ರಾಜಸ್ಥಾನ್ ರಾಯಲ್ಸ್ ವಿರುದ್ಧದ IpL ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹೀನಾಯ ಸೋಲು ಕಂಡಿದೆ.
ಮುಂಬೈ ಇಂಡಿಯನ್ಸ್ ಸೋಲಿಗೆ ನಾಯಕ ಹಾರ್ದಿಕ್ ಪಾಂಡ್ಯ ಔಟಾಗಿದ್ದು ಪ್ರಮುಖ ಕಾರಣವಾಯಿತು. ಇಲ್ಲಿಂದು ಪಂದ್ಯ ಪುನಃ ಆರ್ಆರ್ ಕಡೆ ವಾಲಿತು. ಇದರ ನಡುವೆ ಆತಿಥೇಯ ಅಭಿಮಾನಿಗಳು ಪದೇ ಪದೇ ಪಾಂಡ್ಯ ಅವರನ್ನು ಗೇಲಿ ಮಾಡುತ್ತಿದ್ದರು. ಪಂದ್ಯ ಮುಗಿದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ನಲ್ಲಿ ಮಾತನಾಡಿದ ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ, ನನ್ನ ವಿಕೆಟ್ ಪಂದ್ಯವನ್ನು ಬದಲಾಯಿಸಿತು, ನಾವು ಇನ್ನೂ ಉತ್ತಮವಾಗಿ ಮಾಡಬಹುದಿತ್ತು ಎಂದು ಹೇಳಿದ್ದಾರೆ.
![Demo](https://ainlivenews.com/wp-content/uploads/2023/12/spoorthi-1.jpg)
ವೈದ್ಯರ ನಿರ್ಲಕ್ಷ್ಯಕ್ಕೆ ವ್ಯಕ್ತಿ ಸಾವು – ಆಸ್ಪತ್ರೆ ಎದುರು ಶವ ಇಟ್ಟು ಪ್ರೊಟೆಸ್ಟ್!
ಇದು ಕಠಿಣ ರಾತ್ರಿ. ಈ ಪಂದ್ಯದಲ್ಲಿ ನಾವು ಬಯಸಿದ ರೀತಿಯಲ್ಲಿ ಆರಂಭ ಪಡೆದುಕೊಂಡಿಲ್ಲ. ನಾವು 150 ಅಥವಾ 160 ರನ್ ಗಳಿಸುವ ಅವಕಾಶವನ್ನು ಹೊಂದಿದ್ದೆವು ಎಂದು ನಾನು ಭಾವಿಸುತ್ತೇನೆ, ಆದರೆ ನನ್ನ ವಿಕೆಟ್ ಆಟವನ್ನು ಬದಲಾಯಿಸಿತು. ನಾನು ಇನ್ನಷ್ಟು ಉತ್ತಮವಾಗಿ ಏನಾದರು ಮಾಡಬಹುದಿತ್ತು,” ಎಂದು ಪಾಂಡ್ಯ ಶಾಕಿಂಗ್ ಹೇಳಿಕೆ ನೀಡಿದ್ದಾರೆ.
ಪಿಚ್ ಆರಂಭದಲ್ಲಿ ಬೌಲರ್ಗಳಿಗೆ ಹೆಚ್ಚಿನ ನೆರವು ನೀಡುತ್ತಿತ್ತು. ಇದನ್ನು ನೋಡುವುದು ಅನಿರೀಕ್ಷಿತ. ಇಲ್ಲಿ ಬೌಲರ್ಗಳು ಸಾಕಷ್ಟು ಕಷ್ಟಪಡುತ್ತಾರೆ. ಆದರೆ ಇದು ಅನಿರೀಕ್ಷಿತವಾಗಿತ್ತು. ಸೋಲಿನ ಹೊರತಾಗಿಯೂ, ತಂಡವು ಇನ್ನೂ ಚೇತರಿಸಿಕೊಳ್ಳಬಹುದು. ನಾವು ಇನ್ನಷ್ಟು ಹೆಚ್ಚು ಶಿಸ್ತು ಮತ್ತು ಧೈರ್ಯವನ್ನು ತೋರಿಸಬೇಕು ಎಂಬುದು ಹಾರ್ದಿಕ್ ಪಾಂಡ್ಯ ಮಾತು.
![](https://ainlivenews.com/wp-content/uploads/2024/01/Ad-Banner-copy-scaled.jpg)