ಕೊಪ್ಪಳ:- ಗಾಲಿ ಜನಾರ್ಧನ್ ರೆಡ್ಡಿ ಅವರು ಕೊಪ್ಪಳದಲ್ಲಿ ಮಾತಾಡುವಾಗ ಸಿದ್ದರಾಮಯ್ಯ (Siddaramaiah) ಮತ್ತು ಡಿಕೆ ಶಿವಕುಮಾರ್ (DK Shivakumar) ಗುಣಗಾನ ಮಾಡಿದರು. ಕ್ಷೇತ್ರದ ಸಲುವಾಗಿ ತಾನು ಯಾವುದೇ ಬೇಡಿಕೆ ತೆಗೆದುಕೊಂಡು ಹೋದಾಗ ಅವರಿಬ್ಬರು ಬಹಳ ಚೆನ್ನಾಗಿ ಸ್ಪಂದಿಸಿದ್ದಾರೆ ಎಂದು ಹೇಳಿದರು.
ನಿನ್ನೆ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅಂಜನಾದ್ರಿ ಕ್ಷೇತ್ರದ ಅಭಿವೃದ್ಧಿಗೆ ರೂ. 100 ಕೋಟಿ ಘೋಷಿಸಿರುವುದು ರೆಡ್ಡಿಯವಲ್ಲಿ ಸಂತಸ ಮೂಡಿದೆ. ಹನುಮ ಜನುಮ ಸ್ಥಳ ಅಂಜನಾದ್ರಿ ಒಂದು ಪುಣ್ಯಕ್ಷೇತ್ರವಾಗಿ ಮಾಡಲು ಅವರು ಸರ್ಕಾರವನ್ನು ಆಗ್ರಹಿಸಿದ್ದು ಸತ್ಯ ಮತ್ತು ಮುಖ್ಯಮಂತ್ರಿ ಅವರ ಬೇಡಿಕೆಯನ್ನು ಮನ್ನಿಸಿದ್ದಾರೆ. ಹಾಗಾಗಿ ಅವರ ಧೋರಣೆಯಲ್ಲಿ ಬದಲಾವಣೆಯೇ? ಶಿವಕುಮಾರ್ ಮತ್ತು ತನ್ನ ನಡುವೆ ಕಳೆದ ಎರಡೂವರೆ ದಶಕಗಳಿಂದ ಸ್ನೇಹವಿದೆ, ಆದರೆ ಹಾಗಂತ ತಾನು ಕಾಂಗ್ರೆಸ್ ಪಕ್ಷ ಸೇರುತ್ತೇನೆ ಅಂತ ಯಾರೂ ಭಾವಿಸಬಾರದು, ತಾನು ಬಿಜೆಪಿ ಮತ್ತು ಕಾಂಗ್ರೆಸ್-ಎರಡನ್ನೂ ಸೇರಲ್ಲ ಎಂದು ಜನಾರ್ಧನ ರೆಡ್ಡಿ ಸ್ಪಷ್ಟವಾಗಿ ಹೇಳಿದರು.