ಗದಗ: ಬಿಜೆಪಿ ಮೇಲಿನ ಸೇಡಿಗಾಗಿ ಸರ್ಕಾರ ಶಿಕ್ಷಣ ವ್ಯವಸ್ಥೆ ಹಾಳು ಮಾಡಿದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವ್ಹಿ ಸಂಕನೂರ ಆರೋಪಿಸಿದರು. ಗದಗನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು, ಚಕ್ರವರ್ತಿ ಸೂಲಿಬೆಲೆ ಬರೆದ “ತಾಯಿ ಭಾರತೀಯ ಅಮರ ಪುತ್ರರು” ಎಂಬ ಪಾಠದಲ್ಲಿ ಸ್ವಾತಂತ್ರ ಹೋರಾಟಗಾರರಾದ ರಾಜಗುರು,
ಸುಖದೇವ್, ಭಗತ್ ಸಿಂಗ್ ಜೀವನ ಚರಿತ್ರೆ ಅಳವಡಿಸಲಾಗಿತ್ತು. ಆದರೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಈ ಪಾಠವನ್ನು ಕೈಬಿಟ್ಟಿತು. ಇಂತಹ ಮಹಾನ್ ನಾಯಕರ ಪಾಠಗಳನ್ನು ಬದಲಾವಣೆ ಮಾಡಿದ್ದು ಯಾಕೆ.? ಸರ್ಕಾರಕ್ಕೆ ಚಕ್ರವರ್ತಿ ಸೂಲಿಬೆಲೆ ಮೇಲಿನ ದ್ವೇಷದಿಂದ, ಬಿಜೆಪಿ ಮೇಲಿನ ಸೇಡಿನಿಂದ ಪಠ್ಯಕ್ರಮ ಬದಲಾಯಿಸಿದ್ದು ಸರಿಯಾದ ಕ್ರಮವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಸರ್ಕಾರದ ವಿರುದ್ಧ ಹರಿಹಾಯ್ದು ಸಿದ್ದರಾಮಯ್ಯ ಸರ್ಕಾರ ಆಡಳಿತಕ್ಕೆ ಬಂದ ನಂತರ ಶಿಕ್ಷಣ ವ್ಯವಸ್ಥೆ ಹಾಳಾಗಿದೆ. ಶಿಕ್ಷಣ ವ್ಯವಸ್ಥೆ ಸಂಪೂರ್ಣ ಹದಗೆಡಲು ಶಿಕ್ಷಣ ಸಚಿವ ಮಧು ಬಂಗಾರಪ್ಪನವರ ನಿರ್ಲಕ್ಷ ಮನೋಭಾವನೆ ಕಾರಣ ಎಂದು ಗಂಭೀರವಾಗಿ ಆರೋಪಿಸಿದರು. ಸರ್ಕಾರದ ಎಡವಟ್ಟು ಮಾಡಿ ಸಾರ್ವಜನಿಕರ, ಶಿಕ್ಷಣ ತಜ್ಞರ ಟೀಕೆಗೆ ಗುರಿಯಾಗಿದೆ. ಶಿಕ್ಷಣ ಇಲಾಖೆಯಲ್ಲಿ ಪಠ್ಯಕ್ರಮದ ಕುರಿತು ರಾಜಕೀಯ ಹಸ್ತಕ್ಷೇಪ ಆಗಬಾರದು. 6ನೇ ತರಗತಿಯಿಂದ 8ನೇ ತರಗತಿ ವರೆಗಿನ ಕನ್ನಡ ಹಾಗೂ ಸಾಮಾನ್ಯ ವಿಜ್ಞಾನ ವಿಷಯದಲ್ಲಿ 9 ಪಾಠಗಳನ್ನು ರದ್ದು ಮಾಡಿ ಬದಲಾವಣೆ ಮಾಡಿದರು.
ಪಠ್ಯ ಪುಸ್ತಕ ಬದಲಾವಣೆ ಮಾಡಿ ವಿದ್ಯಾರ್ಥಿಗಳಿಗೆ ತಲುಪಿಸಲಿಲ್ಲ. ಆದರೆ, ಕೇವಲ ಶಿಕ್ಷಕರಿಗೆ ಮಾತ್ರ ತಲುಪಿಸಿದರು. ಇದರಿಂದ ವಿದ್ಯಾರ್ಥಿಗಳ ಪಲಿತಾಂಶದ ಮೇಲೆ ಭಾರಿ ಪ್ರಮಾಣದಲ್ಲಿ ಬದಲಾವಣೆ ಆಗಿದ್ದು ದುರದುಷ್ಟಕರ ಎಂದು ವಾಗ್ದಾಳಿ ನಡೆಸಿದರು. ಈ ವೇಳೆ ಜಯದೇವ ಮೇಣಸಗಿ, ಪುನೀತ್ ಬೆನಕನವಾರಿ, ರವಿ ನರೆಗಲ್, ಹನಮಂತ ಹಳ್ಳೂರ, ಶಿವು ಜೋಗಿನ ಹಾಗೂ ಸೋಮು ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.