ಬಾಗಲಕೋಟೆ: ತೋಟಕ್ಕೆ ಮೇವು ತರಲು ಹೊದ ವ್ಯಕ್ತಿ ಸಹೋದರನಿಂದಲೇ ಬರ್ಬರವಾಗಿ ಹತ್ಯೆಯಾಗಿರುವ ಘಟನೆ ಬಾಗಲಕೋಟೆ ಜಿಲ್ಲೆ ಜಾಲಿಬೇರ ಗ್ರಾಮದಲ್ಲಿ ನಡೆದಿದೆ. ಜಾಲಿಬೇರ ಗ್ರಾಮದ 55 ವರ್ಷದ ಉತ್ತಮ ಯಾದವ್ ಕೊಲೆಯಾದ ವ್ಯಕ್ತಿಯಾಗಿದ್ದಾನೆ. ಸಾಯಂಕಾಲ ಬೈಕ್ನಲ್ಲಿ ಹೊಲಕ್ಕೆ ಹೊರಟಿದ್ದ ಉತ್ತಮ್ ಕುತ್ತಿಗೆಗೆ ಕೊಡಲೆಯಿಂದ ಕೊಚ್ಚಿ ಕೋಲೆ ಮಾಡಲಾಗಿದೆ.
ಇನ್ನು ಜಮೀನು ವಿಚಾರವಾಗಿ ಸಹೋದರ ಆನಂದ ಯಾದವ್ ನಡುವೆ ವಿವಾದ ನಡೆದಿತ್ತು. 15 ಎಕರೆ ಜಮೀನನ್ನ ಉತ್ತಮ್ ತಾನೇ ಉಳುಮೆ ಮಾಡುತ್ತಾ ಬಂದಿದ್ದ. ಇವರೆಗೂ ತಮ್ಮ ಆನಂದ್ಗೆ ಜಮೀನು ಒಅಲು ಕೊಡದೇ ದಬ್ಬಾಳಿಕೆ ನಡೆಸಿದ್ದ ಎನ್ನುವ ಆರೋಪ ಇದೆ. ಇದ್ರಿಂದ ಬೇಸತ್ತಿದ್ದ ಆನಂದ್ ಇಬ್ಬರ ನಡುವೆ ಆವಾಗವಾಗ ವಾಗ್ವಾದ ನಡೆಯುತ್ತಿತ್ತು ಎನ್ನಲಾಗಿದೆ.
ಕ್ರೆಡಿಟ್ ಕಾರ್ಡ್ʼದಾರರಿಗೆ ಬಿಗ್ ಅಪ್ಡೇಟ್..! ಏಪ್ರಿಲ್ 1 ರಿಂದ ನಿಯಮದಲ್ಲಿ ಬದಲಾವಣೆ
ಅದೇ ದ್ವೇಷದ ಹಿನ್ನೆಲೆ ತನ್ನ ಅಣ್ಣನನ್ನೇ ಆನಂದ್ ಇವತ್ತು ಕೊಡಲಿಯಿಂದ ಕೋಲೆಗೈದಿದ್ದು, ಆಶ್ತಿ ವಿವಾದ ಕೊಲೆಯಲ್ಲಿ ಅಂತ್ಯ ಕಂಡಂತಾಗಿದೆ. ಸ್ಥಳಕ್ಕೆ ಮುಧೋಳ ಪೊಲೀಸ್ರು ಭೇಟಿ ನೀಡಿ ಸ್ಥಳ ಮಹಜರು ಕಾರ್ಯ ನಡೆಸಿ, ಮೃತದೇಹವನ್ನ ಮರಣೋತ್ತರ ಪರೀಕ್ಷೆಗಾಗಿ ತಾಲ್ಲೂಕಾಸ್ಪತ್ರೆಗೆ ಸಾಗಿಸಲಾಗಿದ್ದಾರೆ.ಈ ಕುರಿತು ಮುಧೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.