ಅಥಣಿ:– ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ನೂತನವಾಗಿ ಆಯ್ಕೆಯಾದ ಸಂಸದೆ ಪ್ರಿಯಂಕಾ ಜಾರಕಿಹೊಳಿ ಅವರು ಅಥಣಿ ಪಟ್ಟಣಕ್ಕೆ ಪ್ರಥಮ ಬಾರಿಗೆ ಆಗಮಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಂಖಡ ಗಜಾನನ ಮಂಗಸೂಳಿ ಅವರು ಸಂಸದೆ ಪ್ರಿಯಂಕಾ ಜಾರಕಿಹೊಳಿ ಅವರಿಗೆ ಸತ್ಕರಿಸಿ ಸನ್ಮಾನಿಸಿದರು.
World Cup 2024: ವಿಶ್ವಕಪ್ ನಲ್ಲಿ ವಿಶೇಷ ಸಾಧನೆ ಮಾಡಿದ ಹಾರ್ದಿಕ್ ಪಾಂಡ್ಯ..!?
ಈ ಸಂದರ್ಭದಲ್ಲಿ ಮಾತನಾಡಿದ ಸಂಸದೆ ನನ್ನ ಗೆಲುವಿಗೆ ಶ್ರಮಿಸಿದ ಕಾರ್ಯಕರ್ತರಿಗೂ ಹಾಗೂ ಮತಹಾಕಿದ ಮತದಾರಿಗೂ ಯಾವತ್ತೂ ಚಿರ ಋಣಿ ಯಾಗಿತ್ತೇವೆ.ಲೋಕಸಭಾ ವ್ಯಾಪ್ತಿಯಲ್ಲಿ ಇರುವ ಸಮಸ್ಯೆಗಳನ್ನ ಹೋಗಲಾಡಿಸಲು ಪ್ರಯತ್ನ ಪಡುದರ ಜೊತೆಗೆ ಮಾದರಿ ಕ್ಷೇತ್ರ ಮಾಡುವೆ ಎಂದು ಭರವಸೆ ನೀಡಿದರು
ತದ ನಂತರ ಮುಖಂಡ ಗಜಾನನ ಮಂಗಸೂಳಿ ಮಾತನಾಡಿ, ಪ್ರಿಯಾಂಕಾ ಜಾರಕಿಹೊಳಿ ಅವರು ಸಮಾಜಸೇವೆಯನ್ನ ಸಹ ಮಾಡಿದ್ದಾರೆ ಅದರ ಜೊತೆಗೆ ರಾಜಕೀಯ ಅನುಭವ ಸಹ ಇದೆ.ಜನರ ಸಮಸ್ಯೆಗೆ ದ್ವನಿಯಾಗತ್ತಾರೆ ಎಂಬ ಭರವಸೆಯಿದೆ.ಅತೀ ಚಿಕ್ಕ ವಯಸ್ಸಿನಲ್ಲೇ ಲೋಕಸಭಾ ಸಂಸದರಾಗಿ ಆಯ್ಕೆಯಾಗಿದ್ದು ಹೆಮ್ಮೆಯ ಪಡುವ ವಿಷಯವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.