ಮಕ್ಕಳ ಉತ್ತಮ ಭವಿಷ್ಯ ಎಲ್ಲ ಪಾಲಕರಿಗೆ ಮುಖ್ಯ. ಹಾಗಾಗಿ ಮಕ್ಕಳ ವಿದ್ಯಾಭ್ಯಾಸ, ಮದುವೆ ಗಾಗಿ ಹಣ ಹೂಡಿಕೆ ಶುರು ಮಾಡ್ತಾರೆ. ಬ್ಯಾಂಕ್ ಮಾತ್ರವಲ್ಲ ಅಂಚೆ ಕಚೇರಿಯಲ್ಲೂ ಹಣ ಹೂಡಿಕೆ ಮಾಡಬಹುದು. ಅಂಚೆ ಕಚೇರಿಯಲ್ಲಿ ಹಣ ಹೂಡಿಕೆ ಸುರಕ್ಷಿತವೆಂದು ಪರಿಗಣಿಸಲಾಗಿದೆ. ಅಂಚೆ ಕಚೇರಿಯಲ್ಲಿ ಪಾಲಕರು ವಿಮಾ ಪಾಲಿಸಿಯನ್ನು ತೆಗೆದುಕೊಂಡಿದ್ದರೆ ಮಕ್ಕಳಿಗೆ ಕೂಡ ಪಾಲಿಸಿ ತೆಗೆದುಕೊಳ್ಳುವುದು ಸುಲಭ.
ಅಂಚೆ ಕಚೇರಿಯಲ್ಲಿ ಮಕ್ಕಳಿಗಾಗಿಯೇ ವಿಶೇಷ ಪಾಲಿಸಿಯಿದೆ. ಬಾಲ ಜೀವನ್ ಭೀಮಾ ಯೋಜನೆಯಡಿಯಲ್ಲಿ ವಿಮಾ ರಕ್ಷಣೆಯನ್ನು ನೀಡಲಾಗುತ್ತದೆ. ಇದು ತುಂಬಾ ಪ್ರಯೋಜನಕಾರಿ ಯೋಜನೆಯಾಗಿದೆ. ಈ ಯೋಜನೆಯು ಪಾಲಿಸಿದಾರರ ಮಕ್ಕಳಿಗೆ ಜೀವ ವಿಮಾ ರಕ್ಷಣೆಯನ್ನು ಒದಗಿಸುತ್ತದೆ. ಇಂದು ನಾವು ಬಾಲ ಜೀವನ್ ಭೀಮಾ ಯೋಜನೆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಿಮಗೆ ನೀಡ್ತೇವೆ.
ಬಾಲ ಜೀವನ್ ಬಿಮಾ ಯೋಜನೆ
ಅಂಚೆ ಇಲಾಖೆಯು ಮಕ್ಕಳಿಗಾಗಿ ಬಾಲ ಜೀವನ್ ಬಿಮಾ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯಲ್ಲಿ ಮಕ್ಕಳ ಪೋಷಕರು ಹೂಡಿಕೆಯನ್ನು ಮಾಡಬಹುದು. ಆದರೆ ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಮಗುವಿನ ಪೋಷಕರ ವಯಸ್ಸು 45 ವರ್ಷಕ್ಕಿಂತ ಹೆಚ್ಚಿರಬಾರದು. 5 ರಿಂದ 20 ವರ್ಷದ ಮಕ್ಕಳು ಬಾಲ ಜೀವನ್ ಬಿಮಾ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.
ಈ ಒಂದು ಕನಿಷ್ಟ 6 ರೂಪಾಯಿ ಹೂಡಿಕೆ ಮಾಡುವ ಯೋಜನೆಗೆ ಬಾಲ ಜೀವನ ಭೀಮಾ ಯೋಜನೆ ಎಂದು ಹೆಸರಿಸಲಾಗಿದೆ. ಈ ಮೂಲಕ ದೀರ್ಘಾವಧಿಯಲ್ಲಿ ಕಡಿಮೆ ಉಳಿತಾಯ ಮಾಡಿದರೂ ಮಕ್ಕಳಿಗೆ 20 ವಯಸ್ಸು ಆಗುತ್ತಿದ್ದಂತೆ ಹೂಡಿಕೆ ಮೊತ್ತ ನಿಮ್ಮ ನೆರವಿಗೆ ಬರಲಿದೆ. ಆದರೆ ಈ ಯೋಜನೆ ಅಡಿಯಲ್ಲಿ ಸಾಲ ಸೌಲಭ್ಯ ಪಡೆಯಲು ಅವಕಾಶ ಇರಲಾರದು.
ಅದೇ ರೀತಿ ಮಧ್ಯದಲ್ಲೇ ಯೋಜನೆ ನಿಲ್ಲಿಸಲು ಬಯಸಿದರೆ ಯೋಜನೆ ಮಾಡಿ 5 ವರ್ಷದ ನಂತರ ಸರೆಂಡರ್ ಮಾಡಬಹುದು ಆದರೆ ಪೂರ್ತಿ ಮೊತ್ತ ಬರಲಾರದು. ಎರಡು ಮಕ್ಕಳಿಗೆ ದಿನಕ್ಕೆ 36 ರೂಪಾಯಿ ಉಳಿತಾಯ ಮಾಡಿದ್ರೆ, ಮುಕ್ತಾಯದ ಸಮಯದಲ್ಲಿ, ಎರಡರ ಮೊತ್ತವು 6 ಲಕ್ಷದವರೆಗೆ ಪಡೆಯಲು ಅವಕಾಶವಿದೆ.ಈ ಯೋಜನೆಯ ಸಂಪೂರ್ಣ ವಿವರಗಳನ್ನು ತಿಳಿಯಲು ನೀವು ಹತ್ತಿರದ ಅಂಚೆ ಕಚೇರಿಗೆ ಹೋಗಿ ಸಂಬಂಧಪಟ್ಟ ಅಧಿಕಾರಿಗಳನ್ನ ಸಂಪರ್ಕಿಸಬಹುದು.
ಅರ್ಹತೆ ಏನು?
- ಪಾಲಿಸಿ ಮಾಡಿಸುವವರಿಗೆ 45 ವಯಸ್ಸು ದಾಟಿರಬಾರದು.
- ಕುಟುಂಬದಲ್ಲಿ ಇಬ್ಬರು ಮಕ್ಕಳಿಗೆ ಮಾತ್ರವೇ ಈ ಯೋಜನೆ ಅಡಿಯಲ್ಲಿ ಹೂಡಿಕೆ ಮಾಡಲು ಅವಕಾಶ ಇದೆ.
- 5-20 ವರ್ಷದ ಒಳಗಿನ ಮಕ್ಕಳಿಗೆ ಈ ಯೋಜನೆ ತೆರೆಯಬಹುದು.
- ಇದರಲ್ಲಿ ಇರುವ ಒಂದು ಅನುಕೂಲತೆ ಏನೆಂದರೆ ಪಾಲಿಸಿ ಮುಗಿಯುವ ಮುನ್ನ ಪಾಲಿಸಿ ಮಾಡುತ್ತಿರುವವರು ಮರಣ ಹೊಂದಿದ್ದರೆ ಆ ಮೊತ್ತ ಅನಂತರ ಕಟ್ಟಬೇಕಿಲ್ಲ ಬಳಿಕ ಮಕ್ಕಳಿಗೆ ಮೆಚ್ಯುರಿಟಿ ಅವಧಿಯಲ್ಲಿ ಈ ಹಣ ಕೂಡ ಸಿಗಲಿದೆ ಎಂದು ಹೇಳಬಹುದು.