ಬೆಂಗಳೂರು:- ಪೀಣ್ಯ ದಾಸರಹಳ್ಳಿ, ಬಗಲಗುಂಟೆ, ಕುರುಬರಹಳ್ಳಿ ಮೊದಲಾದ ಕಡೆ ಧಾರಾಕಾರವಾಗಿ ಮಳೆ ಸುರಿದಿದೆ.
ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಕೇಸ್: ಮತ್ತೋರ್ವ ಆರೋಪಿ ಅರೆಸ್ಟ್!
ನಗರದ ಪೀಣ್ಯ, ದಾಸರಹಳ್ಳಿ, ಬಗಲುಕುಂಟೆ, ಮಲ್ಲಸಂದ್ರ ಮತ್ತು ಶೆಟ್ಟಿಹಳ್ಳಿ ಏರಿಯಾಗಳಲ್ಲಿ ಇವತ್ತು ಸಾಯಂಕಾಲ ಧಾರಾಕಾರವಾಗಿ ಮಳೆ ಸುರಿದಿದೆ. ಕುರುಬರಹಳ್ಳಿಯಲ್ಲೂ ಮಳೆ ಸುರಿದಿದೆ. ಚರಂಡಿ ಮತ್ತು ರಾಜಾ ಕಾಲುವೆಗಳಲ್ಲಿ ಶೇಖರಣೆಗೊಂಡಿರುವ ಹೂಳನ್ನು ತೆಗೆದು ಸರಾಗವಾಗಿ ನೀರು ಹರಿದು ಹೋಗುವ ಏರ್ಪಾಟು ಮಾಡಿ ಅಂತ ಬಿಬಿಎಂಪಿ ಅಧಿಕಾರಿಗಳಿಗೆ ತಿಳಿಸಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿನ್ನೆ ನಗರದ ಪ್ರದಕ್ಷಿಣೆ ಹಾಕಿದ ನಂತರ ಹೇಳಿದ್ದರು. ಆ ಕೆಲಸ ಆರಂಭವಾಗಿದೆಯೇ? ಎಂಬ ಪ್ರಶ್ನೆಗೆ ಬಿಬಿಎಂಪಿ ಕಮಿಷನರ್ ಉತ್ತರ ನೀಡಬೇಕಾಗಿದೆ.
![](https://ainlivenews.com/wp-content/uploads/2024/01/Ad-Banner-copy-scaled.jpg)