ಬೆಳಗಾವಿ:– ಜಿಲ್ಲೆಯ ಅಂಗನವಾಡಿ ಮಕ್ಕಳಿಗೆ ದಿನನಿತ್ಯವೂ ಪ್ರಾಣಸಂಕಟ.! ಉಪ್ಪು ಖಾರ ಇಲ್ಲದ ರುಚಿಸದ ಆಹಾರವನ್ನು ಬಲವಂತವಾಗಿ ತಿನ್ನುವ ಶಿಕ್ಷೆ ಪುಟಾಣಿಗಳಿಗೆ ನೀಡಲಾಗ್ತಿದೆ. ಸರ್ಕಾರ ಜಾರಿ ಮಾಡಿರುವ ಹೊಸ ಫುಡ್ ಮೆನು ಪುಟ್ಟ ಮಕ್ಕಳಿಗೆ ಈಗ ಹೊಸ ಫಜಿತಿ ತಂದಿಟ್ಟಿದೆ.
ಹೊಸ ಮೆನು ಪ್ರಕಾರ ಪ್ಲಾಸ್ಟಿಕ್ ಪ್ಯಾಕೇಟ್ನಲ್ಲಿ ಬರುವ ಆಹಾರ ತಿನ್ಬೇಕಾಗಿದೆ. ಒಂದಿನ ಮಿಲ್ಲೇಟ್ ಲಾಡು,ಇನ್ನೋಂದಿನ ಪುಷ್ಟಿ ಲಾಡು, ಪ್ರತಿದಿನ ಮಧ್ಯಾಹ್ನ ಅಣ್ಣ ಖಿಚಡಿ, ಇನ್ನೋಂದಿನ ಅಣ್ಣ ಸಾಂಬಾರ್ ನಿಡಲಾಗ್ತಿದ್ದು, ಮೊದಲಿನ ಆಹಾರ ಪದ್ಧತಿಯನ್ನೇ ಮುಂದುವರಿಸುವಂತೆ ಮಕ್ಕಳ ಪಾಲಕರು ಆಗ್ರಹಿಸುತ್ತಿದ್ದಾರೆ.
ದುರಂತ ಅಂದ್ರೆ ಅಂಗನವಾಡಿಗಳಲ್ಲಿ ನೀಡಲಾಗುತ್ತಿರುವ ಅಣ್ಣ ಖಿಚಡಿ ಕೆಂಪಗಾಗಿರುವ ಖಾರಿನಿಂದಲೇ ತುಂಬಿದ್ದು, ಮಕ್ಕಳು ಒಲ್ಲದ ಮನಸ್ಸಿನಿಂದ ಖಾರವಾದ ಖಿಚಡಿಯನ್ನೇ ತಿನ್ನಬೇಕು. ಅದ್ರಲ್ಲೂ ಅಂಗನವಾಡಿಗಳಲ್ಲಿ ಕೊಡ್ತಾ ಇರೋ ಅಣ್ಣ ಸಾಂಬಾರ್ ರುಚಿ ಆ ದೇವರೇ ಬಲ್ಲ.! ತರಕಾರಿ, ಸೊಪ್ಪು,ಅಡುಗೆ ಎಣ್ಣೆ ಬಳಸದೇ ಮಾಡಿರುವ ಸಾಂಬಾರ್ ಅಣ್ಣಕ್ಕೆ ಬಡಿಸಲಾಗ್ತಿದೆ. ಪುಟಾಣಿಗಳು ಈ ಸತ್ವರಹಿತ ಅಣ್ಣ ಸಾಂಬಾರ್ ತಿನ್ಬೇಕಾಗಿದೆ. ಸಾಂಬಾರ್ ತಯಾರಿಸೋಕೆ ಅಡುಗೆ ಎಣ್ಣೆ ಕೂಡ ಪೂರೈಕೆಯಾಗ್ತಿಲ್ಲ.
ಹೊಸ ಮೆನು ಜಾರಿಯಾದ ಬಳಿಕ ಅಂಗನವಾಡಿಗಳಿಗೆ ಪೂರೈಕೆಯಾಗ್ತಿದ್ದ ಬೆಲ್ಲ, ಸಕ್ಕರೆ,ಹೆಸ್ರಕಾಳು,ಹೆಸ್ರುಬೇಳೆ,ಅಡುಗೆ ಎಣ್ಣೆ , ಶೇಂಗಾ ಎಲ್ಲವೂ ಬಂದ್ ಆಗಿದೆ. ಶೇಂಗಾ ಬೆಲ್ಲ ಇಷ್ಟಪಟ್ಟು ತಿಂತಿದ್ದ ಮಕ್ಕಳು ಈಗ ಹೊಸ ಮಿಲ್ಲೇಟ್ ಲಾಡು ತಿನ್ನಲು ಈಗ ಹಿಂದೇಟು ಹಾಕ್ತೀವೆ. ಹಿಂದಿನ ಮೆನು ಪ್ರಕಾರ ನಿಡಲಾಗ್ತಿದ್ದ ರವೆ ಪಾಯಸ ಬದ್ಲು ಅಣ್ಣ ಖಿಚಡಿ ನೀಡಲಾಗುತ್ತಿದೆ. ಮಕ್ಕಳೆಲ್ಲಾ ಖಾರಖಿಚಡಿ ತಿಂದು ಖಾರಖಾರ ಅಂತಾ ಒದ್ದಾಡುವ ಹಾಗೆಆಗಿದೆ. ಮಸಾಲೆ ಪದಾರ್ಥಗಳಲ್ಲದ ಅಡುಗೆ ಎಣ್ಣೆ ಉಯೋಗಿಸದೇ ಮಾಡಿದ ಸಿಪ್ಪೆ ಸಾಂಬಾರ್ ತಿಂದು ಮಕ್ಕಳು ಸುಸ್ತಾಗ್ತಿದ್ದಾವೆ. ಹೊಸ ಮೆನು ಜಾರಿಯಾದ ಬಳಿಕ ಅದಕ್ಕೆ ಮಕ್ಕಳ ಪ್ರತಿಕ್ರಿಯೆ ಏನು ಎಂಬುದನ್ನ ವಿಚಾರಿಸದೇ ಅಧಿಕಾರಿಗಳು ಮೈಗಳ್ಳರಾಗಿದ್ದಾರೆ.
ಅಂಗನವಾಡಿ ಮಕ್ಕಳಿಗೆ ಪೌಷ್ಟಿಕ ಆಹಾರ ಸಿಗುತ್ತಿಲ್ಲ ಎಂಬ ದೂರುಗಳು ಕೇಳಿ ಬಂದ ಹಿನ್ನಲೆಯಲ್ಲಿ ಸರ್ವೋಚ್ಚ ನ್ಯಾಯಾಲಯಗಳು ಒಳ್ಳೆಯ ಪೌಷ್ಟಿಕ ಆಹಾರ ಕೊಡುವಂತೆ ಆದೇಶ ನೀಡಿದೆ. ಆದ್ರೆ ಸರ್ಕಾರ ಮಾತ್ರ ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ಎಡವಿದೆ. ಇನ್ನು ಅಂಗನವಾಡಿ ಮಕ್ಕಳ ಆಹಾರ ಪದ್ಧತಿಯಲ್ಲಿ ಬದಲಾವಣೆ ಆಗುತ್ತಾ ಎಂಬುದನ್ನು ಕಾದು ನೋಡಬೇಕು.