ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ ಕಾಮಕಾಂಡದ ವಿಡಿಯೋ ದೌರ್ಜನ್ಯ ಕೇಸ್ ದಿನಕ್ಕೊಂದು ಟ್ವಿಸ್ಟ್ ಪಡೆಯುತ್ತಿದೆ. ಮಾಜಿ ಸಿಎಂ ಕುಮಾರಸ್ವಾಮಿ- ಡಿಕೆ ಬ್ರದರ್ಸ್ ನಡುವಿನ ಟಾಕ್ ವಾರ್ ಮುಂದುವರೆಯತ್ತಲೇ ಇದ್ದು ಈ ಮಧ್ಯೆ ಸಿಎಂ ಸಿದ್ದರಾಮಯ್ಯ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದು ರಾಜತಾಂತ್ರಿಕ ಪಾಸ್ ಪೋರ್ಟ್ ರದ್ದುಗೊಳಿಸುವಂತೆ ಮನವಿ ಮಾಡಿದ್ದಾರೆ. ಗೃಹ ಸಚಿವ ಪರಮೇಶ್ವರ್ ಸಹ ಪ್ರಜ್ವಲ್ ನ ವಿದೇಶದಿಂದ ಕರೆಸುವ ಸುಳಿವು ನೀಡಿದ್ದಾರೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಾಯಕರ ಮಧ್ಯೆ ಟಾಕ್ ವಾರ್ ಮುಂದುವರೆಯುತ್ತಿದ್ದು ಬಿಜೆಪಿ ನಾಯಕರು ಪ್ರಜ್ವಲ್ ದೇಶ ಬಿಟ್ಟು ಹೋಗಲು ಸಹಕರಿಸಿದ್ದೆ ಕಾಂಗ್ರೆಸ್ ನವರು, ಕೈ- ದಳ ಮೈತ್ರಿಯ ಸಂಸದ ಎನ್ನುತ್ತಿದ್ದಾರೆ.
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಕಾಮಕಾಂಡದ ವಿಡಿಯೋ ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆಯುತ್ತಿದೆ. SIT ತನಿಖೆಯನ್ನು ಚುರುಕುಗೋಳಿಸಿ ನೋಟೀಸ್ ಕೊಡ್ತಿದ್ದಂತೆ ತನಿಖೆಯ ದಿಕ್ಕು ಬದಲಾಗ್ತಿದೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಾಯಕರ ಮಧ್ಯೆ ಟಾಕ್ ವಾರ್ ಜೋರಾಗ್ತಿದೆ. ಬಿಜೆಪಿ ಮುಖಂಡ ರಾಜೇಗೌಡ ಸಿಡಿಸಿರೋ ಬಾಂಬ್ ವಾಕ್ಸಮರಕ್ಕೆ ವೇದಿಕೆಯಾಗಿದೆ, ಈ ಮಧ್ಯೆ ಸಿಎಂ ಸಿದ್ದರಾಮಯ್ಯ ಪ್ರಧಾನಿ ಮೋದಿಗೆ ಪತ್ರ ಬತೆದು ವಿದೇಶೀ ರಾಜತಾಂತ್ರಿಕ ಬಿಕ್ಕಟ್ಟು ಬಗೆಹರಿಸುವಂತೆ ಮನವಿ ಮಾಡಿದ್ದಾರೆ..
ಮೋದಿಗೆ ಸಿದ್ದರಾಮಯ್ಯ ಬರೆದಿರೋ ಪತ್ರದ ವಿಚಾರ ನೋಡೋದಾದ್ರೆ ಪ್ರಜ್ವಲ್ ರೇವಣ್ಣ ಹಾಸನದ ಸಂಸದ ಮತ್ತು ಎನ್ ಡಿಎ ಅಭ್ಯರ್ಥಿ. ಅಸಂಖ್ಯಾತ ಮಹಿಳೆಯರ ಮೇಲೆ ಲೈಂಗಿಕ ಶೋಷಣೆ ಮಾಡಿದ್ದಾರೆ, ಈ ಗಂಭೀರ ಪ್ರಕರಣದ ಬಗ್ಗೆ ನಿಮಗೂ ತಿಳಿದಿರಬಹುದು. ನಾವು ಎಸ್ ಐಟಿ ರಚಿಸಿದ್ದೇವೆ ಈಗಾಗಲೇ ತನಿಖೆಯನ್ನು ಪ್ರಾರಂಭಿಸಿದೆ, ವಿಚಾರ ಹೊರ ಬಿದ್ದ ಕೂಡಲೆ ಪ್ರಜ್ವಲ್ ವಿದೇಶಕ್ಕೆ ತೆರಳಿದ್ದಾರೆ. ರಾಜತಾಂತ್ರಿಕ ಪಾಸ್ ಪೋರ್ಟ್ ನಲ್ಲೆ ವಿದೇಶಿ ಪ್ರವಾಸ ಮಾಡುತ್ತಿದ್ದಾರೆ ಈ ಬಗ್ಗೆ ನಮಗೆ ಮಾಹಿತಿ ತಿಳಿದು ಬಂದಿದೆ.
ಉದ್ಯೋಗ ಆಕಾಂಕ್ಷಿಗಳೇ ಗಮನಿಸಿ.. BBMPಯಲ್ಲಿ 11,307 ಗ್ರೂಪ್ ಡಿ ಹುದ್ದೆಗಳು ಖಾಲಿ ಇದೆ..! ಇಂದೇ ಅರ್ಜಿ ಸಲ್ಲಿಸಿ
ಎಸ್ ಐಟಿ ತನಿಖೆ ನಡೆಯುತ್ತಿರುವ ಸಂಬಂಧ ಅವರನ್ನ ಈ ದೇಶಕ್ಕೆ ವಾಪಾಸ್ ಕರೆತರಬೇಕು, ದೇಶದ ಕಾನೂನಿನ ಪ್ರಕಾರ ತನಿಖೆ ವಿಚಾರಣೆ ನಡೆಸಬೇಕು ಹಾಗಾಗಿ ಪ್ರಜ್ವಲ್ ರೇವಣ್ಣ ರಾಜತಾಂತ್ರಿಕ ಪಾಸ್ ಪೋರ್ಟ್ ರದ್ದುಗೊಳಿಸಿ. ಪ್ರಜ್ವಲ್ ಕರೆತರಲು ಬೇಕಾದ ಎಲ್ಲಾ ರೀತಿಯ ನೆರವು ಹಾಗೂ ಮಾಹಿತಿಯನ್ನ ನಮ್ಮ ಎಸ್ ಐಟಿ ತಂಡಕ್ಕೆ ಒದಗಿಸಲು ಸಹಕರಿಸಿ ಅಂತ ಮನವಿ ಮಾಡಿದ್ದಾರೆ.
ಇನ್ನು ಇದೇ ವಿಚಾರವಾಗಿ ಮಾತನಾಡಿದ ಗೃಹ ಸಚಿವ ಪರಮೇಶ್ವರ್ SIT ಅವರು ಈಗಾಗಲೇ ನೊಟೀಸ್ ಜಾರಿ ಮಾಡಿದ್ದಾರೆ ಅವರು ಹೊರಗೆ ಹೋಗಿರೋ ಬಗ್ಗೆ ಏರ್ ಟಿಕೆಟ್,ಮಾಹಿತಿ ಎಲ್ಲಾ ಇದೆ. ವಾಪಸ್ ಕರೆದುಕೊಂಡು ಬರೋದಕ್ಕೆ ಏನು ಕ್ರಮ ಆಗಬೇಕೋ ಅದನ್ನ SIT ಮಾಡುತ್ತದೆ,ಇದಕ್ಕೆ ಕೇಂದ್ರ ಸರ್ಕಾರದ ಸಹಕಾರವೂ ಬೇಕಾಗುತ್ತೆ. ಯಾವ ಪ್ರೊಸಿಸರ್ ಮಾಡಬೇಕು ಅಂತ SIT ಗೆ ಬಿಟ್ಟಿದ್ದು ಅಂತ ಹೇಳಿದ್ದಾರೆ ಪರಮೇಶ್ವರ್.
ಮೋದಿಗೆ ಸಿದ್ದರಾಮಯ್ಯ ಬರೆದಿರೋ ಪತ್ರದ ವಿಚಾರ ನೋಡೋದಾದ್ರೆ ಪ್ರಜ್ವಲ್ ರೇವಣ್ಣ ಹಾಸನದ ಸಂಸದ ಮತ್ತು ಎನ್ ಡಿಎ ಅಭ್ಯರ್ಥಿ. ಅಸಂಖ್ಯಾತ ಮಹಿಳೆಯರ ಮೇಲೆ ಲೈಂಗಿಕ ಶೋಷಣೆ ಮಾಡಿದ್ದಾರೆ, ಈ ಗಂಭೀರ ಪ್ರಕರಣದ ಬಗ್ಗೆ ನಿಮಗೂ ತಿಳಿದಿರಬಹುದು.ನಾವು ಎಸ್ ಐಟಿ ರಚಿಸಿದ್ದೇವೆ ಈಗಾಗಲೇ ತನಿಖೆಯನ್ನು ಪ್ರಾರಂಭಿಸಿದೆ, ವಿಚಾರ ಹೊರ ಬಿದ್ದ ಕೂಡಲೆ ಪ್ರಜ್ವಲ್ ವಿದೇಶಕ್ಕೆ ತೆರಳಿದ್ದಾರೆ.
ರಾಜತಾಂತ್ರಿಕ ಪಾಸ್ ಪೋರ್ಟ್ ನಲ್ಲೆ ವಿದೇಶಿ ಪ್ರವಾಸ ಮಾಡುತ್ತಿದ್ದಾರೆ ಈ ಬಗ್ಗೆ ನಮಗೆ ಮಾಹಿತಿ ತಿಳಿದು ಬಂದಿದೆ. ಎಸ್ ಐಟಿ ತನಿಖೆ ನಡೆಯುತ್ತಿರುವ ಸಂಬಂಧ ಅವರನ್ನ ಈ ದೇಶಕ್ಕೆ ವಾಪಾಸ್ ಕರೆತರಬೇಕು, ದೇಶದ ಕಾನೂನಿನ ಪ್ರಕಾರ ತನಿಖೆ ವಿಚಾರಣೆ ನಡೆಸಬೇಕು ಹಾಗಾಗಿ ಪ್ರಜ್ವಲ್ ರೇವಣ್ಣ ರಾಜತಾಂತ್ರಿಕ ಪಾಸ್ ಪೋರ್ಟ್ ರದ್ದುಗೊಳಿಸಿ. ಪ್ರಜ್ವಲ್ ಕರೆತರಲು ಬೇಕಾದ ಎಲ್ಲಾ ರೀತಿಯ ನೆರವು ಹಾಗೂ ಮಾಹಿತಿಯನ್ನ ನಮ್ಮ ಎಸ್ ಐಟಿ ತಂಡಕ್ಕೆ ಒದಗಿಸಲು ಸಹಕರಿಸಿ ಅಂತ ಮನವಿ ಮಾಡಿದ್ದಾರೆ..