ಬೆಂಗಳೂರು:- ಮಹಿಳೆಯ ಕಿಡ್ನ್ಯಾಪ್ ಕೇಸ್ ಗೆ ಸಂಬಂಧಿಸಿದಂತೆ SIT ಕಚೇರಿಯಲ್ಲಿ ವಕೀಲರ ಜೊತೆ ಹೆಚ್ ಡಿ ರೇವಣ್ಣ ಸಮಾಲೋಚನೆ ನಡೆಸಿದ್ದಾರೆ.
ರೇವಣ್ಣ ವಿರುದ್ಧದ ಕಿಡ್ನ್ಯಾಪ್ ಕೇಸ್: ಸಿಐಡಿ ಕಚೇರಿಗೆ ದೌಡಾಯಿಸಿದ ಜೆಡಿಎಸ್ ಮುಖಂಡ ಗೊಟ್ಟಿಗೆರೆ ಮಂಜು..!
ಸುಮಾರು ಒಂದು ಗಂಟೆ ವಕೀಲರ ಜೊತೆ ಚರ್ಚೆ ನಡೆಸಿದ್ದಾರೆ. ಎಸ್ ಐಟಿ ಕಚೇರಿಯಲ್ಲಿ ವಕೀಲರ ಜೊತೆ ರೇವಣ್ಣ ಆಪ್ತ ಸಮಾಲೋಚನೆ ಮಾಡಿದ್ದಾರೆ. ತನಿಖೆ, ಅಧಿಕಾರಿಗಳ ವಿಚಾರಣೆ ಬಗ್ಗೆ ರೇವಣ್ಣ ಮಾಹಿತಿ ನೀಡಿದ್ದಾರೆ, ಅಧಿಕಾರಿಗಳು ಏನೆಲ್ಲಾ ಪ್ರಶ್ನೆ ಮಾಡಿದ್ರು ಕೇಸ್ ನ ಬಗ್ಗೆ ರೇವಣ್ಣ ಮಾಹಿತಿ ಪಡೆದಿದ್ದಾರೆ.
ಮುಂದಿನ ಕಾನೂನು ಹೋರಾಟದ ಬಗ್ಗೆ ರೇವಣ್ಣ ವಕೀಲರ ಜೊತೆ ಚರ್ಚೆ ನಡೆಯಲಿದೆ. ಜಾಮೀನು ಅರ್ಜಿ ಸಲ್ಲಿಕೆ ವಿಚಾರವಾಗಿಯೂ ಸಹ ರೇವಣ್ಣ ಮಾತುಕತೆ ನಡೆಸಲಿದ್ದು, ನಿನ್ನೆ ವಕೀಲರ ಜೊತೆ 1 ಗಂಟೆ ಸಮಯ ಮಾತನಾಡಲು ನ್ಯಾಯಾಧೀಶರು ಅವಕಾಶ ಕೊಟ್ಟಿದ್ದರು ಎನ್ನಲಾಗಿದೆ.