ಶಿವಮೊಗ್ಗ : ಪಂಚಮಸಾಲಿ ಮೀಸಲಾತಿ ಹೋರಾಟ ಕೈಬಿಡಲು 10 ಕೋಟಿ ಹಣ, ಐಶಾರಾಮಿ ಕಾರಿನ ಆಫರ್ ಕೊಡ್ತಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿದ್ದಾರೆ. ಶಿವಮೊಗ್ಗದಲ್ಲಿ ನಗರದ ಶಿವಪ್ದ ನಾಯಕ್ ವೃತ್ತದಿಂದ ಗೋಪಿ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಬಳಿಕ ಚೌಕಿಮಠದಲ್ಲಿ ಜಯಮೃತ್ಯುಂಜಯ ಸ್ವಾಮೀಜಿಯವರು ಲಿಂಗ ಪೂಜೆ ನೆರವೇರಿಸಿದರು. ಪ್ರತಿಭಟನೆಯಲ್ಲಿ ಭಾಗಿಯಾಗಿರುವ ಶಾಸಕ ಬಸನನಗೌಡ ಪಾಟೀಲ್ ಯತ್ನಾಳ್ ಕೂಡ ಭಾಗಿಯಾಗಿದ್ದರು.
6 ತಿಂಗಳಲ್ಲಿ ಸಂಭವಿಸಲಿರುವ ಹೃದಯಾಘಾತವನ್ನು ರಕ್ತಪರೀಕ್ಷೆಯಿಂದಲೇ ಪತ್ತೆ ಹಚ್ಚಬಹುದು !
ಈ ವೇಳೆ ಮಾತನಾಡಿದ ಅವರು, ” ಪಂಚಮಸಾಲಿ ಸಮಾಜದ ಹೋರಾಟವನ್ನು ಮೊಟಕುಗೊಳಿಸಲು ಸರ್ಕಾರದ ಮಂತ್ರಿಗಳು ಏನೆಲ್ಲ ಆಮಿಶವೊಡ್ಡುತ್ತಾರೆ ಗೊತ್ತಾ? ಹತ್ತಿಪ್ಪತ್ತು ಕೋಟಿ ರೂ. ಮಠಕ್ಕೆ ನೀಡ್ತೀವಿ ಅನ್ನುತ್ತಾರೆ, ಐಷಾರಾಮಿ ಕಾರುಗಳನ್ನು ಕೊಡಿಸುವುದಾಗಿ ಹೇಳುತ್ತಾರೆ, ಅಂಥವರ ಬಗ್ಗೆ ಎಚ್ಚರದಿಂದ ಇರಬೇಕು ಎಂದರು.