ಬೆಂಗಳೂರು: ಬೆಂಗಳೂರಿನಲ್ಲಿ ಡೆಂಘೀ ಸದ್ದಿಲ್ಲದೆ ಸವಾರಿ ಹೊರಡಿದೆ. ಗಲ್ಲಿ-ಗಲ್ಲಿಯಲ್ಲೂ ದಂಡಯಾತ್ರೆ ಹೊರಟಿರುವ ಮಾರಿ..ಒಂದೇ ದಿನದಲ್ಲಿ ಇಬ್ಬರನ್ನ ತನ್ನ ಖೆಡ್ಡಾಗೆ ಕೆಡವಿಕೊಂಡಿದೆ. ಇದರ ನಡುವೆ ಡೆಂಘೀ ಕೇಸ್ ಏರಿಕೆಯಾಗ್ತಿದ್ದಂತೆ ಆಸ್ಪತ್ರೆ ಸೇರ್ತಿರರ ಸಂಖ್ಯೆ ಹೆಚ್ಚಾಗಿದೆ. ರೋಗಿಗಳ ಸಂಖ್ಯೆ ಏರ್ತಿದ್ದಂತೆ ಬ್ಲಡ್ ಬ್ಯಾಂಕ್ಗಳಲ್ಲಿ ಫ್ಲೇಟ್ಲೆಟ್ಸ್ಗಳಿಗೆ ಡಿಮ್ಯಾಂಡ್ ಶುರುವಾಗಿದೆ.
ಮುಂಗಾರ ಮಳೆಗಾಲ ಆರಂಭವಾಗ್ತಿದ್ದಂತೆ ಮಹಾಮಾರಿ ಡೆಂಘೀ ಅಬ್ಬರ ಜೋರಾಗಿದೆ. ಡೆವಿಲ್ ಡೆಂಘೀ ಆರ್ಭಟಕ್ಕೆ ಸಿಲಿಕಾನ್ ಸಿಟಿ ಮಂದಿ ಕಂಗಾಲಾಗಿದ್ದಾರೆ. ಆಸ್ಪತ್ರೆ ಕಾದತಟ್ಟುವರ ಸಂಖ್ಯೆಯೂ ಏರಿಕೆಯಾಗಿ ಬಿಬಿಎಂಪಿ ಎದೆಬಡಿತ ಹೆಚ್ಚಿಸಿದೆ. ಡೆಂಘೀ ಕೇಸ್ ಏರಿಕೆ ಬೆನ್ನಲ್ಲೇ ಪ್ಲೇಟ್ಲೆಟ್ಸ್ಗಳಿಗೆ ಫುಲ್ ಡಿಮ್ಯಾಂಡ್ ಶುರುವಾಗಿದ್ದು, ಪ್ಲೆಟ್ಲೆಟ್ಸ್ ಕೊರತೆ ಎದುರಾಗಿದೆ.
![Demo](https://ainlivenews.com/wp-content/uploads/2023/12/spoorthi-1.jpg)
Consuming Milk After Eating Fish: ಮೀನು ತಿಂದ್ಮೇಲೆ ತಪ್ಪಿಯೂ ಹಾಲು ಕುಡಿಯಬೇಡಿ..! ಯಾಕೆ ಗೊತ್ತಾ..?
ಯಾವುದಾದರೂ ವ್ಯಕ್ತಿಗೆ ಡೆಂಘೀ ಬಂದರೆ ನೇರವಾಗಿ ಆ ವ್ಯಕ್ತಿಯ ದೇಹದ ರಕ್ತದಲ್ಲಿನ ಪ್ಲೇಟ್ಲೆಟ್ ಹಾಗೂ ಬಿಳಿ ರಕ್ತ ಕಣಗಳನ್ನು ಕಡಿಮೆ ಮಾಡುತ್ತದೆ…ಡೆಂಘೀಯಿಂದ ಪಾರಾಗಬೇಕಾದ್ರೆ, ನಮ್ಮ ದೇಹದ ರೋಗ ನಿರೋಧಕ ಶಕ್ತಿಯ ಸ್ವರೂಪವಾಗಿರುವ ಬಿಳಿ ರಕ್ತ ಕಣಗಳು ಮತ್ತು ಪ್ಲೇಟ್ ಲೆಟ್ ಗಳ ಸಂಖ್ಯೆಯನ್ನು ಹೆಚ್ಚು ಮಾಡಿಕೊಳ್ಳಬೇಕು. ಹೀಗಾಗಿ ಡೆಂಘೀ ಪ್ರಕರಣ ಹೆಚ್ಚಾದ ಬೆನ್ನಲ್ಲೇ ಪ್ಲೇಟ್ ಲೆಟ್ ಗಳಿಗೆ ಡಿಮ್ಯಾಂಡ್ ಹೆಚ್ಚಾಗಿದೆ. ಕಳೆದ ತಿಂಗಳು ಪ್ರತಿ ಬ್ಲಡ್ ಬ್ಯಾಂಕ್ ನಲ್ಲಿ ನಿತ್ಯ 5-10 ಪ್ಲೇಟ್ ಲೆಟ್ಸ್ ಬೇಡಿಕೆಯಿತ್ತು, ಬಟ್ ಈಗ 50-60 ಯುನಿಟ್ ನಷ್ಟು ರ್ಯಾಂಡಮ್ ಡೋನರ್ ಪ್ಲೇಟ್ಲೆಟ್ಸ್ ಗಳಿಗೆ ಬೇಡಿಕೆ ಬರ್ತಿದೆ. ಹೀಗಾಗಿ ಪ್ಲೇಟ್ಲೆಟ್ ಕೊರತೆ ನೀಗಿಸಲು ಹಲವು ಕಡೆ ರಕ್ತದಾನ ಶಿಬಿರಗಳನ್ನು ಆಯೋಜನೆ ಮಾಡಲಾಗ್ತಿದೆ.
ಇತ್ತ ಬೆಂಗಳೂರಿನಲ್ಲಿ ಇಬ್ಬರು ಡೆಂಗ್ಯೂ ಯಿಂದ ಇಹಲೋಕ ತ್ಯಜಿಸಿದ್ದು, ಯಮದಂತೆ ಜನರನ್ನು ಬೆನ್ ಡದೆ ಕಾಡುತ್ತಿದೆ.. 24 ವರ್ಷದ ಅಭಿಲಾಷ್ ಕಗ್ಗದಾಸಪುರ ಮೂಲದವರಾಗಿದ್ದರೆ, ಮೃತಪಟ್ಟ 80 ವರ್ಷದ ವೃದ್ಧೆಯನ್ನು ತಮಿಳುನಾಡು ಮೂಲದ ನೀರಜಾ ದೇವಿ ಎಂದು ಬಿಬಿಎಂಪಿ ಗುರುತಿಸಿದೆ. ದೇವಿ ಕೂಡ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. 2023ರಲ್ಲಿ ಜನವರಿಯಿಂದ ಜೂನ್ ವರೆಗೆ – 732 ಪ್ರಕರಣ ವರದಿಯಾಗಿದ್ವು. ಆದರೆ ಈಬಾರಿ 1530 ಕೇಸ್ ದಾಖಲಾಗಿ ಆತಂಕ ಹುಟ್ಟಿಸಿದೆ. ಬಿಬಿಎಂಪಿಯೂ ಅಲರ್ಟ ಆಗಿ ಡೆಂಘೀ ವಿರುದ್ಧ ಸಮರ ಶುರು ಮಾಡಿದೆ.
![](https://ainlivenews.com/wp-content/uploads/2024/01/Ad-Banner-copy-scaled.jpg)