ಶಿವಮೊಗ್ಗ: ಗೀತಾ ಶಿವರಾಜ್ ಕುಮಾರ್ ಚುನಾವಣೆಯಲ್ಲಿ ಗೆಲ್ಲುವ ಮೂಲಕ ನಮ್ಮ ತಂದೆಯ ಸೋಲಿನ ಸೇಡು ತಿರಿಸಿಕೊಳ್ಳಬೇಕಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. ನಗರದಲ್ಲಿ ಮಾತನಾಡಿದ ಅವರು, ‘ಗೀತಕ್ಕ ಅವರನ್ನು ನಾವು ನಿಮ್ಮ ಮಡಿಲಿಗೆ ಹಾಕಿದ್ದೇವೆ. ಶಿವಮೊಗ್ಗ ಜಿಲ್ಲೆಯ ಧ್ವನಿಯಾಗಿ ಗೀತಾ ಕೆಲಸ ಮಾಡುತ್ತಾರೆ ಎಂದು ಗೀತಾ ಶಿವರಾಜ್ ಕುಮಾರ್ ಪರ ಮತಯಾಚನೆ ಮಾಡಿದರು.
ಇನ್ನು ತಂದೆಯ ಭ್ರಷ್ಟಾಚಾರ ಹಣದಿಂದ ರಾಘವೇಂದ್ರ ಎಂಪಿ ಆಗಿದ್ದಾರೆ. ನಮ್ಮ ತಂದೆಯವರು ಯಾವುದೇ ಇಂತಹ ದುಡ್ಡು ಮಾಡಿಲ್ಲ. ಚೋಟಾ ಸಹಿ ಮೂಲಕ ನಾನು ಯಾರನ್ನೂ ಜೈಲಿಗೆ ಕಳಿಸಿಲ್ಲ. ಪರೋಕ್ಷ ವಾಗಿ ಮಕ್ಕಳೇ ಬಿಎಸ್ವೈ ಅವರನ್ನು ಜೈಲಿಗೆ ಕಳುಹಿಸಿದ್ದು ಎಂದು ಸಚಿವ ಮಧು ಕಿಡಿಕಾರಿದರು.
ನಿಮಗೆ ಗೊತ್ತೇ.? ಡಿಪ್ರೆಶನ್ʼನಿಂದ ಹೊರಬರಲು ಜಾಗಿಂಗ್, ಯೋಗ ಮಾಡಿದ್ರೆ ಸಾಕಂತೆ
ಗೀತಾ ಶಿವರಾಜ್ ಕುಮಾರ್ ಚುನಾವಣೆಯಲ್ಲಿ ಗೆಲ್ಲಬೇಕು. ಶಿವಮೊಗ್ಗ ಜಿಲ್ಲೆಯ ಧ್ವನಿ ಆಗಿ ಅವರು ಕೆಲಸ ಮಾಡುತ್ತಾರೆ. ಅವರನ್ನು ನಿಮ್ಮ ಮಡಲಿಗೆ ಹಾಕಿದ್ದೇವೆ. ಸಂಸದೆ ಆಗಿ ಗೆದ್ದು ಶಿವಮೊಗ್ಗ ಕ್ಷೇತ್ರದಲ್ಲಿ ಐದು ವರ್ಷ ಸೇವೆ ಸಲ್ಲಿಸುತ್ತಾರೆ. ಮಾಜಿ ಸಿಎಂ ಎಸ್ ಬಂಗಾರಪ್ಪ ಅವರ ಧ್ವನಿ ಆಗಿ ಗೀತಾ ಶಿವರಾಜ್ ಕುಮಾರ್ ಕೆಲಸ ಮಾಡುವ ವಿಶ್ವಾಸ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.