ಬೆಂಗಳೂರು: ಪೀಣ್ಯ ಫ್ಲೈ ಓವರ್ ಬಳಸೋ ವಾಹನ ಸವಾರರಿಗೆ ಗುಡ್ ನ್ಯೂಸ್ ಇದೆ. ಬೆಂಗಳೂರಿನಿಂದ ರಾಜ್ಯದ 22 ಜಿಲ್ಲೆಗಳು ಸೇರಿದಂತೆ ಗೋವಾ, ಮಹಾರಾಷ್ಟ್ರಕ್ಕೆ ಸಂಪರ್ಕಿಸುವ ಈ ಮೇಲ್ ಸೇತುವೆ ಆಗಾಗ್ಗೆ ದುರಸ್ತಿ ಕಾರಣಕ್ಕೆ ಬಂದ್ ಆಗುತ್ತಿತ್ತು. ಇನ್ಮುಂದೆ ಅಂತ ಪರಿಸ್ಥಿತಿ ಎದುರಾಗಲ್ಲವಂತೆ. ಫೆಬ್ರವರಿಯಿಂದ ಎಲ್ಲ ವಾಹನಗಳ ಓಡಾಟಕ್ಕೆ ಗ್ರೀನ್ ಸಿಗ್ನಲ್ ಸಿಗಲಿದೆ.
ಎರಡು ವರ್ಷದಿಂದ ಗ್ರಹಣ ಹಿಡಿದ್ದಿದ್ದ ಪೀಣ್ಯ ಫ್ಲೈ ಓವರ್ ಗೆ ಇದೀಗ ಬಿಗ್ ರಿಲೀಫ್ ಸಿಕ್ಕಿದೆ. ಪೀಣ್ಯ ಪ್ಲೈಓವರ್ ಮೇಲೆ ಎಲ್ಲಾ ವಾಹನಗಳ ಸಂಚಾರಕ್ಕೆ ಐಐಎಸ್ ಸಿ ಗ್ರೀನ್ ಸಿಗ್ನಲ್ ನೀಡಿದೆ. ಫೆಬ್ರವರಿ ಮೊದಲ ವಾರದಿಂದಲ್ಲೇ ಬಸ್ಸು, ಲಾರಿಗಳ ಹೆವಿ ವೈಕಲ್ ಸಂಚಾರ ಆರಂಭ ಆರಂಭವಾಗಲಿದೆ.
ಹೌದು..ಏಷ್ಯಾದ ಅತಿದೊಡ್ಡ ಕೈಗಾರಿಕಾ ಪ್ರದೇಶದ ಬಳಿ 120 ಪಿಲ್ಲರ್ ಹೊಂದಿರುವ 4.4 ಕಿ.ಮೀಟರ್ ಉದ್ದ ಇರುವ ಪೀಣ್ಯ ಪ್ಲೈ ಓವರ್ ಆಗಾಗ ದುರಸ್ಥಿ ಕಾರ್ಯ ನಡೆಯುತ್ತಲೇ ಇತ್ತು. ಕಳೆದ ಎರಡು ವರ್ಷದ ಹಿಂದೆ ಪಿಲ್ಲರ್ ನಂಬರ್ 101 ಮತ್ತು 102 ಪಿಲ್ಲರ್ ನಲ್ಲಿ ಕೇಬಲ್ ಗಳು ತುಕ್ಕು ಹಿಡಿದಿದ್ದರಿಂದ ಲಾರಿ, ಬಸ್ಸು ಸೇರಿದಂತೆ ಹೆವಿ ವೈಕಲ್ ವಾಹನಗಳ ಸಂಚಾರ ನಿಷೇಧಿಸಲಾಗಿತ್ತು. ಎರಡು ವರ್ಷಗಳಿಂದ ಹೊಸ ಕೇಬಲ್ ಅಳವಡಿಸಿದ ಐಐಎಸ್ಸಿ ಸಂಸ್ಥೆ ಕಳೆದ ವಾರ ಎಲ್ಲಾ ವಾಹನಗಳನ್ನ ಮೂರು ದಿನಗಳ ಕಾಲ ಬಂದ್ ಮಾಡಿಸಿ ಭಾರೀ ವಾಹನಗಳನ್ನ ಬಿಟ್ಟು ಲೋಡ್ ಟೆಸ್ಟಿಂಗ್ ಮಾಡಿಸಲಾಗಿತ್ತು. ಈ ಹಿಂದೆ ಹಲವು ದಿನಗಳ ವಾಹನ ಸಂಚಾರವೂ ಬಂದ್ ಮಾಡಲಾಗಿತ್ತು. ಇನ್ಮುಂದೆ ಮೇಲ್ ಸೇತುವೆ ಸೇವೆ ನಿರಂತರವಾಗಿರುತ್ತೆ. ಯಾವುದೇ ತೊಂದರೆ ಇರೋದಿಲ್ಲ ಅಂಥ ಐಐಎಸ್ ಸಿ ತಜ್ಣರು ಅಭಿಪ್ರಾಯ ವ್ಯಕ್ತಪಡಿಸ್ತಾರೆ.
ಐಐಎಸ್ ಸಿ ಸಂಸ್ಥೆಯ ಸಿವಿಲ್ ಇಂಜಿನಿಯರ್ ವಿಭಾಗ ಪೀಣ್ಯ ಮೆಲ್ಸೇತುವೆ ಮೇಲೆ ಮೂವತ್ತು ಟನ್ ತೂಕದ 16 ಟ್ರಾಕ್ ಗಳಿಂದ ಲೋಡ್ ಟೆಸ್ಟಿಂಗ್ ಮಾಡಿ ವರದಿ ತಯಾರಿಸಿ, ನ್ಯಾಷನಲ್ ಹೈವೆ ಅಥಾರಿಟಿ ಆಫ್ ಇಂಡಿಯಾಗೆ ಸಲ್ಲಿಸಲಾಗಿದೆ. ಸದ್ಯ ವರದಿಯಲ್ಲಿ ಎಲ್ಲಾ ರೀತಿಯ ವಾಹನಗಳು ಸಂಚಾರ ಮಾಡಬಹುದು. ಮುಂದಿನ 100 ವರ್ಷಗಳವರೆಗೆ ಸೇತುವೆ ಯೋಗ್ಯವಾಗಿದೆ ಅನ್ನೋ ಮಾಹಿತಿಯನ್ನ ಎನ್ಎಚ್ಏಐಗೆ ನೀಡಿದೆ. ಫೆಬ್ರವರಿ ಮೊದಲ ವಾರದಿಂದಲ್ಲೇ ಎಲ್ಲಾ ವಾಹನಗಳ ಸಂಚಾರಕ್ಕೆ ಅವಕಾಶ ಕೊಡುವ ಸಾಧ್ಯತೆಯಿದೆ. ಆದರೆ ಭಾರೀ ವಾಹನಗಳ ಸಂಚಾರ ಹಗಲು, ಪೀಕ್ ಅವರ್ಸ್ ನಲ್ಲಿ ಕೊಡಬಾರದು. ರಾತ್ರಿ ಹೊತ್ತಿನಲ್ಲಿ ಅವಕಾಶ ನೀಡಲಿ. ಇದರಿಂದ ಟ್ರಾಫಿಕ್ ದಟ್ಟಣೆಯೂ ಕಡಿಮೆ ಆಗುತ್ತೆ ಎನ್ನುವ ಅಭಿಪ್ರಾಯ ವಾಹನ ಸವಾರರದ್ದು.
ಒಟ್ಟಾರೆ ಕಳೆದ ಎರಡು ವರ್ಷದಿಂದ ಗ್ರಹಣ ಹಿಡಿದಿದ್ದ ಪೀಣ್ಯ ಪ್ಲೈ ಓವರ್ ಗೆ, ಮುಂದಿನ ವಾರದಿಂದ ಮುಕ್ತಿ ಸಿಗುವ ಎಲ್ಲ ಲಕ್ಷಣ ಕಂಡುಬರುತ್ತಿದೆ.ಇನ್ನಾದ್ರೂ ಸಂಚಾರ ದಟ್ಟನೆಗೆ ಕಡಿವಾಣ ಬೀಳುತ್ತಾ ಅನ್ನೋದನ್ನ ಕಾದುನೋಡಬೇಕಿದೆ