ಕಲಬುರಗಿ: ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಪರಮೇಶ್ವರ್ ಬೇಜ ವಾಬ್ದಾರಿ ಹೇಳಿಕೆ ನೀಡಿದ್ದು ನಾವು ಖಂಡಿಸುತ್ತೇವೆ ಆರೋಪಿಗೆ ಗಲ್ಲು ಶಿಕ್ಷೆ ನೀಡುತ್ತ ನಮ್ಮ ಹೋರಾಟ ಅಂತ ಕಲಬುರಗಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಭಾರತಿ ಗುನ್ನಾಪುರ ಹೇಳಿದ್ದಾರೆ.. ಕಲಬುರಗಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಭಾರತಿ ಗುನ್ನಾಪುರ,
ಕಾಂಗ್ರೆಸ್ ಸರ್ಕಾರ ಬಂದ ಮೇಲೆ ದೌರ್ಜನ್ಯ ಪ್ರಕರಣ ಹೆಚ್ಚಾಗ್ತಿವೆ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಅಂತ ಹೇಳಿದ್ರು..ವಿಷ್ಯ ಇಷ್ಟೆಲ್ಲ ಗೊತ್ತಿದ್ರೂ ಅದು ಹುಡುಗಾ ಹುಡುಗಿಯ ವಯಕ್ತಿಕ ಲವ್ ಜಿಹಾದ್ ಅಂತ ಎಲ್ಲೂ ಕಾಣಿಸ್ತಿಲ್ಲ ಅಂತ ಗೃಹ ಸಚಿವರು ಹೇಳಿರೋದು ಎಷ್ಟರ ಮಟ್ಟಿಗೆ ಸರಿ ಅಂತ ಪ್ರಶ್ನಿಸಿದ್ರು ಇದೆಲ್ಲಾ ನೋಡಿದ್ರೆ ಕಾಂಗ್ರೆಸ್ ಸರ್ಕಾರ ಆರೋಪಿಯ ಸಮುದಾಯವನ್ನ ಓಲೈಸುವಂತೆ ಕಾಣ್ತಿದೆ ಅಂತ ಆಕ್ರೋಶ ವ್ಯಕ್ತಪಡಿಸಿದ್ರು..