ಬೆಂಗಳೂರು: ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟಿದ್ದಾರೆ ಸಂತೋಷ. ನಾನು ಕೂಡ ರಾಮ ಭಕ್ತೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
5 ಸಾವಿರ ಕೋಟಿ ಖರ್ಚು ಮಾಡಿ ರಾಮಮಂದಿರ ಕಟ್ಟಿದ್ದಾರೆ. ನಾವು ಒಂದು ತಿಂಗಳಿಗೆ 4 ಸಾವಿರ ಕೋಟಿ ಖರ್ಚು ಮಾಡಿ ರಾಜ್ಯದಲ್ಲಿ ರಾಮರಾಜ್ಯ ಮಾಡಿದ್ದೇವೆ. ಗ್ಯಾರಂಟಿ ಯೋಜನೆಗಳನ್ನು ಸ್ವಾರ್ಥಕ್ಕಾಗಿ ಕೊಟ್ಟಿರೋದಲ್ಲ ಎಂದು ಕುಟುಕಿದರು.
![Demo](https://ainlivenews.com/wp-content/uploads/2023/12/spoorthi-1.jpg)
Caste Census Report: ಸಿಎಂ ಸಿದ್ದರಾಮಯ್ಯಗೆ ಜಾತಿಗಣತಿ ವರದಿ ಸಲ್ಲಿಸಿದ ಜಯಪ್ರಕಾಶ್ ಹೆಗ್ಡೆ: ಏನೇನಿದೆ?
ಯಾರ ಕೈಲೂ ಗ್ಯಾರಂಟಿ ನಿಲ್ಲಿಸೋಕೆ ಸಾಧ್ಯವಿಲ್ಲ
ಕೋವಿಡ್-19 ನಿಂದ ಜನ ಸಾಕಷ್ಟು ತೊಂದರೆ ಅನುಭವಿಸಿದ್ದರು. ಬಡ ಜನರಿಗೆ ಅನುಕೂಲವಾಗಲಿ ಎಂದು ಗ್ಯಾರಂಟಿ ಕೊಟ್ಟಿದ್ದೇವೆ. ಈ ಗ್ಯಾರಂಟಿಗಳನ್ನು ಯಾರ ಕೈಲೂ ನಿಲ್ಲಿಸೋಕೆ ಸಾಧ್ಯವಿಲ್ಲ. ಬಿಜೆಪಿಯವರು ಸದನದಲ್ಲಿ ಜೋರಾಗಿ ಮಾತನಾಡ್ತಾ ಇದ್ದರು. ಗೃಹಲಕ್ಷ್ಮೀ ಯಾರಿಗೂ ಸಿಕ್ಕಿಲ್ಲ ಅಂತ ಬೊಬ್ಬೆ ಹೊಡೀತಾ ಇದ್ರು ಎಂದು ಚಾಟಿ ಬೀಸಿದರು.
![](https://ainlivenews.com/wp-content/uploads/2024/01/Ad-Banner-copy-scaled.jpg)