ಕೋಲಾರ : ರಾಜ್ಯಸಭಾ ಚುನಾವಣೆ ಸಂಬಂಧ ಕೋಲಾರದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಪ್ರತಿಕ್ರಿಯೆ ನೀಡಿದ್ದಾರೆ.
ಈ ಸಂಬಂಧ ಕೋಲಾರದಲ್ಲಿ ಮಾತನಾಡಿದ ಅವರು, ಇಬ್ಬರು ಅಡ್ಡ ಮತದಾನ ಮಾಡಿರುವುದು ಅಕ್ಷಮ್ಯ ಅಪರಾಧ. ಇಬ್ಬರು ಪಕ್ಷದ ಚಿಹ್ನೆ ಮೇಲೆ ಹಾರಿಸಿ ಬಂದಿದ್ದಾರೆ. ಎಲ್ಲಾದ್ರೂ ಒಂದು ಕಡೆ ಗಟ್ಟಿಯಾಗಿ ಇರೋದಲ್ಲಿ ಅನ್ನೋದು ಇವರ ಧೋರಣೆಯಿಂದ ತಿಳಿದಿದೆ. ಅಡ್ಡ ಮತದಾನ ಮಾಡಿರುವವರ ವಿರುದ್ಧ ಪಕ್ಷ ಕ್ರಮ ಕೈಗೊಳ್ಳಲಿದೆ. ಬೇರೆ ಪಕ್ಷಕ್ಕೆ ಸೇರ್ತಾರೋ,ಇಲ್ವೋ ನೋಡೋಣ.
ರಾಜ್ಯಾಧ್ಯಕ್ಷರು ಹಾಗೂ ನಾವೆಲ್ಲ ಚರ್ಚೆ ಮಾಡಿ ತೀರ್ಮಾನ ಮಾಡಿ ಕ್ರಮ ವಹಿಸುತ್ತೇವೆ. ಮೊದಲೇ ಅವರ ಮೇಲೆ ಕ್ರಮ ವಹಿಸಲಾಗಿತ್ತು,ಆದ್ರೂ ಈ ರೀತಿ ಮಾಡಿದ್ದಾರೆ. ಆಮಿಷ ಬರಲಾರದೆ ಈ ರೀತಿ ಮಾಡೋಕೆ ಸಾಧ್ಯವಿಲ್ಲ. ನಿರ್ಮಲ ಸೀತರಾಮನ್ ಭೇಟಿ ಮಾಡಲು ಪ್ರಯತ್ನ ಮಾಡಿದ್ದು ಬೋಗಸ್.
ಆಗಾದ್ರೆ ಈಗ ಹಾರಿಸಿ ಬಂದಿರುವವರನ್ನು ಇವರ ಮನೆಯಲ್ಲಿ ಇಡ್ಕೊಳ್ತಾರಾ ? ಬಿಜೆಪಿ ಹಾಗೂ NDA ಯಿಂದ ಅಭ್ಯರ್ಥಿ ಹಾಕಲಾಗಿತ್ತು. ಆದ್ರೆ ಇವರು ಪಾರ್ಟಿಗೆ ಮೋಸ ಮಾಡಿದ್ದಾರೆ, ಕ್ರಮ ಆಗುತ್ತೆ. ಜನಾರ್ದನ ರೆಡ್ಡಿ ಬಗ್ಗೆ ನಾನು ಏನೂ ಮಾತಾಡಲ್ಲ,ಅದು ಅವರ ವೈಯಕ್ತಿಕ ನಿರ್ಧಾರ ಎಂದರು.