ಪೀಣ್ಯ ದಾಸರಹಳ್ಳಿ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಬೆಲೆ ಏರಿಕೆ ಬಿಟ್ಟರೆ ಅಭಿವೃದ್ಧಿ ಕಡೆ ಗಮನವಿಲ್ಲ.ಜನಗಳ ತಲೆ ಮೇಲೆ ತೆರಿಗೆ ಭಾರ ಹೊರಿಸುವ ಕೆಟ್ಟ ಸರ್ಕಾರ ಜನರ ಸುಲಿಗೆ ಮಾಡುವಂಥ ಸರ್ಕಾರ, ಇದೊಂದು ಜನವಿರೋಧಿ ಸರ್ಕಾರ,ಈ ಜನವಿರೋದಿ ನೀತಿಯನ್ನು ಖಂಡಿಸಿ ವಿಧಾನ ಸೌಧದ ಓಳಗೆ ಹೊರಗೆ ಹೋರಾಟ ನೆಡೆಸಲಾಗುವುದು’ ಎಂದು ಶಾಸಕ ಎಸ್. ಮುನಿರಾಜು ಕಾಂಗ್ರೆಸ್ ಸರ್ಕಾರದ ವಿರುದ್ದ ಅಕ್ರೋಶ ವ್ಯಕ್ತ ಪಡಿಸಿದರು.
ಅಬ್ಬಿಗೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸೂರಜ್ ಫೌಂಡೇಶನ್ ವತಿಯಿಂದ ಉಚಿತ ನೋಟ್ ಬುಕ್ ಗಳನ್ನು ವಿತರಿಸಿ ಮಾತನಾಡಿದರು.
ಮುಖ್ಯವಾಗಿ ಬೆಂಗಳೂರಿನ ಅಭಿವೃದ್ಧಿಗೆ ಶೂನ್ಯ ಕೊಡುಗೆ ಈ ಕಾಂಗ್ರೆಸ್ ಸರ್ಕಾರದ್ದು,
ಬ್ರಾಂಡ್ ಬೆಂಗಳೂರು ಮಾಡುತ್ತೆವೆಂದು ಹೇಳಿ ಬ್ಯಾಡ್ ಬೆಂಗಳೂರು ಮಾಡಿದ್ದಾರೆ. ದಾಸರಹಳ್ಳಿ ಕ್ಷೇತ್ರದಲ್ಲಿ ಕುಡಿಯುವ ನೀರಿನ ಹಾಹಾಕಾರವಿದೆ. ಬಡವರು ,ಮಧ್ಯಮ ವರ್ಗದ ಜನರು ವಾಸಮಾಡುವಂಥ ಪ್ರದೇಶ. ದಿನನಿತ್ಯ ತಾಯಂದಿರು ನೀರಿಗಾಗಿ ಮನೆ ಬಾಗಲಿಗೆ ಬರುತ್ತಿದ್ದಾರೆ. ಬಿಟ್ಟಿಭ್ಯಾಗ್ಯ ಬೇಡ ಸಿದ್ದರಾಮಯ್ಯ ಕುಡಿಯಲು ನೀರು ಕೊಡಿ ಸಾಕು ಎನ್ನುತ್ತಿದ್ದಾರೆ.
ಕ್ಷೇತ್ರದಲ್ಲಿ ಬೋರ್ವೆಲ್ ಗಳು ಬತ್ತಿವೆ. ಇದ್ದ ನೀರನ್ನು ತಮಿಳುನಾಡಿಗೆ ಬಿಟ್ಟು ಬೆಂಗಳೂರಿನ ಜನರಿಗೆ ನೀರುಕೊಡದೆ ವಂಚಿಸುತ್ತಿದ್ದಾರೆ. ಕುಡಿಯಲು ನೀರು ಕೊಡದಂಥ ಈ ಕೆಟ್ಟ ಕಾಂಗ್ರೆಸ್ ಸರ್ಕಾರ ಅದಷ್ಟು ಬೇಗ ತೊಲಗಿದರೆ ಜನರು ನಿಟ್ಟುಸಿರು ಬಿಡಲಿದ್ದಾರೆ
ಎಂದು ಸರ್ಕಾರದ ವಿರುಧ್ದ ವಾಗ್ದಾಳಿ ನೆಡೆಸಿದರು.