ಬೆಂಗಳೂರು: ಇಂದು ರಾಜ್ಯದಾದ್ಯಂತ ಕುಮಾರಷಷ್ಟಿ ಸಂಭ್ರಮಾಚರಣೆ.. ಇದರ ಅಂಗವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ ಘಾಟಿ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಜನಸಾಗರವೇ ಹರಿದು ಬಂದಿತ್ತು.
ಕುಮಾರಷಷ್ಡಿ ಸಂಭ್ರಮದ ಹಿನ್ನಲೆ ಚಿತ್ರನಟ -ನಟಿ ದಂಪತಿ ಘಾಟಿ ದೇವಸ್ಥಾನಕ್ಕೆ ಆಗಮಿಸಿ ಪೂಜೆ ಸಲ್ಲಿಸಿದರು.. ಚಿಕ್ಕಬಳ್ಳಾಪುರ ಮೂಲದ ಹರಿಪ್ರಿಯಾ ಮತ್ತು ಕಂಚಿನಕಂಠದ ಪ್ರತಿಭೆ ವಸಿಷ್ಠ ಘಾಟಿಕ್ಷೇತ್ರಕ್ಕೆ ಮದುವೆ ನಂತರ ಇದೇ ಮೊದಲ ಭೇಟಿ ಎನ್ನಲಾಗಿದೆ.
ಸಹಜ ಭಕ್ತರಂತೆ ಸುಬ್ರಹ್ಮಣ್ಯ ಸ್ವಾಮಿಗೆ ವಸಿಷ್ಠ ಸಾಷ್ಟಾಂಗ ನಮನ ಸಲ್ಲಿಸಿದರು.. ನೆಚ್ಚಿನ ನಟ ಮತ್ತು ನಟಿಯ ಜೊತೆ ಸೆಲ್ಫಿ ತೆಗೆದುಕೊಳ್ಳಲು ಜನ ಮುಗಿಬಿದ್ದರು..