ಬೆಂಗಳೂರು: ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಪಾಲಿಕೆಗೆ ನಿರೀಕ್ಷಿತ ಮಟ್ಟದಲ್ಲಿ ಬಜೆಟ್ ಮಂಡಿಸಲು ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ ಅಳೆದು ತೂಗಿ ಅಭಿವೃದ್ಧಿ ಕಾರ್ಯಗಳಿಗೆ ಬಜೆಟ್ ನಲ್ಲಿ ಪಾಲಿಕೆ ಶಂಕು ಸ್ಥಾಪನೆ ಮಾಡಿದೆ. ಡಿಸಿಎಂ ಡಿಕೆ ಬೆಂಗಳೂರು ಅಭಿವೃದ್ಧಿ ಸಚಿವರಾದ ಬಳಿಕ ಘೋಷಿಸಿದ ಬ್ಯ್ರಾಂಡ್ ಬೆಂಗಳೂರು ಪರಿಕಲ್ಪನೆಯಲ್ಲೇ ಈ ಬಾರಿಯ ಬಜೆಟ್ ರೂಪುಗೊಳಿಸಲಾಗಿದೆ. ಈ ಬಾರಿ 12,369.46 ಕೋಟಿ ಮೊತ್ತದ ಬಜೆಟ್ ಪಾಲಿಕೆ ಮಂಡಿಸಿದೆ. ಇದು ಕಳೆದ ಬಾರಿಗಿಂತ 10% ಅನ್ನೋದು ವಿಶೇಷ.
ಕೇಂದ್ರ ಬಜೆಟ್, ರಾಜ್ಯ ಬಜೆಟ್ ಮಂಡನೆ ಆಯ್ತು ಈಗ ಬಿಬಿಎಂಪಿ ಬಜೆಟ್ ಕೂಡ ಮಂಡನೆಯಾಯ್ತು. ಸತತ ನಾಲ್ಕು ವರ್ಷ ಚುನಾಯಿತಾ ಪ್ರತಿನಿಧಿಗಳಿಲ್ಲದೆ ಅಧಿಕಾರಿಗಳೇ ಬಜೆಟ್ ಮಂದನೆ ಮಾಡಿದ್ದು, ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆ ಸಾಕಾರಕ್ಕೆ 8 ವಿಭಾಗಗಳಾಗಿ ಮಾಡಲಾಗಿದೆ. ಈ ಸಲ 12,370 ಕೋಟಿ ರೂಪಾಯಿಯ ಮುಂಗಡ ಪತ್ರವನ್ನು ಹಣಕಾಸು ವಿಭಾಗದ ವಿಶೇಷ ಆಯುಕ್ತ ಶಿವಾನಂದ ಕಲಕೇರಿ ಮಂಡಿಸಿದರು. ಕಳೆದ ವರ್ಷಕ್ಕಿಂತ ಈ ಬಾರಿಯ ಬಜೆಟ್ 484 ಕೋಟಿ ರೂ. ಹೆಚ್ಚಾಗಿದೆ.
![Demo](https://ainlivenews.com/wp-content/uploads/2023/12/spoorthi-1.jpg)
ಬಿಬಿಎಂಪಿ ಬಜೆಟ್ ಹೈಲೇಟ್ಸ್ !!
* 12369.46 ಕೋಟಿ ಮೊತ್ತದ ಬಜೆಟ್
* 6661 ಕೋಟಿ ಸಾರ್ವಜನಿಕ ಅಭಿವೃದ್ಧಿ ಕಾಮಾಗಾರಿಗಳಿಗೆ ಮೀಸಲು
* 2271 ಕೋಟಿ ಕಾರ್ಯಚಾರಣೆ ಹಾಗೂ ನಿರ್ವಾಹಣೆ ವೆಚ್ಚ
* 1607 ಕೋಟಿ ಸಿಬ್ಬಂದಿ ವೆಚ್ಚ
* 389 ಕೋಟಿ ಆಡಳಿತಾತ್ಮಕ ವೆಚ್ಚ
* 527 ಕೋಟಿ ಠೇವಣಿ ಮತ್ತು ಕರ ಮತು ಪಾವತಿ/ವೆಚ್ಚ
* ಆಸ್ತಿ ತೆರಗೆಯಿಂದ 4470 ಕೋಟಿ ಆದಾಯ ನಿರೀಕ್ಷೆ
* ತೆರಿಗೆಯೇತರ ಆದಾಯ 3097.91 ಕೋಟಿ ನಿರೀಕ್ಷೆ
* ರಾಜ್ಯ ಸರ್ಕಾರದಿಂದ 3589.58 ಕೋಟಿ ರೂ ನಿರೀಕ್ಷೆ
* ಕೇಂದ್ರ ಸರ್ಕಾರದಿಂದ 488 ಕೋಟಿ ರೂ ನಿರೀಕ್ಷೆ
* ಅಸಾಧಾರಣ ಆದಾಯದಿಂದ 724 ಕೋಟಿ ಆದಾಯ ನಿರೀಕ್ಷೆ
ಬಿಬಿಎಂಪಿಯ ಬಜೆಟನಲ್ಲಿ ಸಾಕಷ್ಟು ನಿರೀಕ್ಷೆಗಳಿದ್ದವು. ಅದರಲ್ಲೂ ಬಜೆಟ್ನಲ್ಲಿ ಬ್ರಾಂಡ್ ಬೆಂಗಳೂರಿಗೆ 1,580 ಕೋಟಿ ಅನುದಾನ ಮೀಸಲು ಇರಿಸಲಾಗಿದೆ. ಆಸ್ತಿ ತೆರಿಗೆ ಕಾಯ್ದೆ ತಿದ್ದುಪಡಿ ಹಿನ್ನೆಲೆ ಈ ಸಾಲಿನಲ್ಲಿ 15 ಲಕ್ಷ ಜನರಿಗೆ ಸುಮಾರು 2,500 ಕೋಟಿ ಮನ್ನಾ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಬಜೆಟ್ನಲ್ಲಿ ಜಾಹೀರಾತು ನಿಯಮ ಜಾರಿ ಘೋಷಿಸಲಾಗಿದ್ದು, 2024-25ನೇ ಸಾಲಿನಲ್ಲಿ ಜಾಹೀರಾತು ಪಾಲಿಸಿ ಜಾರಿ ಮಾಡಿ 500 ಕೋಟಿ ಆದಾಯ ನಿರೀಕ್ಷೆ ಹೊಂದಲಾಗಿದೆ.
ಬಿಬಿಎಂಪಿ ಬಜೆಟ್ನಲ್ಲಿ ಪೌರಕಾರ್ಮಿಕರಿಗೆ ಗುಡ್ ನ್ಯೂಸ್ ನೀಡಲಾಗಿದ್ದು, 16 ಸಾವಿರ ಪೌರ ಕಾರ್ಮಿಕರ ನೇರ ನೇಮಕಾತಿಗೆ ಹಸಿರು ನಿಶಾನೆ ತೋರಿಸಲಾಗಿದೆ. ಇಷ್ಟು ವರ್ಷಗಳ ಕಾಲ ಪೌರಕಾರ್ಮಿಕರ ಕೂಗು ಯಾರಿಗೂ ಕೇಲಿಸುತ್ತಿರಲಿಲ್ಲ. ಇದೀಗ ಬಿಬಿಎಂಪಿ ಪೌರಕಾರ್ಮಿಕರ ನೇರ ನೇಮಕಾತಿಗೆ ಇಂದಿನ ಬಜೆಟ್ ಅಲ್ಲಿ ಗ್ರೀನ್ ಸಿಗ್ನಲ್ ಕೊಟ್ಟಿದೆ. .
ಕನಕಪುರ ಮುಖ್ಯರಸ್ತೆಯಿಂದ ಬನ್ನೇರುಘಟ್ಟ ಮುಖ್ಯರಸ್ತೆ, ವಿಮಾನ ನಿಲ್ದಾಣಕ್ಕೆ ಸಂಪರ್ಕ ನೀಡುವ ಹೆಣ್ಣೂರು-ಬಾಗಲೂರು ರಸ್ತೆ ಅಗಲೀಕರಣ ಮಾಡಲಾಗುವುದು ಎಂದು ಬಜೆಟ್ನಲ್ಲಿ ಘೋಷಣೆ ಮಾಡಲಾಗಿದೆ. ವೈಟ್ ಟಾಪಿಂಗ್ಗೆ 800 ಕೋಟಿ, ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್ ಸಂಪರ್ಕ ಮೇಲ್ಸೇತುವೆಗೆ 380 ಕೋಟಿ ರೂ. ಘೋಷಿಸಲಾಗಿದೆ.
ಮೆಟ್ರೋ ಯೋಜನೆಯಲ್ಲಿ ಸಂಯುಕ್ತ ಮೆಟ್ರೋ-ರಸ್ತೆ ಮೇಲ್ಸೇತುವೆಗೆ 100ಕೋಟಿ ರೂ. ಅನುದಾನ ಘೋಷಣೆ ಮಾಡಲಾಗಿದೆ. ಇಷ್ಟೇ ಅಲ್ಲದೆ, ಬನಶಂಕರಿ ವೃತ್ತದಲ್ಲಿ ಸ್ಕೈವಾಕ್ ನಿರ್ಮಾಣ, ಬಿಎಂಟಿಸಿ, ಮೆಟ್ರೋಗೆ ಹೊಂದಿಕೊಂಡಂತೆ ಸ್ಕೈವಾಕ್ ನಿರ್ಮಾಣಕ್ಕೆ 50 ಕೋಟಿ ರೂ. ಅನುದಾನ ಘೋಷಿಸಲಾಗಿದೆ.
ಈ ಬಾರಿ ಬಜೆಟ್ ನಲ್ಲಿ ಗಮನ ಸೆಳೆದಿದ್ದು ಸುರಂಗ ಮಾರ್ಗ, ಸ್ಕೈ ಡೆಕ್ ಹಾಗೂ ರಾಜಕಾಲುವೆ ಬಫರ್ ಝೋನ್ ನಲ್ಲಿ ಜನ ಸ್ನೇಹಿ ಪಥ ಸೇರಿದಂತೆ ಕೆಲವು ಯೋಜನೆಗಳನ್ನು ಈ ಬಾರಿ ಪಾಲಿಕೆ ಘೋಷಿಸಿದೆ.
ಇನ್ನು ಪ್ರತಿ ವಾರ್ಡ್ ಗೆ 1.25 ಕೋಟಿ ಅಭಿವೃದ್ಧಿ ಅನುದಾನ ಹಾಗೂ 75 ಲಕ್ಷ ನಿರ್ವಹಣಾ ವೆಚ್ಚ ಸೇರಿದಂತೆ 225 ವಾರ್ಡ್ ಗಳಿಗೆ 450 ಕೋಟಿ ಮೀಸಲಿಡಲಾಗಿದೆ. ಬೇಸಿಗೆಗಾಲದ ನಿರ್ವಹಣೆಗಾಗಿ 50 ತೆರೆದ ಬಾವಿ, 10 ಸಾವಿರ ಕೊಳವೆ ಬಾವಿ ಪುನರುಜ್ಜೀವ ಹಾಗೂ ಸಾವಿರ ಹೊಸ ಕೊಳವೆ ಬಾವಿ ಸ್ಥಾಪನೆಗೆ 5 ಕೋಟಿ, ಹಿಂದುಳಿದ ಅಲ್ಪಸಂಖ್ಯಾತ ಹಾಗೂ ಮಂಗಳಮುಖಿಯರ ಕಲ್ಯಾಣಕ್ಕೆ ಇ ಸಾರಥಿ ಯೋಜನೆಗೆ 5 ಕೋಟಿ, ಪೌರಕಾರ್ಮಿಕ ಮಹಿಳೆಯರಿಗೆ ಹಾಗೂ ವಿಶೇಷ ಚೇತನ ಪೌರ ಕಾರ್ಮಿಕರಿಗೆ ದ್ವಿಚಕ್ರ ವಾಹನ ಖರೀದಿಗೆ 12 ಕೋಟಿ, ಸಣ್ಣ ಉದ್ದಿಮೆ ಸ್ಥಾಪಿಸಲು ಇಚ್ಛಿಸುವ ಮಂಗಳಮುಖಿಯರಿಗೆ ಹಾಗೂ ಇತರೆ ಅರ್ಥಿಕ ಹಿಂದುಳಿದ ವರ್ಗದ ಜನರಿಗೆ 1.50 ಲಕ್ಷ ಸಹಾಯ ಧನ, ನಗರದ ಹವಾಮಾನ ನಿರ್ವಹಣೆಗೆ ಬಜೆಟ್ ನಲ್ಲಿ 10 ಕೋಟಿ, ಇಂದಿರಾ ಕ್ಯಾಂಟೀನ್ ಗಾಗಿ 70 ಕೋಟಿ ಅನುದಾನ, ವೈಟ್ ಟಾಪಿಂಗ್ ಗೆ ಸರ್ಕಾರ ಘೋಷಿಸಿದ 900 ಕೋಟಿಯಲ್ಲಿ ಆರಂಭಿಕವಾಗಿ 300 ಕೋಟಿ ಅನುದಾನ, ವಿಶ್ವೇಶ್ವರಯ್ಯ ರೈಲ್ವೇಗೆ ಸಂಪರ್ಕ ಕಲ್ಪಿಸುವ ರೋಟರಿ ಫ್ಲೈ ಓವರ್ ನಿರ್ಮಾಣಕ್ಕೆ 380 ಕೋಟಿ, ಬನಶಂಕರಿಯಲ್ಲಿ TOD ಸ್ಕೈ ವಾಕ್ ಗೆ 50 ಕೋಟಿ, ನಗರದ ಕೆಳಸೇತುವೆ, ಮೇಲ್ಸೇತುವೆ ನಿರ್ವಹಣೆಗೆ 25 ಕೋಟಿ, ಲ್ಯಾಂಡ್ ಫಿಲ್ ಭೂಮಿ ಖರೀದಿಗೆ 100 ಕೋಟಿ ಹೀಗೆ ಹಲವು ವಿಭಾಗದಲ್ಲಿ ಪಾಲಿಕೆ ಮೊತ್ತ ಹಂಚಿಕೆ ಮಾಡಿ ಬಜೆಟ್ ಮಂಡಿಸಿದೆ.
ಪಾಲಿಕೆ ಮೈದಾನಗಳ ತಳಭಾಗದಲ್ಲಿ ಅಂಡರ್ ಗ್ರೌಂಡ್ ಪಾರ್ಕಿಂಗ್ ಯೋಜನೆ ಹಮ್ಮಿಕೊಳ್ಳಲಾಗಿದ್ದು, ಸರ್ಕಾರಿ ಖಾಸಗಿ ಸಹಭಾಗಿತ್ವದಲ್ಲಿ ಯೋಜನೆ ಹಮ್ಮಿಕೊಳ್ಳಲಾಗುತ್ತದೆ. ಈ ಯೋಜನೆಗೆ 5 ಕೋಟಿ ರೂ. ಅನುದಾನ ಘೋಷಿಸಲಾಗಿದೆ. ಬೆಂಗಳೂರಿನ 100 ಕಡೆಗಳಲ್ಲಿ ‘ಶಿ ಟಾಯ್ಲೆಟ್’ ನಿರ್ಮಾಣ ಮಾಡಲಿದೆ.
ಒಟ್ಟಿನಲ್ಲಿ ಇತ್ತ ಸಿ.ಎಂ ಸಿದ್ದರಾಮ್ಯ ನವರ ಮಹತ್ವಾಕಾಂಕ್ಷೆಯ ಯೋಜನೆ ಇಂದಿರಾ ಕ್ಯಾಂಟೀನ್ ಯೋಜನೆಗೆ ಕೇವಲ 70 ಕೋಟಿ ಮಾತ್ರ ಅನುದಾನ ಸಿಕ್ಕಿದೆ. ಒಂದು ಕಡೆ ಜನರ ಕೆಂಗಣ್ಣಿಗೆ ಗುರಿಯಾಗಿದ್ರೆ ಬ್ರ್ಯಾಂಡ್ ಬೆಂಗಳೂರಿಗೆ ಬಂಪರ್ ಕೊಡುಗೆ ಸಿಕ್ಕಿದೆ. ಬ್ರ್ಯಾಂಡ್ ಕೇವಲ ಹೆಸರಿಗೆ ಉಳಿಯುತ್ತಾ ಅಭಿವೃದ್ದಿ ಆಗುತ್ತಾ ಕಾದು ನೋಡಬೆಕಿದೆ.
![](https://ainlivenews.com/wp-content/uploads/2024/01/Ad-Banner-copy-scaled.jpg)