ಬೆಂಗಳೂರು:- ಮಳೆಯ ಪರಿಣಾಮ ಹಾಗೂ ಹಬ್ಬದ ಸಲುವಾಗಿ ಈ ವಾರ ತರಕಾರಿಗಳ ಬೆಲೆ ಕೊಂಚ ಜಾಸ್ತಿಯಾಗಿದೆ. ಕಳೆದ ವಾರ ಟೊಮೆಟೊ ಬೆಲೆ 20 ರೂ ಇತ್ತು. ಈ ವಾರ 25 ರೂ ಆಗಿದೆ. ಇನ್ನು ಆಲೂಗಡ್ಡೆ ಕಳೆದ ವಾರ 35 ರೂ ಇತ್ತು. ಈ ವಾರ 45 ರೂ ಆಗಿದೆ.
ಇನ್ನು ಈರುಳ್ಳಿಯಂತು ಮಾರುಕಟ್ಟೆಯಲ್ಲಿ ಕೆಜಿಗೆ 60 ರೂ ಇದ್ದರೆ, ತಳ್ಳುವ ಗಾಡಿಗಳಲ್ಲಿ, ಮನೆಗಳ ಅಕ್ಕಪಕ್ಕದ ಅಂಗಡಿಗಳಲ್ಲಿ 70 ರಿಂದ 100 ರವರೆಗೂ ವ್ಯಾಪಾರವಾಗುತ್ತಿದೆಯಂತೆ. ಇನ್ನು ಕ್ಯಾರೆಟ್, ಬೀನ್ಸ್, ನಾಟಿ ಬಟಾಣಿ, ಹಸಿರು ಮೆಣಸಿನಕಾಯಿ ಎಲ್ಲವೂ 100 ರ ಗಡಿದಾಟಿವೆ. ಇನ್ನು, ಹಬ್ಬಕ್ಕೆ ಈ ಬೆಲೆ ಇನ್ನು ಜಾಸ್ತಿಯಾಗುವ ಸಾಧ್ಯತೆ ಇದೆಯಂತೆ.
ತರಕಾರಿ ಹಿಂದಿನ ಬೆಲೆ ಇಂದಿನ ಬೆಲೆ
ನಾಟಿ ಬೀನ್ಸ್: 50 – 80 ರೂ.
ಟೊಮೆಟೊ: 15 – 25 ರೂ.
ಬಿಳಿ ಬದನೆ: 60 – 60 ರೂ.
ಮೆಣಸಿನಕಾಯಿ: 60- 80 ರೂ.
ನುಗ್ಗೆಕಾಯಿ ಕೆಜಿಗೆ: 80- 120 ಒಂದಕ್ಕೆ – 20 ರೂ.
ಊಟಿ ಕ್ಯಾರೆಟ್: 80 – 100 ರೂ.
ನವಿಲುಕೋಸು: 40- 60 ರೂ.
ಮೂಲಂಗಿ: 40- 40 ರೂ.
ಹೀರೇಕಾಯಿ: 40- 80 ರೂ.
ಆಲೂಗಡ್ಡೆ: 40 – 60 ರೂ.
ಈರುಳ್ಳಿ: 60- 40 ರೂ.
ಕ್ಯಾಪ್ಸಿಕಂ: 40 – 85 ರೂ.
ಹಾಗಲಕಾಯಿ: 40 – 60 ರೂ.
ಕೊತ್ತಂಬರಿ ಸೊಪ್ಪುಕಟ್: 60 ರೂ.
ಶುಂಠಿ: 150- 260 ರೂ.
ಬೆಳ್ಳುಳ್ಳಿ: 400- 410 ರೂ.
ಪಾಲಕ್: ಕೆಜಿ – 40 ರೂ.
ಪುದಿನ ಕೆಜಿ: 92 ರೂ.
ನಾಟಿ ಬಟಾಣಿ: 200- 250 ರೂ.
ಫಾರಂ ಬಟಾಣಿ: 100 – 160 ರೂ
ಈ ಬೆಲೆ ಇನ್ನು ಎರಡು ಮೂರು ದಿನದಲ್ಲಿ ದುಪ್ಪಾಟ್ಟಾಗುವ ಸಾಧ್ಯತೆ ಇದೆ. ಸದ್ಯ ಮಳೆ ಇರುವ ಕಾರಣ ಈರುಳ್ಳಿ ಸೇರಿದಂತೆ ಹಲವು ತರಕಾರಿಗಳು ಮಾರುಕಟ್ಟೆಗೆ ಬರ್ತಿಲ್ಲ. ಬೇರೆ ಬೇರೆ ರಾಜ್ಯಗಳಿಂದ ತರಕಾರಿಗಳ ಬರುತ್ತಿರುವ ಪರಿಣಾಮ ಬೇಡಿಕೆಗೆ ತಕ್ಕಷ್ಟು ತರಕಾರಿ ಪೂರೈಕೆಯಾಗುತ್ತಿದೆ. ಹೀಗಾಗಿ ತರಕಾರಿಗಳ ಬೆಲೆ ಏರಿಕೆಯಾಗಿದೆ.