ಗದಗ:- ಬಿಸಿಲ ಧಗೆಗೆ ಗದಗ ಮಂದಿ ಬೆಂದು ಬಳಲಿ ಹೋಗಿದ್ದಾರೆ. ವರ್ಷಕ್ಕಿಂತ ವರ್ಷಕ್ಕೆ ತಾಪಮಾನ ಜಾಸ್ತಿ ಆಗ್ತಿದ್ದು, ಮನೆಯಿಂದಲೂ ಹೊರ ಬರಲಾರದಂತಹ ಸ್ಥಿತಿ ಎದುರಾಗಿದೆ. ಆದರೆ ಸಾರಿಗೆ ನಗರದಲ್ಲಿ ಮಾತ್ರ ಕೂಲ್ ಕೂಲ್ ವಾತಾವರಣ ಇದ್ದು, ಮರ ಬೆಳೆಸಿ ಪರಿಸರ ಉಳಿಸಿ ಅಂತಾ ಸಾರಿಗೆ ನಗರದ ಜನ ಪಣ ತೊಟ್ಟಿದ್ದಾರೆ.
ಹೀಗಾಗಿ ಈ ಪರಿಸರ ಪ್ರೇಮಿಗಳು ಎಲ್ಲರಿಗೂ ಮಾದರಿಯಾಗಿದ್ದಾರೆ. ಇಡೀ ಕಾಲೋನಿ ತುಂಬೆಲ್ಲಾ ಹಸಿರೇ ಹಸಿರು ಇದ್ದು, ಗದಗ ತಾಲೂಕಿನ ಕಳಸಾಪೂರ ಗ್ರಾಮದ ಸಾರಿಗೆ ನಗರದ ಜನರ ಪರಿಸರ ಕಾಳಜಿ ಇಡೀ ರಾಜ್ಯಕ್ಕೇ ಮಾದರಿ ಆಗಿದೆ
ಪ್ರತಿ ಮನೆ ಮುಂದೆ ನಾಲ್ಕೈದು ವಿವಿಧ ಜಾತಿಯ ಹೂ, ಹಣ್ಣು, ತೆಂಗು ಬೆಳೆಸೋ ಮೂಲಕ ಪರಿಸರ ಜಾಗೃತಿ ಮೂಡಿಸುತ್ತಿದ್ದಾರೆ. ನಾ ಮುಂದೆ ತಾ ಮುಂದೆ ಅಂತಾ ಗಿಡ ಮರ ಬೆಳೆಸಿ ಹಸೀರೀಕರಣಕ್ಕೆ ಜನ ಪಣ ತೊಟ್ಟಿದ್ದಾರೆ ಗಿಡ ಮರಗಳನ್ನೇ ತಮ್ಮ ಮನೆ ದೇವರಂತೆ ಜನತೆ ಕಾಣುತ್ತಿದ್ದಾರೆ.
ಇಡೀ ಏರಿಯಾದಲ್ಲಿ ಯಾವುದೇ ಕಾರ್ಯಕ್ರಮ ನಡೆದ್ರೂ ಗಿಡ ನೆಡೋ ಮೂಲಕ ಪರಿಸರ ಕಾಳಜಿ ವಹಿಸಲಾಗಿದೆ. ಹೊರಗಿನ ಉಷ್ಣಾಂಶಕ್ಕಿಂತ ಸಾರಿಗೆ ನಗರದ ವಾತಾವರಣ ಡಿಫರೆಂಟ್ ಆಗಿದೆ ಸಾರಿಗೆ ನಗರದ ಹೊರಗೆ ಬಿಸಿ, ಬಿಸಿಲು, ಉಷ್ಣಾಂಶ ಇದ್ದು, ಆದ್ರೆ ಸಾರಿಗೆ ನಗರ ಎಂಟ್ರಿ ಆಗ್ತಿದ್ದಂತೆ ಕೂಲ್ ಕೂಲ್ ವಾತಾವರಣ ಇದೆ.
ಒಂದು ಸಣ್ಣ ಕಾಡಿನಂತೆ ಇಡೀ ಏರಿಯಾ ಗೋಚರಿಸಿದೆ. ಕಾಂಕ್ರೀಟ್ ಕಾಡಿಗೆ ಫುಲ್ ಡಿಫರೆಂಟ್ ಆಗಿದೆ ಸಾರಿಗೆ ನಗರ. ಕಾಂಕ್ರೀಟ್ ಮಧ್ಯೆ ಹಸಿರ ಹೊದಿಕೆ ಇದ್ದು, ಸಾರಿಗೆ ನಗರದ ಜನಕ್ಕೆ ಪರಿಸರ ಪ್ರೇಮಿಗಳು ಸಲಾಂ ಅಂತಿದ್ದಾರೆ.