ಬೆಂಗಳೂರು:- ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್ ಅವರನ್ನು ಚಿತ್ರರಂಗದಿಂದ ಬ್ಯಾನ್ ಆಗೋದು ಗ್ಯಾರಂಟಿ ಎಂದೇ ಹೇಳಲಾಗುತ್ತಿದೆ.
ಕಸದಿಂದ ವಿದ್ಯುತ್ ಉತ್ಪಾದಿಸುವ ಘಟಕಕ್ಕೆ ಬಿಬಿಎಂಪಿ ಆಯುಕ್ತ ತುಷಾರ್ ಗಿರಿ ನಾಥ್ ಭೇಟಿ..!
ಈ ಸಂಬಂಧ ಫಿಲಂ ಚೇಂಬರ್ನಲ್ಲಿ ಪದಾಧಿಕಾರಿಗಳು, ಅಧ್ಯಕ್ಷರು ತುರ್ತು ಸಭೆ ನಡೆಸಿದರು. ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಫಿಲಂ ಚೇಂಬರ್ ಅಧ್ಯಕ್ಷ ಎನ್.ಎಂ.ಸುರೇಶ್, ಕೊಲೆ ಪ್ರಕರಣವನ್ನು ಖಂಡಿಸಿದರು. ಈ ಅನ್ಯಾಯವನ್ನ ಖಂಡಿಸಲೇಬೇಕು. ಮೊದಲು, ನಾಳೆ ನಾವೆಲ್ಲಾ ಚಿತ್ರದುರ್ಗಕ್ಕೆ ಹೋಗ್ತೀವಿ, ರೇಣುಕಾಸ್ವಾಮಿ ಕುಟುಂಬಕ್ಕೆ ಸಾಂತ್ವನ ಹೇಳುತ್ತೇವೆ ಎಂದರು. ಆ ಮೂಲಕ ಫಿಲಂ ಚೇಂಬರ್ ಮೃತನ ಕುಟುಂಬದ ಪರ ನಿಲ್ಲುತ್ತದೆ ಎಂದು ಸ್ಪಷ್ಟನೆ ನೀಡಿದರು.
ನಂತರ ಪ್ರಕರಣದ ಬಗ್ಗೆ ಮಾತನಾಡಿದ ಎನ್ಎಂ ಸುರೇಶ್, ಇದು ಕೊಲೆಯಾಗಿದ್ದು ತುಂಬಾ ಸೂಕ್ಷ್ಮ ವಿಚಾರವಾಗಿದೆ. ಕಾನೂನಿನಡಿ ಪೊಲೀಸರು ತನಿಖೆ ಮಾಡ್ತಿದ್ದಾರೆ, ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. 2011ರಲ್ಲಿ ನಾವು ದರ್ಶನ್ ಹಾಗೂ ಪತ್ನಿ ವಿಜಯಲಕ್ಷ್ಮಿಯನ್ನ ಮಾತಾಡಿಸಿ ಸರಿ ಮಾಡಿದ್ವಿ. ಆದರೆ ಆದರೆ ಈಗ ಹಾಗೆ ಆಗಲ್ಲ, ಇದಕ್ಕೆ ಕಾನೂನಿನ ತೊಡಕು ಇದೆ.
ನಿರ್ಮಾಪಕರು ಕೋಟ್ಯಂತರ ರೂಪಾಯಿ ಹಣ ಹಾಕಿದ್ದಾರೆ, ಅವರ ಆರ್ಥಿಕ ಸ್ಥಿತಿಯನ್ನ ನೋಡಬೇಕಾಗುತ್ತೆ. ಮೂರು ತಿಂಗಳಿಂದ ಐದು ತಿಂಗಳವರೆಗೆ ದರ್ಶನ್ ಶೂಟಿಂಗ್ ಭಾಗಿಯಾಗೋದು ಅನುಮಾನ. ಹಾಗಾಗಿ ಆ ನಿರ್ಮಾಪಕರನ್ನ ಕರೆಸಿ, ಅವರಿಗೆ ಯಾವ ರೀತಿ ಸಹಾಯ ಮಾಡಲು ಸಾಧ್ಯವೋ ಹಾಗೆ ಮಾಡುತ್ತೇವೆ.
ಚಿತ್ರರಂಗದಿಂದ ನಟ ದರ್ಶನ್ ಅವರನ್ನು ಬ್ಯಾನ್ ಮಾಡುವ ವಿಚಾರವನ್ನು ಕಲಾವಿದರ ಸಂಘ ಎಲ್ಲರೂ ಸೇರಿ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ. ನಾವು ಕಾಂಪ್ರಮೈಸ್ ಮಾಡಿಕೊಂಡು, ದರ್ಶನ್ ಅವರನ್ನು ಸೇಫ್ ಮಾಡೋ ಪ್ರಮೇಯ ಇಲ್ಲ. ಆಗಿರೋದು ಕೊಲೆ, ಇಲ್ಲಿ ಯಾವುದೇ ಮುಚ್ಚುಮರೆಯಿಲ್ಲ. ಮುಂದಿನ ನಾಲ್ಕೈದು ದಿನಗಳಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.