ಉಡುಪಿ ಜಿಲ್ಲೆಯ ಮಣಿಪಾಲದ ಲೇಡಿಸ್ ಹಾಸ್ಟೆಲ್ ನಲ್ಲಿ ಕಿಡಿಗೇಡಿ ಕೃತ್ಯ ಮಾಡಿದ್ದ ವ್ಯಕ್ತಿಯನ್ನು ಪೋಲೀಸರು ಬಂಧಿಸಿದ್ದಾರೆ. ಸೆಪ್ಟೆಂಬರ್ 1ರಂದು ಬೆಳಗ್ಗಿನ ಜಾವ 2.15ರ ಸುಮಾರಿಗೆ ಅನಂತನಗರ ಎಂಬಲ್ಲಿರುವ ಹಿಂದುಳಿದ ವರ್ಗದವರ ಮೆಟ್ರಿಕ್ ನಂತರದ ಹಾಸ್ಟೆಲ್ನಲ್ಲಿ ಘಟನೆ ನಡೆದಿತ್ತು. ಅಪರಿಚಿತ ವ್ಯಕ್ತಿ ವಿದ್ಯಾರ್ಥಿನಿಯರು ಮಲಗಿದ್ದ ಕೊಠಡಿಯ ಕಿಟಕಿ ಮೆಶ್ ಹರಿದು ಅತಿರೇಕದ ವರ್ತನೆ ತೋರಿದ್ದ. ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
40ರ ನಂತರ ತಂದೆಯಾಗೋ ಬಗ್ಗೆ ಯೋಚನೆ ಮಾಡೋ ಗಂಡಸರೇ ಒಮ್ಮೆ ಈ ಸ್ಟೋರಿ ಓದಿ.!
ಸಿಸಿಟಿವಿ ದೃಶ್ಯಾವಳಿ, ಮಾಹಿತಿಗಳನ್ನು ಆಧರಿಸಿ ಉಡುಪಿಯ ಇಂದ್ರಾಳಿ ರೈಲ್ವೆ ನಿಲ್ದಾಣದ ಬಳಿಯಲ್ಲಿ ನವೀನ್ ನಾಯ್ಕ್ ಎಂಬವನನ್ನು ಪೊಲಿಸರು ಬಂಧಿಸಿದ್ದಾರೆ. ನವೀನ್ ನಾಯ್ಕ್ ವಿರುದ್ಧ ಉಡುಪಿ ನಗರ ಠಾಣೆಯಲ್ಲಿ ಈ ಹಿಂದೆಯೇ ಪ್ರಕರಣ ದಾಖಲಾಗಿತ್ತು. ಲೇಡಿಸ್ ಹಾಸ್ಟೆಲ್ ಗೆ ಸರಿಯಾದ ತಡೆಗೋಡೆ, ಭದ್ರತೆ ನಿಯೋಜಿಸಿ.. ಸಿಸಿಟಿವಿ ಅಳವಡಿಕೆ ಮಾಡಿ ಎಂದು ವಿದ್ಯಾರ್ಥಿನಿಯರು ಒತ್ತಾಯಿಸಿದ್ದಾರೆ.