ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಚ್ಚ ಸುದೀಪ್ ಪ್ರತಿಕ್ರಿಯೆ ನೀಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಫ್ರೆಂಡ್ಶಿಪ್ ಬೇರೆ ನ್ಯಾಯ ಬೇರೆ ಎಂದ ಸುದೀಪ್, ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಲೇಬೇಕು ಎಂದು ಹೇಳಿದ್ರು. ಯಾರು ತಪ್ಪಿಸ್ಥರು ಅವರಿಗೆ ಶಿಕ್ಷೆ ಆಗಲಿ ಎಂದು ಸುದೀಪ್ ಹೇಳಿದ್ರು. ಊರು ಯಾವುದೇ ಆಗಲಿ ಅನ್ಯಾಯ ಆದವರಿಗೆ ನ್ಯಾಯ ಸಿಗೋದು ಮುಖ್ಯ. ಪೊಲೀಸರು ಹಾಗೂ ಮಾಧ್ಯಮಗಳು ಸತ್ಯ ಹೊರತರುವ ಕೆಲಸ ಮಾಡ್ತಿದೆ ಎಂದು ಹೇಳಿದ್ರು.
CC Patil: ಕಾಂಗ್ರೆಸ್ ಸರ್ಕಾರದಲ್ಲಿ ಕಮಿಷನ್ ದಂಧೆ ಜೋರಾಗಿದೆ – ಸಿಸಿ ಪಾಟೀಲ್!
ಸ್ನೇಹಿತ ಅಥವಾ ಯಾರೇ ಇರಲಿ ಚಿತ್ರರಂಗಕ್ಕೆ ಕೆಟ್ಟ ಹೆಸರು ತರಬಾರದು ಬಾಳಿ, ಬದುಕಬೇಕಿದ್ದ ರೇಣುಕಾ ಸ್ವಾಮಿ ಕೊಲೆ ಆಗಿದೆ. ಆ ಕುಟುಂಬಕ್ಕೆ ನ್ಯಾಯ ಸಿಗಬೇಕಿದೆ. ಬ್ಯಾನ್ ಮಾಡುವುದಕ್ಕಿಂತ ರೇಣುಕಾಸ್ವಾಮಿ ಕೊಲೆಗೆ ನ್ಯಾಯ ಸಿಗೋದು ಮುಖ್ಯ ಎಂದು ಸುದೀಪ್ ಹೇಳಿದ್ರು.
ಈಗ ನಡೆಯುತ್ತಿರುವುದ ಯಾವುದು ಸರಿಯಿಲ್ಲ. ಇಂಥಹ ಬೆಳವಣಿಗೆಯನ್ನು ನೋಡಿದ್ರೆ ಚಿತ್ರರಂಗಕ್ಕೆ ನ್ಯಾಯ ಸಿಗಬೇಕಿದೆ ಎನಿಸುತ್ತಿದೆ. ಯಾರು ಏನೇ ಮಾಡಿದ್ರು ಚಿತ್ರರಂಗ ಹೆಸರು ಕೇಳಿ ಬರ್ತಿದೆ. ಈ ಪ್ರಕರಣದಲ್ಲಿ ತಪ್ಪಿಸ್ಥರಿಗೆ ಶಿಕ್ಷೆ ಆಗುವ ಮೂಲಕ ಚಿತ್ರರಂಗಕ್ಕೆ ಕ್ಲೀನ್ ಚಿಟ್ ಸಿಗಬೇಕಿದೆ ಎಂದು ಸುದೀಪ್ ಹೇಳಿದ್ರು.
ಕಾನೂನು ಬಲೆ ಅನ್ನೋದು ತಪ್ಪು, ಏನು ಕಾಣಿಸ್ತಿದೆ ಅದನ್ನೇ ನೋಡ್ತಿದ್ದೀವಿ. ಮಾಧ್ಯಮಗಳು ಪ್ರಯತ್ನ ಹಾಕಿ ಶ್ರಮವಹಿಸ್ತಿದೆ. ಪೊಲೀಸ್ ಸಿಬ್ಬಂದಿ ಕೂಡ ಕೆಲಸ ಮಾಡ್ತಿದೆ. ನಾನು ಅವರ ಪರ, ಇವರ ಪರ ಮಾತಾಡಲ್ಲ. ರೇಣುಕಾಸ್ವಾಮಿ ಪತ್ನಿ ಸಹನಾಗೆ ನ್ಯಾಯ ಸಿಗ್ಬೇಕು ಅಷ್ಟೇ ಎಂದು ಕಿಚ್ಚ ಸುದೀಪ್ ಹೇಳಿದ್ರು.
ಪ್ರತಿಯೊಂದು ವಿಚಾರ ಗೊತ್ತಿಲ್ಲ. ಎಲ್ಲರ ಹೃದಯ ನೊಂದಿದೆ. ಏನು ನಂಗೆ ಸರಿಯಾಗಿ ಕಾಣ್ತಿಲ್ಲ. ಚಿತ್ರರಂಗಕ್ಕೂ ಏನು ಸರಿಯಾಗಿ ಕಾಣ್ತಿಲ್ಲ. ಕಲಾವಿದರು ತುಂಬಾ ಜನ ಇದ್ದಾರೆ. ಚಿತ್ರರಂಗಕ್ಕೂ ಒಂದು ಕ್ಲೀನ್ ಚಿಟ್ ಸಿಕ್ಕಿದೆ. ಈ ಕೇಸ್ ನಿಂದ ದರ್ಶನ್ ಆಚೆ ಬಂದ್ರೆ ಏನು ಇರಲ್ಲ. ಬ್ಯಾನ್ ಅರ್ಥ ನನಗೆ ಗೊತ್ತಿಲ್ಲ. ಬ್ಯಾನ್ ಗಿಂತ ನ್ಯಾಯ ಅನ್ನೋ ಪದ ದೊಡ್ಡದು ಎಂದು ಸುದೀಪ್ ಹೇಳಿದ್ರು.