uploads/2024/01/Ad-Banner-copy-scaled.jpg)