ರಾಜ್ಯದಲ್ಲಿ ದಿನದಿಂದ ದಿನಕ್ಕೆ ಡೆಂಘ್ಯೂ ಮಹಾಮಾರಿಯ ಅಬ್ಬರ ಜೋರಾಗ್ತಿದೆ.. ಪ್ರತಿನಿತ್ಯ ಮೂರ್ನಾಲ್ಕು ಸಾವು ಆಗ್ತಿದೆ. ಸರ್ಕಾರ ಮಾತ್ರ ಇನ್ನೂ ಸರಿಯಾದ ಮುಂಜಾಗ್ರತಾ ಕ್ರಮ ಕೈಗೊಳ್ಳದೇ ಬರೀ ಸಭೆ ಅಂತಾ ಸಮಯ ಕಳೆಯುತ್ತಿದೆ ಅಂತಾ ವಿಪಕ್ಷ ನಾಯಕ ಆರ್ ಅಶೋಕ್ ಸರ್ಕಾರದ ವಿರುದ್ದ ಗುಡುಗಿದ್ದಾರೆ.
ಸಿಲಿಕಾನ್ ಸಿಟಿಯಲ್ಲಿ ದಿನೇ ದಿನೇ ಹೆಚ್ಚುತ್ತಲೇ ಇದೆ ಡೆಂಗ್ಯೂ ಮಹಾಮಾರಿ ರೋಗ ಈ ಹಿನ್ನೆಲೆ. ವಿರೋದ ಪಕ್ಷ ಆರ್ ಅಶೋಕ್ ಜೊತಗೆ ಶಾಸಕ ಸಿ ಕೆ ರಾಮೂರ್ತಿ ಜನರಲ್ ಆಸ್ಪತ್ರೆ ಭೇಟಿ ನೀಡಿ ಎಲ್ಲಾ ಡೆಂಗ್ಯೂ ರೋಗಿಗಳ ಆರೋಗ್ಯ ಸ್ಥಿತಿ ವಿಚಾರಿಸಿದ್ರು. ಇನ್ನು ರೋಗಿಗಳ ಆರೋಗ್ಯದ ಬಗ್ಗೆ ವೈದ್ಯರ ಬಳಿ ಮಾಹಿತಿ ಪಡೆದುಕೊಂಡು ರೋಗಿಗಳಿಗೆ ಸರಿಯಾಗಿ ಪಾರ್ಶೀಲನೆ ಮಾಡಿ ಚಿಕಿತ್ಸೆ ನೀಡುವಂತೆ ಸಲಹೆ ನೀಡಿದಾರು ಹಾಗೆ ವಿರೋಧ ಪಕ್ಷದ ನಾಯಕನಾಗಿ ಆರ್ ಅಶೋಕ್ ಸರ್ಕಾರವನ್ನ ಎಚ್ಚರಿಸೋ ಕೆಲಸ ಮಾಡ್ತಿದ್ದೇನೆ ಎಂದು ಅಡಳಿತ ಸರ್ಕಾರಕೆ ಎಚ್ಚರಿಕೆ ಕೊಟ್ಟರು.
ಇಂದು ಜಯನಗರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಡೆಂಘ್ಯೂ ರೋಗಿಗಳ ಆರೋಗ್ಯ ವಿಚಾರಿಸಿದ ಅವ್ರು, ಸರ್ಕಾರ ಕೂಡಲೇ ಮೆಡಿಕಲ್ ಎಮರ್ಜೆನ್ಸಿ ಘೋಷಣೆ ಮಾಡಬೇಕು, ಡಂಘ್ಯೂ ಟೆಸ್ಟಿಂಗ್ ನಿಂದ ಸಂಪೂರ್ಣ ಚಿಕಿತ್ಸೆಯ ಹೊಣೆ ಹೊರಬೇಕು, ಎಲ್ಲರಿಗೂ ಉಚಿತ ಚಿಕಿತ್ಸೆ ನೀಡಬೇಕು, ಜನರ ಪ್ರಾಣದ ರಕ್ಷಣೆಗೆ ಸರ್ಕಾರ ಹಣ ಬಿಡುಗಡೆ ಮಾಡಿ, ಎಲ್ಲ ಆಸ್ಪತ್ರೆಯಲ್ಲೂ ಕರೋನಾ ಮಾದರಿಯಲ್ಲಿ ಡೆಂಘ್ಯೂಗಾಗಿ ಬೆಡ್ಗಳ ವ್ಯವಸ್ಥೆ ಮಾಡಿಸಬೇಕು ಎಂದು ಆಗ್ರಹ ಪಡಿಸಿದ್ದಾರೆ..
ಸರ್ಕಾರವನ್ನ ಎಚ್ಚರಿಸೋಕೆಲಸ ವಿರೋಧ ಪಕ್ಷದ ನಾಯಕನಾಗಿ ಮಾಡಿದ್ದೇನೆ.. ಈ ಸರ್ಕಾರವನ್ನ ಎಚ್ಚರಿಸದೇ ಹೋದ್ರೇ ಯಾವ ಕೆಲಸವನ್ನು ಸಹ ಮಾಡೋದಿಲ್ಲ ನಾಳೆಯಿಂದ ಇಡೀ ರಾಜ್ಯಾದ್ಯಂತ ನಮ್ಮ ಪಕ್ಷದ ನಾಯಕರು, ಶಾಸಕರು ಆಸ್ಪತ್ರೆಗಳಿಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಬಗ್ಗೆ ನಿಗಾವಹಿಲಿದ್ದಾರೆ ಅಂತಾ ಆರ್ ಅಶೋಕ್ ತಿಳಿಸಿದ್ದಾರೆ..