ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಲಕ್ನೋ ವಿರುದ್ಧದ ಪಂದ್ಯದಲ್ಲಿ RCB ಸೋಲಿಗೆ ಯಾರು ಕಾರಣ ಎಂದು ನಾಯಕ ಫಾಫ್ ಡುಪ್ಲೆಸಿಸ್ ತಿಳಿಸಿದ್ದಾರೆ.
ನಮ್ಮ ತಂಡದ ಕಳಪೆ ಫೀಲ್ಡಿಂಗ್ ಸೋಲಿಗೆ ಮುಖ್ಯ ಕಾರಣ ಎಂದರು. ಈ ಪಂದ್ಯದ ಆರಂಭದಲ್ಲಿ ಕ್ವಿಂಟನ್ ಡಿಕಾಕ್ ಅವರ ಕ್ಯಾಚ್ ಅನ್ನು ಕೈಚೆಲ್ಲಿದ್ದರು. 32 ರನ್ಗಳಿದ್ದಾಗ ಅವರಿಗೆ ನೀಡಲಾದ ಜೀವದಾನವನ್ನು ಬಳಸಿಕೊಂಡ ಡಿಕಾಕ್ 81 ರನ್ ಬಾರಿಸಿ ಅಬ್ಬರಿಸಿದರು.
ಕರ್ನಾಟಕದ ಹಲವೆಡೆ ಇಂದಿನಿಂದ ಮಳೆ ಸಾಧ್ಯತೆ – ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ!
ಹಾಗೆಯೇ ಕೊನೆಯ ಹಂತದಲ್ಲಿ ನಿಕೋಲಸ್ ಪೂರನ್ ಅವರ ಕ್ಯಾಚ್ ಅನ್ನು ಸಹ ಕೈಬಿಟ್ಟಿದ್ದರು. ಕೇವಲ 2 ರನ್ಗಳಿಸಿದ್ದಾಗ ನೀಡಿದ ಅವಕಾಶವನ್ನು ಬಳಸಿಕೊಂಡ ಪೂರನ್ 40 ರನ್ ಸಿಡಿಸಿದ್ದರು. ಈ ಎರಡು ಕ್ಯಾಚ್ ಡ್ರಾಪ್ಗಳು ಆರ್ಸಿಬಿ ಪಾಲಿಗೆ ದುಬಾರಿಯಾಗಿ ಪರಿಣಮಿಸಿತು ಎಂದು ಫಾಫ್ ಡುಪ್ಲೆಸಿಸ್ ತಿಳಿಸಿದ್ದಾರೆ.
ಇನ್ನು ಪವರ್ಪ್ಲೇನಲ್ಲಿ ಆರ್ಸಿಬಿ ಬೌಲರ್ಗಳ ಕಳಪೆ ದಾಳಿಯನ್ನು ಟೀಕಿಸಿರುವ ಫಾಫ್ ಡುಪ್ಲೆಸಿಸ್, ಹೊಸ ಚೆಂಡಿನೊಂದಿಗೆ ಆರ್ಸಿಬಿ ಬೌಲರ್ಗಳು ಮೊದಲ 4 ಓವರ್ಗಳಲ್ಲಿ 42 ರನ್ ಬಿಟ್ಟುಕೊಟ್ಟಿದ್ದರು. ಈ ಮೂಲಕ ಲಕ್ನೋ ಸೂಪರ್ ಜೈಂಟ್ಸ್ ತಂಡವು ಆರಂಭದಲ್ಲೇ ಪಂದ್ಯದ ಮೇಲೆ ಹಿಡಿತ ಸಾಧಿಸುವಲ್ಲಿ ಆರ್ಸಿಬಿ ಬೌಲರ್ಗಳು ಅವಕಾಶ ನೀಡಿದ್ದರು ಎಂದು ಫಾಫ್ ದೂರಿದ್ದಾರೆ.
ಆರ್ಸಿಬಿ ಫೀಲ್ಡರ್ಗಳು ಮಾಡಿದ ತಪ್ಪು ಮತ್ತು ಬೌಲರ್ಗಳ ಕಳಪೆ ಪ್ರದರ್ಶನದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಾಲಿಗೆ ದುಬಾರಿಯಾಗಿ ಪರಿಣಮಿಸಿದೆ. ಈ ಎಲ್ಲಾ ಕಾರಣಗಳಿಂದಾಗಿ ಆರ್ಸಿಬಿ ತಂಡವು ತವರಿನಲ್ಲಿ ಮತ್ತೊಮ್ಮೆ ಸೋಲುವಂತಾಯಿತು ಎಂದು ಫಾಫ್ ಡುಪ್ಲೆಸಿಸ್ ಹೇಳಿದ್ದಾರೆ.