ಫ್ಯಾನ್ಸ್ ಗೆ ಗುಡ್ ನ್ಯೂಸ್ ಸಿಕ್ಕಿದ್ದು, ಆರ್ಸಿಬಿಗೆ ಮತ್ತೋರ್ವ ಸ್ಟಾರ್ ಕನ್ನಡಿಗನ ಎಂಟ್ರಿ ಆಗೋದು ಪಕ್ಕಾ ಎನ್ನಲಾಗಿದೆ.
ಇತ್ತೀಚೆಗೆ ಎಂ. ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಮಹಾರಾಜ ಟ್ರೋಫಿ ಲೀಗ್ ಪಂದ್ಯದಲ್ಲಿ ಮಂಗಳೂರು ಡ್ರಾಗನ್ಸ್ ವಿರುದ್ಧ ಮೈಸೂರು ವಾರಿಯರ್ಸ್ 27 ರನ್ಗಳ ಗೆಲುವು ಸಾಧಿಸಿತ್ತು. ಮೈಸೂರು ತಂಡದ ಪರ ಅತ್ಯುತ್ತಮವಾಗಿ ಬ್ಯಾಟ್ ಬೀಸಿದ ಕರುಣ್ ನಾಯರ್ ಕೇವಲ 48 ಎಸೆತಗಳಲ್ಲಿ ಅಜೇಯ 124 ರನ್ ಚಚ್ಚಿದ್ರು. 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಆಕ್ಷನ್ ನಡೆಯಲಿರೋ ಹೊತ್ತಲ್ಲೇ ಕನ್ನಡಿಗ ಕರುಣ್ ನಾಯರ್ ಅಬ್ಬರಿಸಿದ್ದು, ಎಲ್ಲರ ಗಮನ ಸೆಳೆದಿದೆ. ಹಾಗಾಗಿ ಕರುಣ್ ನಾಯರ್ ಅವರನ್ನು ಖರೀದಿ ಮಾಡಲು ಆರ್ಸಿಬಿ ಪ್ಲಾನ್ ಮಾಡಿಕೊಂಡಿದೆ ಎಂದು ತಿಳಿದು ಬಂದಿದೆ.
ಕರ್ನಾಟಕದ ಕ್ರಿಕೆಟರ್ ಕರುಣ್ ನಾಯರ್. ಇವರ ಹೋಮ್ ಗ್ರೌಂಡ್ ಚಿನ್ನಸ್ವಾಮಿ ಸ್ಟೇಡಿಯಮ್. ಬೆಂಗಳೂರು ಲೋಕಲ್ ಆಗಿರೋ ಇವರು ಟಾಪ್ ಆರ್ಡರ್ ಬ್ಯಾಟರ್ ಕೂಡ ಹೌದು. ಬಿಗ್ ಹಿಟ್ಟರ್ ಎಂದು ಕಳೆದ 2 ವರ್ಷಗಳಿಂದ ಮಹಾರಾಜ ಟ್ರೋಫಿಯಲ್ಲಿ ಸಾಬೀತು ಮಾಡಿದ್ದಾರೆ. ಅವಕಾಶ ಸಿಗದೆ ಗಾಯಗೊಂಡಿರೋ ಹುಲಿಯಾಗಿರೋ ಕರುಣ್ ನಾಯರ್ ಅವರನ್ನು ಆರ್ಸಿಬಿ ಕರೆ ತಂದರೆ ಘರ್ಜಿಸೋದು ಗ್ಯಾರಂಟಿ. ಫಾಫ್ ಡುಪ್ಲೆಸಿಸ್ ಸ್ಥಾನಕ್ಕೆ ಒಳ್ಳೆಯ ಆಯ್ಕೆ ಅನ್ನೋದು ಆರ್ಸಿಬಿ ಪ್ಲಾನ್.
ಈ ಹಿಂದೆ ನನಗೆ 30 ವರ್ಷ. ನಾನು ಚೆನ್ನಾಗಿ ಆಡುತ್ತಿದ್ದೇನೆ. ಕಳೆದ ವರ್ಷದ ಮಹಾರಾಜ ಟಿ20 ನಂತರ, ನಾನು ದೇಶೀಯ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ತೋರಿದ್ದೇನೆ. 2023-24ರ ರಣಜಿ ಟ್ರೋಫಿ ಫೈನಲ್ ತಲುಪಿದ್ದ ವಿದರ್ಭ ತಂಡದ ಪರ 690 ರನ್ ಗಳಿಸಿದ್ದೆ. 2023ರ ಮಹಾರಾಜ ಟ್ರೋಫಿ ಲೀಗ್ನಲ್ಲೂ ಅತೀ ಹೆಚ್ಚು ರನ್ ಗಳಿಸಿದ್ದೆ. ಆದ್ರೂ ನನಗೆ ಐಪಿಎಲ್ನಲ್ಲಿ ಅವಕಾಶ ಸಿಗಲಿಲ್ಲ ಎಂದು ಕರುಣ್ ನಾಯರ್ ಕಣ್ಣೀರಿಟ್ಟಿದ್ದರು.