ಬೆಂಗಳೂರು: ರಾಜ್ಯದ ಕರಾವಳಿ ಭಾಗದಲ್ಲಿ ಕಳೆದ ಒಂದು ವಾರದಿಂದ ನಿರಂತರವಾಗಿ ಮಳೆಯಾಗುತ್ತಿದೆ. ಶನಿವಾರ ಕೊಂಚ ಬಿಡುವು ಪಡೆದಿದ್ದ ಮಳೆ ಭಾನುವಾರದಿಂದ ಮತ್ತಷ್ಟು ಆರ್ಭಟಿಸಿದ್ದು ಇಂದು ಕೂಡ ಮತ್ತೆ ಜೋರಾಗಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
Dengue Vaccine ರಾಜ್ಯದಲ್ಲಿ ಡೆಂಘೀ ಆರ್ಭಟ: ವ್ಯಾಕ್ಸೀನ್ ಕಂಡು ಹಿಡಿದ ಅಮೆರಿಕ, ಭಾರತಕ್ಕೆ ಬರೋದು ಯಾವಾಗ?
ಇನ್ನು ರಾಜ್ಯದ ವಿವಿಧ ಜಿಲ್ಲೆಗಳಲ್ಲಿಯೂ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದೂ ಈ ಪೈಕಿ ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರಿನಲ್ಲಿ ಹೆಚ್ಚು ಮಳೆಯಾಗಲಿದೆ.
ಕ್ಯಾಸಲ್ರಾಕ್, ಹೊನ್ನಾವರ, ಉಡುಪಿ,ಅಂಕೋಲಾದಲ್ಲಿ ಹೆಚ್ಚಿನ ಮಳೆಯಾಗಿದೆ. ಕೋಟ, ಗೋಕರ್ಣ, ಸಿದ್ದಾಪುರ, ಶಿರಾಲಿ, ಮಂಕಿ, ಲೋಂಡಾ, ಕೊಟ್ಟಿಗೆಹಾರ, ಆಗುಂಬೆ, ಗೇರುಸೊಪ್ಪ, ಬೆಳ್ತಂಗಡಿ, ಧರ್ಮಸ್ಥಳ, ಕದ್ರಾ, ಕಾರ್ಕಳ, ಹುಂಚದಕಟ್ಟೆ, ಕೋಯಿಡಾ, ಕಾರವಾರ, ಸಿದ್ದಾಪುರ, ಕುಮಟಾ, ಲಿಂಗನಮಕ್ಕಿಯಲ್ಲಿ ಮಳೆಯಾಗಿದೆ.
ಕುಂದಾಪುರ, ಭಾಗಮಂಡಲ, ಉಪ್ಪಿನಂಗಡಿ, ಶೃಂಗೇರಿ, ಮಾಣಿ, ಯಲ್ಲಾಪುರ, ಮುಲ್ಕಿ, ಜಯಪುರ, ಮಾಣಿ, ಯಲ್ಲಾಪುರ, ಕೊಪ್ಪ, ದಾವಣಗೆರೆ, ಮೂರ್ನಾಡು, ನಾಪೊಕ್ಲು, ಹಳಿಯಾಳ, ಸುಳ್ಯ, ಮಂಗಳೂರು, ಹಾವೇರಿ, ಯಡ್ರಾಮಿ, ಬೆಳಗಾವಿಯಲ್ಲಿ ಮಳೆಯಾಗಿದೆ.