ಬೆಂಗಳೂರು:- ರಾಜ್ಯಪಾಲರದ್ದು ಸಂವಿಧಾನ ವಿರೋಧಿ ನಡವಳಿಕೆ ಎಂದು ಸಚಿವ ಸುಧಾಕರ್ ಕಿಡಿಕಾರಿದ್ದಾರೆ.
ಸಂವಿಧಾನ ವಿರೋಧಿ ನಡವಳಿಕೆ ರಾಜ್ಯಪಾಲರದ್ದು. ವಾಪಸ್ ಕರೆಸಿಕೊಳ್ಳಬೇಕು ಎಂಬ ಹೋರಾಟ ಮಾಡ್ತೇವೆ ಎಂದರು.
ಎಣ್ಣೆ ಮತ್ತಲ್ಲಿ ಸರ್ಕಾರಿ ಬಸ್ ಗೆ ಕಲ್ಲು ತೂರಿದ ಯುವಕರು: ಓರ್ವ ಪೋಲೀಸ್ ವಶಕ್ಕೆ, ನಾಲ್ವರ ಬಂಧನಕ್ಕೆ ಪೋಲೀಸರ ಶೋಧ
ಈಗಾಗಲೇ ರಾಜ್ಯಪಾಲರ ನಡೆ ಬಗ್ಗೆ ಕಾಂಗ್ರೆಸ್, ಇಂಡಿಯಾ ಒಕ್ಕೂಟ ವಿರೋಧ ಮಾಡಿದೆ. ಒಂದೆಡೆ ನಾಲ್ಕು ಬಿಜೆಪಿ, ಜೆಡಿಎಸ್ ನಾಯಕರ ವಿರುದ್ಧ ಲೋಕಾಯುಕ್ತ ಪ್ರಾಸಿಕ್ಯೂಷನ್ ಅನುಮತಿ ಕೇಳಿದೆ. ಅದರ ಬಗ್ಗೆ ಯಾವುದೇ ತೀರ್ಮಾನ ಮಾಡದೆ ತರಾತುರಿಯಲ್ಲಿ ದುರುದ್ದೇಶದಿಂದ ಸಿಎಂ ಮೇಲೆ ಪ್ರಾಸಿಕ್ಯೂಷನ್ಗೆ ಅನುಮತಿ ಕೊಟ್ಟಿದ್ದಾರೆ. ಕಾನೂನು ಬಾಹಿರವಾಗಿ ಅನುಮತಿ ಕೊಟ್ಟಿದ್ದಾರೆ. ಕೇಂದ್ರ ಸರ್ಕಾರದ ನಿಯಮಾವಳಿಗಳ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಹಾಗಾಗಿ ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ಪ್ರತಿಭಟನೆ ಆಗಿವೆ. ಶನಿವಾರ ಸಚಿವರು, ಶಾಸಕರು, ಸಂಸದರ ರಾಜಭವನ ಚಲೋ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.
ವಿಶೇಷ ಅಧಿವೇಶನ ಕರೆಯುವಂತಹ ಪರಿಸ್ಥಿತಿ ತಲುಪಿಲ್ಲ. ಸರ್ವಾಧಿಕಾರಿ ಧೋರಣೆಗಳ ವಿರುದ್ಧ ಹೋರಾಡಲು ನಾವು ಎಲ್ಲಾ ರೀತಿಯ ಪ್ರಯತ್ನ ಮಾಡ್ತೇವೆ. ಸಂವಿಧಾನ ವಿರೋಧಿ ನಡವಳಿಕೆ ರಾಜ್ಯಪಾಲರು ನಡೆದುಕೊಂಡರೆ ವಾಪಸ್ ಕರೆಸಿಕೊಳ್ಳಬೇಕು ಎಂಬ ಹೋರಾಟ ಮಾಡ್ತೇವೆ. ಆದರೆ ಪಕ್ಷ ಇನ್ನೂ ಆ ರೀತಿಯ ಸೂಚನೆ ಕೊಟ್ಟಿಲ್ಲ. ಪಕ್ಷದ ಉನ್ನತಮಟ್ಟದ ವರಿಷ್ಠರು ಏನು ಸೂಚನೆ ಕೊಡ್ತಾರೋ ಅದನ್ನ ಪಾಲನೆ ಮಾಡುತ್ತೇವೆ ಎಂದಿದ್ದಾರೆ.